Total Pageviews

Monday, November 28, 2011

(ಚಂಪಾಗೆ ಪಂಪ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಅವರ ಮಹತ್ವದ ಕೃತಿಯೊಂದರ ರಸದೌತನ ಕನ್ನಡಿಗರಿಗೆ)

                               ಚಂಪಾ ಚುಂಬಿಸಿದ ‘ಅರ್ಧ ಸತ್ಯದ ಹುಡುಗಿ’

ವ್ಯಕ್ತಿ ಸಾಯುವುದರೊಂದಿಗೆ ಸತ್ಯದ ಪ್ರಯಾಣ ನಿಂತುಹೋಗುತ್ತದೆ ಎಂದು ಯಾರು ಹೇಳುತ್ತಾರೆ. ಇನ್ನರ್ಧ ಸತ್ಯದ ಪೀಠಿಕೆ ಪ್ರಾರಂಭವಾಗುವುದೇ ಅಲ್ಲಿಂದ ಅಲ್ಲವೆ? ನಮ್ಮ ಶರಣರು, ಸೂಫಿಗಳು, ದಾರ್ಶನಿಕರು, ಜನಪದ ಬರಹಗಾರರು ಇದನ್ನೇ ಬೇರೆ ಬೇರೆ ಶಬ್ಧಗಳಲ್ಲಿ, ರೀತಿಗಳಲ್ಲಿ ಹಾಡಿದ್ದು, ಬರೆದದ್ದು, ಅಂಥ ಜಾತಿಯದೇ ಒಂದು ಪದ್ಯ ಹೀಗೆ

ಸಮಾಧಿಯ ಗೂಡಿನತ್ತ
ನಿರ್ಜೀವವಾಗಿ ಹೊರಟ ನನ್ನ
ಅಂತ್ಯಯಾತ್ರೆಯಲ್ಲೂ ನಾನು ಮಾತನಾಡುತ್ತಿರುತ್ತೇನೆ -

ಯಾರವು ಈ ಸಾಲುಗಳು? ಸ್ಪಷ್ಟವಾದ ನೆನಪಿಲ್ಲ. ಆದರೆ ಮತ್ತೆ ಮತ್ತೆ ನಮ್ಮನ್ನು ಚಿಂತನೆಗೀಡುಮಾಡುವ ಸಾಲುಗಳು ಇವು. ಚಿಕ್ಕ ಜಗತ್ತಿನ ಅದ್ಭುತ ಪ್ರಜ್ಞೆಯಾಗಿ ಬಾಳಿದ ಜೀವವೊಂದು ಈ ಸಾಲುಗಳನ್ನು ಹೇಳಲು ಸಾಧ್ಯ. ಇಂಥ ಶಕ್ತಿ ಒಬ್ಬ ಕವಿ, ಕಲಾವಿದ ಅಥವಾ ತತ್ವಜ್ಞಾನಿಗೆ ಮಾತ್ರ ಸಾಧ್ಯ. ಯಾಕೆಂದರೆ ಶಬ್ದಗಳಲ್ಲಿ ಮರುಹುಟ್ಟು ಬಲ್ಲ ಇವರು ಸಾವಿನ ಮುಖಕ್ಕೆ ಹೊಡೆಯುವ ಧಾರ್ಷ್ಟ್ಯ ತೋರಬಲ್ಲರು.

“ನಮ್ಮ ಲಯಬದ್ಧ ಸದ್ದುಗಳು
ಗುಡಿಸಲಲ್ಲಿ ಗುಡುಗು ಮೊಳಗಿಸುವುದಿಲ್ಲ
ನಮ್ಮ ಸ್ಪೋಟಗಳು
ಬೆಚ್ಚಗಿನ ಬಂಗಲೆಗಳ ನಡುಗಿಸುವುದಿಲ್ಲ”

ಎಂಬ ಸತ್ಯದ ಅರಿವಿನೊಂದಿಗೆ ದಲಿತ - ಬಂಡಾಯೋತ್ತರದ ಕೆಲವು ಭ್ರಮ ನಿರಸನಗಳ ನಂತರ ಬರೆದ “ಅರ್ಧ ಸತ್ಯದ ಹುಡುಗಿ” ಕವಿ ಚಂದ್ರಶೇಖರ ಪಾಟೀಲರ ಕಾವ್ಯ ಕ್ರಮಿಸಿದ ರೀತಿಯ ಪ್ರಾತಿನಿಧಿಕ ಸಂಕಲನಷ್ಟೇ ಅಲ್ಲ. ಬದಲಾಗಿ ನವ್ಯ-ನವೋತ್ತರ, ದಲಿತ-ಬಂಡಾಯ, ಕಾವ್ಯ ಘಟ್ಟಗಳ ನಂತರ ಮತ್ತೆ ಪ್ರಾರಂಭವಾದ ನವೋದಯ ನಮೂನೆಯ ಕಾವ್ಯದ ಪ್ರತಿನಿಧಿಯೂ ಹೌದು. ಉತ್ತರಾಧಿಕಾರಿ, ಪೀಠಾರೋಹಣ, ಪ್ರಾತಿನಿಧಿಕತೆಗೆಗಳಂಥ ಶಬ್ಧಗಳನ್ನು ಕೇಳಿದರೆ ಕೇರಿಯ ಕಂಡು ದೂರ ಹಾರುವ ಹಾರುವರಂತೆ ಪಾಟೀಲರು ಸಿಡಿಮಿಡಿಗೊಳ್ಳುವರಾದರೂ ಶಬ್ಧಗಳ ನನ್ನ ಮಿತಿ ಅವರನ್ನು ಈ ಪಟ್ಟಕ್ಕೆ ಆಹ್ವಾನಿಸುತ್ತದೆ. ನಿರೀಕ್ಷೆ ನಿರಪರಾಧಿಯಲ್ಲ. ಅದು ಕೆಲವೊಮ್ಮೆ ಸಾಂಪ್ರದಾಯಿಕ ಉತ್ಪತ್ತಿಯ ಸರಣಿಯನ್ನು ನಿರೀಕ್ಷಿಸುತ್ತಾ ಆ ದಾರಿಯನ್ನು ಅತಿಕ್ರಮಿಸಿದವರೆಲ್ಲರನ್ನೂ ಹುತಾತ್ಮ, ಮಹಾತ್ಮ ಅಥವಾ ಅಪರಾಧಿಯ ಅತಿರೇಕಗಳಿಗೆ ಆಪಾದಿಸಿ ಬಿಡುತ್ತದೆ.
ಕ್ರಿಯಾಶೀಲತೆ ಬದುಕಿನ ಸಂಕೇತ ಎನ್ನುವುದಾದರೆ, ಹುಟ್ಟು, ಸಾವಿನ ಪುನರ್ ನಿರ್ಮಾಣ ಎನ್ನುವುದಾದರೆ ಬರಹ ಹರಿಯುವ ಹೊಳೆಯಾಗಬೇಕು. ಇಷ್ಟೆಲ್ಲ ಪ್ರಸ್ತಾವನೆಗೆ ಕಾರಣ ಇಷ್ಟೆ ಚಂದ್ರಶೇಖರ ಪಾಟೀಲ ಒಬ್ಬ ಅಸಂಗತ ನಾಟಕಕಾರ, ಬಂಡಾಯದ ಕವಿ, ಮೂರ್ತಿಭಂಜಕ ಅಂಕಣಕಾರ ಎಂದು ಹೇಳುವ ಮಾತಿನಲ್ಲಿರುವ ಅರ್ಧಸತ್ಯವನ್ನು ಬಯಲಿಗೆಳೆಯುವುದು. ಇದನ್ನೆ ಪಾಟೀಲರು - ಕಾವ್ಯ “ಲಕ್ಷ್ಮಣ ಗೆರೆಗಳನ್ನು ಉಲ್ಲಂಘಿಸುತ್ತಲೇ ರಾವಣನೊಂದಿಗೆ ಲಂಕೆಯ ಕಡೆಗೋ ಬೆಂಕಿಯ ಉಡಿಗೋ ಜಿಗಿಯುವ ಸೀತೆಯಾಗುತ್ತಿರಬೇಕು” ಎಂದು ಅಥವಾ ನನಗೆ ನೆನಪಿರುವಂತೆ ‘ನನ್ನ ಹಾಡಿನ ಹಳ್ಳ ಎಲ್ಲಿ ಹೊರಳುವದೇನೊ! ಗಚ್ಚಿನ ಗಟಾರವನು ಕಟ್ಟಬೇಡ’ ಎಂದು ದೊಹರಾಯಿಸುತ್ತಾ ವಿಮರ್ಶೆಯ ಸೂತ್ರೀಕೃತ ಬೆಳವಣಿಗೆಯನ್ನು ಕಾವ್ಯದಲ್ಲಿ ಸಾರಾಸಗಟಾಗಿ ನಿರಾಕರಿಸುತ್ತಾರೆ. ಇಂಥ ಹಲವು ನಿರಾಕರಣೆಗಳೇ ಚಂದ್ರಶೇಖರ ಪಾಟೀಲರ ಕಾವ್ಯದ ನಿರಂತರ ವಿಷಯ ವಸ್ತುಗಳು ಹಾಗೂ ಕಾವ್ಯ ಪರಂಪರೆಯಲ್ಲಿ ಅವರ ನಿರಂತರತೆಗೆ ಕಾರಣಿಕ ಅಂಶಗಳು. ಹೀಗಾಗಿ ಅವರು ೭೦ರ ನಂತರವೂ ೨೦ರ ಹುಡುಗ.
ಎಲ್ಲ ಸಾವುಗಳು ಎಲ್ಲರನ್ನೂ ಕಾಡುವುದಿಲ್ಲ. ಆದರೆ ಸಾವನ್ನು ಇಡಿಯಾಗಿ ನೋಡಿದಾಗ ಅದು ಯಾವ ಕಾಲಕ್ಕೂ ಕಾಡದೇ ಇರುವ ಒಂದು ವಿಷಯ ಅನ್ನಿಸುವುದಿಲ್ಲ. ಇದು ಸೂಕ್ಷ್ಮ, ಸ್ಪಂದನೆಯ ಮನಸ್ಸೊಂದರ ಅಕ್ಕಪಕ್ಕದ ವಿಷಯವಾದರಂತೂ ತಾಳುವ ರೂಪವೇ ಬೇರೆ. ಎಮಿಲಿ ಡಿಕಿನ್ಸನ್, ಅಮರ್ತ್ಯಸೇನ್, ನಮ್ಮ ಮಧುರ ಚೆನ್ನ ಇವರೆಲ್ಲ ಅನವರತ ಅದರ ನೆರಳಿನಲ್ಲಿ ನರಳುತ್ತಲೇ ದೈತ್ಯ ಪ್ರತಿಭೆಗಳಾಗಿ ಬೆಳೆದು ಸಾವಿನ ಮೇಲೂ ನೆರಳು ಕೆಡವಿ ಹೋದವರು. ಇತ್ತೀಚಿನ ನಮ್ಮ ಲಂಕೇಶ ಹಾಗೂ ಡಿ. ನಾಗರಾಜ ಕೂಡಾ ಇದೇ ಸಾಲಿಗೆ ಸೇರಬೇಕಾದವರು. ಚಂದ್ರಶೇಖರ ಪಾಟೀಲರ “ಅರ್ಧ ಸತ್ಯದ ಹುಡುಗಿ” ಸ್ಮಿತಾ ಪಾಟೀಲ್ ಸತ್ತ ಕಾಲಾವಧಿಯ ಸುತ್ತ ಆಕೃತಿ ಪಡೆದ ಒಂದು ಸಂಕಲನ. ಈ ಹಾಡು ಒಂದರ್ಥದಲ್ಲಿ ಸಾವಿನ ಕವಿತೆ. ನಾಲ್ಕು ಭಾಗಗಳಲ್ಲಿ  ವಿಂಗಡಿಸಲಾಗಿರುವ ಇಲ್ಲಿಯ ಎಂಬತ್ತೆರಡು ಕವನಗಳಲ್ಲಿ ಬಹುಪಾಲು ಸಾವಿನ ಹಿನ್ನೆಲೆಯಿಂದಲೇ ಹುಟ್ಟಿದವುಗಳು - ಎಂದರೆ ಯಾರೂ ಗಾಬರಿಯಾಗಬೇಕಿಲ್ಲ. ಒಂದು ಕವಿತೆಯಂತೆ ಬದುಕಿದ್ದ ಸ್ಮಿತಾ ಪಾಟೀಲ ತೀರಿ ಹೋದಾಗ ಹುಟ್ಟಿದ “ಅರ್ಧ ಸತ್ಯದ ಹುಡುಗಿ” ಕವನದಂತೆಯೇ, ಇಲ್ಲಿಯ ಕವನಗಳು ವಿಭಿನ್ನ ಹಿನ್ನೆಲೆಗಳಲ್ಲಿ ಕನಸು, ಆದರ್ಶ, ಮಾತು, ಸಂಸ್ಕೃತಿ ಒಟ್ಟಾರೆ ಮನುಷ್ಯರು ಸತ್ತಾಗಲೂ ಹುಟ್ಟಿಕೊಂಡಿವೆ.
ಸಾವು ಒಂದು ಸರಳವಾದ ಸತ್ಯ. ಯಾವ ವಕ್ರರೇಖೆಗಳಿಗೂ ಇಲ್ಲಿ ಆಸ್ಪದವೇ ಇಲ್ಲ. ಆದರೆ ಸರಳತೆಯೇ ಸಂಕೀರ್ಣಗಿಂತ ಹೆಚ್ಚು ಕಾಡುವ ವಿಷಯ ಎಂದು ಗಾಂಧಿ ಹೇಳುತ್ತಿದ್ದ ಮಾತು ಸತ್ಯ ಎನ್ನಲು ಸಾವು ಒಂದೇ ಸಾಕು. ಕವಿ ಚಂಪಾ ಬರೆಯುತ್ತಾರೆ “ಸಾವು ನನ್ನನ್ನು ಯಾವಾಗಲೂ ಗಾಢವಾಗಿ ಕಲಕುತ್ತದೆ. ನಮ್ಮ ಬೆಕ್ಕಿರಬಹುದು, ಟಾಮಿ ಇರಬಹುದು, ಗೆಳೆಯನಿರಬಹುದು, ಸ್ಮಿತಾ ಇರಬಹುದು, ಮೊಲಾಯಿಸ್ ಇರಬಹುದು. ಹೇಳದೇ ಕೇಳದೇ ಬರುವ ಸಾವು ಅರ್ಧ ಸತ್ಯವನ್ನೇ ಅಳಿಸಿ ಹಾಕುತ್ತದೆ. ಕಂಡ ಅರ್ಧಂಬರ್ಧ ಸತ್ಯದ ಆಚೆ ಇರಬಹುದಾದ ಸತ್ಯದ ಹುಡುಕಾಟದ ತಳಮಳವೇ ಬದುಕು ನಮಗೆ ಕೊಡುವ ಬಳುವಳಿ ಇರಬಹುದೇನೋ”. ಬಿಚ್ಚಿಕೊಳ್ಳುವುದಕ್ಕಿಂತ ಬಚ್ಚಿಟ್ಟುಕೊಳ್ಳುವುದು ಹಾಗೂ ಬೆಚ್ಚುಬೀಳಿಸುವಂದರಂಥ ವಾಸ್ತವಗಳಿಗೆ ವಾಲುವ ಸಾವು ಒಂದು ಕಲಾತ್ಮಕ ವಿಷಯದ ಸುತ್ತಲೂ ಜರುಗಿದಾಗ ಆಗುವ ಪರಿಣಾಮವೇ ವಿಶೇಷ, ಎನ್ನಲು “ಅರ್ಧ ಸತ್ಯದ ಹುಡುಗಿ” ಉದಾಹರಣೆಯಾಗುತ್ತದೆ. ಒಂದು ನಿಗದಿತ ಕಾಲಘಟ್ಟದಲ್ಲಿ ಜೀವನ ಒಂದು ಪೂರ್ಣ ಸತ್ಯ ಎಂದು ಶತಮಾನಗಳಿಂದ ನಂಬಿಕೊಂಡ ಮನುಷ್ಯನಿಗೆ ಎಲ್ಲ ಅಕಾಲಿಕ ಮರಣಗಳೂ ಅರ್ಧಸತ್ಯ ಎನ್ನಿಸುತ್ತವೆ. ಇದ್ದಕ್ಕಿದ್ದಂತೆ ಹೇಳದೆ ಕೇಳದೇ ಖಾಲಿಯಾಗುವ ಸ್ಥಳದಲ್ಲಿ ಇನ್ನಾರನ್ನೋ ತಕ್ಷಣ ತುಂಬಲಾಗದ ಮನಸ್ಸು ವಿವ್ಹಲಗೊಳ್ಳುತ್ತದೆ. ಹೀಗೆ ಸಾವಿನ ಪ್ರಶ್ನೆ ಖಾಲಿತನದ, ಪುನಃಸ್ಥಾಪನೆಯ, ಅಪೂರ್ಣ ಮಾತಿನ ಪ್ರಶ್ನೆಯಾಗಿ ಮಾರ್ಪಡುತ್ತದೆ. ಇದೇ ಲೆಕ್ಕಾಚಾರ ಎನ್ನಬಹುದಾದುದು. ಸಾವು ಹೇಳಲೇಬೇಕಾದ ಸತ್ಯ ಒಂದಿದೆ. ಅದು ಭೌತಿಕ ಜಗತ್ತಿನ ಭೌದ್ಧಿಕ ಕಸರತ್ತುಗಳೆಲ್ಲ ನಿಶ್ಚಲವಾದ ಮೇಲೆ ಪ್ರಾರಂಭವಾಗುತ್ತದೆ.
“ಅರ್ಧ ಸತ್ಯದ ಹುಡುಗಿ” ಒಂದು ಕಲಸುಮೆಲೊಗರ, ಬಂಡಾಯದಿಂದ ಭಿನ್ನವಾದ ಧ್ವನಿ, ಹನಿಗವನ, ಕಿರುಗವನ, ಕೆಲವು ನೀಳ್ಗವನ, ಪದ್ಯದ ಆಕೃತಿಯಲ್ಲಿ ಇವೆ ಎಂಬ ಕಾರಣಕ್ಕೆ ಇವುಗಳನ್ನು ಪದ್ಯ ಎನ್ನಬೇಕು, ಎನ್ನಬಹುದಾದ ಕವನಗಳು. ಹೀಗೆ ಹಲವು ಪ್ರಕಾರದ ಕಾವ್ಯ ಇಲ್ಲಿ ಕಾಣಸಿಗುತ್ತವೆ. ಇಡೀ ಸಂಕಲನದ ಧ್ವನಿ ಹಾಗೂ ಭಾವವನ್ನು ಸಮೀಕರಿಸುವ ಕ್ರಿಯೆಯನ್ನು ಅವರದೇ ಒಂದು ಕವನ ಸಮರ್ಥವಾಗಿ ನಿಭಾಯಿಸುತ್ತದೆ-

ಎಷ್ಟು ನಮೂನೆಯ ಹಕ್ಕಿಗಳಿವೆ ಈ ಸೃಷ್ಟಿಯಲ್ಲಿ!
ಒಂದೊಂದು ದಿಕ್ಕಿನಿಂದ ಒಂದೊಂದು ದನಿ
ಹಾಡುವ ದನಿ, ಚೀರುವ ದನಿ
ಬೆಸಗೂಡುವ ದನಿ, ಹಸಿವಿನ ದನಿ

ಹೀಗೆ ಹಲವಾರು ದನಿಗಳು ಇಲ್ಲಿ, ಆದರೆ ಎಲ್ಲ ಬಣ್ಣಗಳು ಸೇರಿ ಒಂದು ಬಣ್ಣವಾಗುವಂತೆ, ಎಲ್ಲ ದೇಹಗಳು ಸತ್ತು ಮಣ್ಣಾಗುವಂತೆ ಇಲ್ಲಿ ಹೊರಡುವ ತಿರುಳು ಮಾತ್ರ ಸಾವು. ಗೆಳೆಯ ವಿಶುಕುಮಾರ, ಮನೆಯ ನಾಯಿ ಟಾಮಿ, ವರಕವಿ ಬೇಂದ್ರೆ, ಬಂಧೀಖಾನೆಯಲ್ಲಿ ಒಂದು ಸೊಳ್ಳೆ, ಕನ್ನಡ ಕಾವ್ಯ, ಗಾಂಧಿ ಮಹಾತ್ಮ, ಪ್ರೀತಿ, ವಿಮರ್ಶಕರ ಕೈಯಲ್ಲಿ ಕವಿ, ಆಂಟೇನಾದ ಮೇಲಿನ ಹಕ್ಕಿ, ತಾರೆ ಸ್ಮಿತಾ ಹೀಗೆ ಇಲ್ಲಿಯ ಒಂದೊಂದು ಕವನಕ್ಕೂ ಒಂದೊಂದು ಗೋಚರ ಅಥವಾ ಅಗೋಚರ ಸಾವಿನ ಹಿನ್ನೆಲೆಯಿದೆ. ಸಾವನ್ನು ಪಾಟೀಲರು ಎಲ್ಲಿಯೂ ಒಂದು ಮುಗಿದು, ಮರೆಯಾಗಿ ಹೋಗುವ ಘಟನೆಯಂತೆ, ಪೂರ್ಣ ವಿರಾಮದಂತೆ ಚಿತ್ರಿಸುವುದಿಲ್ಲ. ಬದಲಾಗಿ ಸತ್ತ ಮೇಲೆ ಎಲ್ಲಿಯೂ ಹೋಗದ ಮನುಷ್ಯರು

ಇದ್ದವನ ನೆನಪಿನ ಗುದ್ದಿನಲ್ಲಿ
ಗೆದ್ದಲಿಯಾಗುತ್ತಾರೆ
ಅವರ ಶ್ವಾಸೋಚ್ಛಾಸದ ಹಳ್ಳಕೊಳ್ಳಗಳಲ್ಲಿ
ಹಾವಾಗಿ ಹರಿದಾಡುತ್ತಾರೆ
ಅವರ ಆಕಾಶದ ತುಂಬ
ಹುಡಿಯಾಗಿ ಅಡರುತ್ತಾರೆ
ಹಕ್ಕಿಯಾಗಿ ರೆಕ್ಕೆ ಬಿಚ್ಚುತ್ತಾರೆ
ಚಿಟ್ಟೆಯಾಗಿ ಚಿಮುಕುತ್ತಾರೆ
ಎಲ್ಲಿಯ ತನಕ?
ಇದ್ದವರೂ ಸಾಯುವ ತನಕ.
ಸಾವು ಎಷ್ಟೇ ಕ್ಷೀಷೆಯಾದ ವಿಷಯವಾದರೂ ಪ್ರತಿ ಸಾವಿಗೂ ಪ್ರತಿಕ್ರಿಯೆ ಭಿನ್ನಭಿನ್ನವಾಗಿಯೇ ಇರುತ್ತದೆ. ವೈಯಕ್ತಿಕ ನೆಲೆಯ ಪ್ರತಿಕ್ರಿಯೆ ಮೂರ್ತತೆಯ ಪೊರೆ ಕಳಚಿಕೊಂಡು ಯಾವಾಗಲೂ ಅಮೂರ್ತವಾಗಿಯೇ ಇರುತ್ತದೆ. ಆ ಅಮೂರ್ತವೇ “ಅರ್ಧ ಸತ್ಯದ ಹುಡುಗಿ”. ಇಲ್ಲಿಯ ಸಾವಿನ ಚಿಂತನೆ ಹುಟ್ಟಿನ ಬಾಗಿಲಿಗೆ ಒಯ್ಯುವಂಥದ್ದು. ಇಲ್ಲಿ ಜರುಗುವುದು ಜಡದ ಮಾತಲ್ಲ, ಚೈತನ್ಯದ ಚಿಂತನೆ. ಆದರೆ “ಅರ್ಧ ಸತ್ಯದ ಹುಡುಗಿ”, ನೆನಪಿನ ಉಗ್ರಾಣದಲ್ಲಿ ಉಳಿಯುವುದು ಮಾತ್ರ ಬರೀ ಈ ಒಂದು ಕವನಕ್ಕಾಗಿ ಅಲ್ಲ, ಬದಲಾಗಿ ಇಲ್ಲಿಯ ವಿಷಯ ವೈವಿಧ್ಯಕ್ಕಾಗಿ.
ಸುಮಾರು ಮೂರು ನಾಲ್ಕು ದಶಕಗಳ ವಿಶಾಲವಾದ ಕಾಲಾವಧಿಯ ಹತ್ತು ಸಂಕಲನಗಳಷ್ಟು ಕಾವ್ಯ ಕೃಷಿ ಪಾಟೀಲರದಾಗಿದ್ದರೂ ಕೂಡಾ ಅವರು ಪುನಃ ಪುನಃ ಬರೆದದ್ದು ಚಿಂತಿಸಿದ್ದು ಮಾತ್ರ ನಮ್ಮ ಕಾವ್ಯದ ಸ್ವರೂಪ, ಹದಗೆಡುತ್ತಿರುವ ಸಾಮಾಜಿಕ ಸ್ಥಿತಿಗತಿ ಮತ್ತು ತುಟಿಯ ಅಂಚಿನಲ್ಲಿಯೇ ಉಳಿಯುವ ಸತ್ಯಗಳ ಕುರಿತು. ‘ನಿಧಾನವಾಗಿ ಆಲಿಸಿದರೆ ಪ್ರತಿಯೊಂದು ಶಬ್ದವೂ ಒಂದೊಂದು ಕವನವೇ.’ ‘ಕಾವ್ಯವೆಂದರೆ ಒಂದು ವಾಕ್ಯದಂತೆ’, ‘ವಿಮರ್ಶಕರ, ರಿವ್ಯೊಕಾರರ ಮಾನದಂಡಗಳ, ಸೂತ್ರಗಳ, ಕುಂಡಲಿಗಳ ಹಾವಳಿಯಲ್ಲೂ, ನಮ್ಮ ಕವಿಗಳು ಇಂದು ಹಕ್ಕಿಗಳ ಬಗ್ಗೆ, ಗಿಡಗಳ ಬಗ್ಗೆ, ಆಕಾಶದ ಬಗ್ಗೆ ಕವನ ಕಟ್ಟುತ್ತಿದ್ದಾರಲ್ಲ - ಅದೇ ಸಮಾಧಾನ’. ಇಂಥ ಅನೇಕ ವಿಚಾರಗಳನ್ನು ಸಂಕಲನದ ಹಲವಾರು ಕಡೆ ಚರ್ಚಿಸುವ ಕವಿ ಕ್ಷೀಣವಾಗುತ್ತಿರುವ ಕಾವ್ಯ ಪರಂಪರೆಯ ಬಗ್ಗೆ ಚಿಂತಿತರಾಗುತ್ತಾರೆ. ಅಂತೆಯೇ ಮೌಲ್ಯಗಳು ಸಮಾಜದಲ್ಲಿ ಕುಸಿಯುತ್ತಿರುವ ಕುರಿತು, ಅದರ ಶಿಶುವಾದ ಮನುಷ್ಯ ಶುಷ್ಕವಾಗುವುದರ ಕುರಿತು ಬರೆಯುತ್ತಾರೆ -

ಪ್ರೀತಿಗೆ ಪ್ರತಿಯಾಗಿ ಕಡ್ಡಾಯವಾಗಿ ಪ್ರೀತಿಯನ್ನು ಬಯಸದ ಸುತ್ತಲಿನ ಸೃಷ್ಟಿಯನ್ನು
ಕಣ್ತೆರೆದು ನೋಡುವ, ಎದೆ ತುಂಬಿ ಹಾಡುವ
ಕಲೆಯನ್ನು ನಾವು ಕಲಿತಾಗ
ಮುಂದೊಂದು ದಿನ ನಮ್ಮ ಸುತ್ತಲಿನ ಮನುಷ್ಯರನ್ನೂ
ಪ್ರೀತಿಸುವ ಕಾಲ ಬರಬಹುದು.

ಆದರೆ ಸಮಾಜವನ್ನು ವ್ಯಂಗ್ಯ, ಗೇಲಿಯ ಭಾವದಿಂದ ನೋಡುವ ಈ ಪ್ರತಿಕ್ರಿಯೆ ಸಮಾಜ ಸುಧಾರಕನದಲ್ಲ. ವ್ಯವಸ್ಥೆಯ ಹೊರಗೆ ನಿಂತು ನಿರಪರಾಧಿಯಂತೆ ಮಾತನಾಡುವುದಲ್ಲ. ಎಲ್ಲ ಅಪರಾಧ, ಪ್ರಶ್ನೆಗಳು ವೈಯಕ್ತಿಕ ನೆಲೆಯಿಂದ ಹೊರಟು ಸಾರ್ವತ್ರಿಕ ಸ್ಪಂದನಯನ್ನು ನಿರೀಕ್ಷಿಸುತ್ತವೆ. ವಸ್ತುವಿನ ಇನ್ನೊಂದು ದೃಷ್ಟಿಕೋನದಿಂದ ನೋಡಿದಾಗ ಚಂಪಾರವರ ನಾಟಕ, ಅಂಕಣ ಹಾಗೂ ಕಾವ್ಯದ ಮಧ್ಯದ ವ್ಯತ್ಯಾಸದ ನಾಡಿಯನ್ನು ಹಿಡಿಯುವುದು ಬಲುಕಷ್ಟ. ಅಂತೆಯೇ ಅವರ ‘ಕೊಡೆಗಳು’ ಕವನವಾಗಿರಲೂ ಸಾಧ್ಯವಿದೆ. ಬೇಕೆನ್ನಿಸಿದರೆ ವಿಸ್ತರಿಸಿ ನಾಟಕದ ಆಕೃತಿ ಪಡೆಯಲೂ ಸಿದ್ಧವಿದೆ. ಈ ಸಂಕಲನದ ‘ನಮ್ಮ ಚೆನ್ನಣ್ಣ’, ‘ಸಾಧನ ಕೇರಿಯ ದಾರಿಯಲ್ಲಿ’, ‘ದಲಿತ ಕವಿ ರಾಮಣ್ಣನಿಗೆ’, ‘ನಮ್ಮ ಸ್ವಾತಂತ್ರ್ಯ’, ‘ಸಂಜೆಗಾವಳದವರು’ ಹಾಗೂ ಇನ್ನೂ ಅನೇಕ ಕವನಗಳು ಪ್ರಕಾರ ಪ್ರಕಾರದ ಮಧ್ಯದ ಭೇದ ಮರೆಸಿ ಓದಿಸಿಕೊಂಡು ಹೋಗುವಂಥವುಗಳು. ಅವರೇ ಹೇಳಿಕೊಂಡಂತೆ ‘ಗದ್ಯ’, ‘ಪದ್ಯ’ ಎಂಬ ಪದಗಳ ಬಳಕೆಯ ಬಗ್ಗೆ ಸಂದೇಹ ಪಡುವ ಅವರಿಗೆ ಬದುಕು ಒಂದು ನಿರಂತರ ಪ್ರಯೋಗ ಶಾಲೆ. ಆದರೆ ಆ ಪ್ರಯೋಗ ಬರೀ ಸಲಕರಣೆಗಳನ್ನು ಕಲೆಹಾಕುವ ಹಂತದಲ್ಲಿಯೇ ಉಳಿಯುವಂತಾದರೆ ಏನರ್ಥ? “ಅರ್ಧ ಸತ್ಯದ ಹುಡುಗಿ” ಶಬ್ದಗಳ ಜಾತ್ರೆ ಮಾಡುವ ಸಂಭ್ರಮದಲ್ಲಿರುವಷ್ಟೇ ತೀವ್ರವಾಗಿ ಅಂತರಂಗದ, ಕಾರುಣ್ಯದ ಕದ ತಟ್ಟುವಲ್ಲಿ ಯಶಸ್ಸಾಗುತ್ತದೆಂದು ಅನ್ನಿಸಲಾರದು. ಸಾರ್ವಜನಿಕ ಭಾಷಣದಂತೆ, ಸಾರುವ ಅಯ್ಯನ ಶಬ್ದಜಾಲದಂತೆ, ಸುಡಗಾಡು ಸಿದ್ಧನ ಪವಾಡದಂತೆ, ಆಟದಲ್ಲಿ ಮೋಡಿಗೊಳಿಸುವ ಈ ಸಂಕಲನ ನೆನಪಿನಂಗಳದಲ್ಲಿ ಉಳಿದರೂ ಭಾವದ ಬೀಟ್ಸ್‌ಗಳೊಂದಿಗೆ ಬೆರೆಯುವುದಿಲ್ಲ.
ಸಂಕಲನದ ಶೀರ್ಷಿಕೆಯೇ ಹೇಳುವಂತೆ ಇವು ಹುಡುಗಿಯೊಬ್ಬಳ ಸುತ್ತಲಿನ ಹಾಡುಗಳು. ಈ ಹುಡುಗಿ ಗಜಲ್ ಗುಂಡಮ್ಮನಾಗಿರಬಹುದು, ಸ್ಮಿತಾ ಪಾಟೀಲ ಅಥವಾ ಅನಾಮಿಕಳಾದ ಇನ್ಯಾರೋ ಆಗಿರಬಹುದು. ಅಥವಾ ಇವರಾರೂ ಅಲ್ಲದವಳೂ ಆಗಿರಬಹುದು. ಪಾಟೀಲರ ‘ತುಳುಕಿದವರು’ ಕವನ ನೋಡಿ -

ಯಾರವಳು?
ಮೈಸೂರಿನ ಸಿಂಗಾರಿಯೋ
ಬೆಂಗ್ಳೂರಿನ ಬಂಗಾರಿಯೋ
ಹಾಂಕಾಂಗಿನ ಹಾದರಗಿತ್ತಿಯೋ
ಇಂಗ್‌ಲಾಂಡಿನ ಇದಿಮಾಯಿಯೋ
ಆಫೀಸಿನ ಅರಗಿಣಿಯೋ
ಕಾಲೇಜಿನ ಕರಿಮಣಿಯೋ
ಹಿತ್ತಲ ಕಡೆ ಹೆಮ್ಮಾರಿಯೋ
ಮಗ್ಗುಲು ಮನೆ ಮೂದೇವಿಯೋ
ನಿಮ್ಮ ಕನಸೆಲ್ಲ ತುಂಬಿ
ಕನವರಿಕೆಯಲ್ಲಿ ತುಳುಕಿದವಳು
ಯಾರವಳು ಹೇಳಿ?

ನಿರಂತರವಾದ ಅನ್ವೇಷಣೆಗಳಿಗೆ ಕಾರಣವಾದ ವಿಷಯಗಳಲ್ಲಿ ಒಂದಾದ ಹೆಣ್ಣು ಈ ಸಂಕಲನದಲ್ಲಿ ಹಲವಾರು ರೂಪಗಳಲ್ಲಿ ಕಾಣಸಿಗುತ್ತಾಳೆ. ವಿಷಾದ, ಉಕ್ಕುವ ಜೀವನ ಪ್ರೀತಿ, ಸಂಗಾತಿ, ಮೋಸದ ಬಲೆ, ಚಿತ್ರ, ಕಷ್ಟಕ್ಕೆ ಬರುವ ಜೀವನ ಮಿತ್ರನ ನೂರು ನೂರು ಬಣ್ಣಗಳನ್ನು ಆಕೆಯಲ್ಲಿ ಕಂಡುಕೊಳ್ಳುತ್ತಾರೆ ಕವಿ.

ನಿನ್ನ ಕಣ್ಣಿನ ಎಣ್ಣೆ
ಸುರಿಸುರಿದು ಉರಿಸಲು
ಬರುವೆಯಾ ಒಮ್ಮೆ ನೀನು ಅಥವಾ
ನಿನ್ನ ಬೆಂಕಿಗೆ ತುತ್ತಾಗಿ
ಬೆಳಗು ಹರಿದಾಗ
ನಾನು ಇರುಳಿನ ಬೂದಿ

ಅಥವಾ ಎಲ್ಲ ಈ ತಹತಹಿಕೆಗಳು ಮುಗಿದು ಮೂಡುವ ಈ ಕೆಳಗಿನ ಸಾಲುಗಳಿರಬಹುದು.

ಅಂತ್ಯಗೊಂಡು ಮತ್ತೆ
ಮಂಜು ಮುತ್ತಿದ ಕ್ಷಿತಿಜದತ್ತ ಸವಾಲಾಗಿ ಸಮಾಂತರದಲ್ಲಿ
ನಾನು-ನೀನು
ರೈಲು ಹಳಿಗಳ ಹಾಗೆ.......

ಇಲ್ಲಿಯೂ ಕೂಡಾ ಪಾಟೀಲರ ನಿಲುವು ಉಳಿದೆಲ್ಲ ಕನ್ನಡ ಕವಿಗಳಿಗಿಂತ ಭಿನ್ನ. “ದ್ರೌಪದೀಕಿ ಸಾಪ್ತಾಹಿಕಿ” ಮತ್ತು “ಒಂದು ಪ್ರಾಮಾಣಿಕ ಸಲಹೆ” ಯಂಥ ಕವಿತೆಗಳಲ್ಲಿ ನಾವು ಈ ಭಿನ್ನತೆಯನ್ನು ಗ್ರಹಿಸಬಹುದು. ತಾಯಿ, ದೇವತೆ, ಸ್ಫೂರ್ತಿಯ ಸೆಲೆ, ಸದಾ ಅನುಕಂಪ ಬಯಸುವ ಜೀವ ಇವೆಲ್ಲ ಹಿಂದಿನ ಪರಂಪರೆಯ ಕವಿ ಮಹೋದಯರೆಲ್ಲ ಒಬ್ಬರು ಇನ್ನೊಬ್ಬರಿಗೆ ಅಂಜಿ ಅಥವಾ ಎಲ್ಲರೂ ಒಟ್ಟಾಗಿ ಸಂಸ್ಕೃತಿ ಎಂಬ ವಿಕೃತಿಗೆ ಅಂಜಿ ಹೆಣ್ಣಿಗೆ ಆಪಾದಿಸಿದ ಶಬ್ದಗಳು. ಸಾಹಿತ್ಯ ಎಂದರೆ ಕೆಲವು ಬಾರಿ ಬರೀ “ಹಸಿ ಹಸಿ ಸುಳ್ಳುಗಳ ದಾಖಲಾತಿ” ಎಂದು ಮಾಮ್ ಬರೆಯುತ್ತಾನೆ. ಇದು ಇಂಥದೇ ಕೆಲವು ಸಂದರ್ಭಗಳಲ್ಲಿರಬಹುದೇನೋ. ಪಾಟೀಲರು ಭೂಮಿಯನ್ನು ಕಲ್ಪಿಸುವ ಬಗೆ ನೋಡಿ. ಅವರಿಗೆ ಆಕೆ ತಾಯಿಯಲ್ಲ. ಭೂಮಿಯನ್ನು ಅಗೆದು, ಬಿಗಿದು, ಬಿತ್ತಿ, ಹಸಿರ ಚಿಮ್ಮಿಸಿ, ಹೂ ಹಣ್ಣಾಗಿಸುವ ನಾವು -

ಇಂಥ ಭೂಮಿಗೆ ತಾಯಿ
ಅಂತ ಕರೆದು ತಾಯ್ಗಂಡರು ಅಂತ
ಕರೆಸಿಕೊಳ್ಳುವುದಕ್ಕಿಂತ
ಭೂಮಿ ಒಬ್ಬ ಗೆಳತಿ, ಸಖಿ,
ಅಂತ ಕರೆಯಬಹುದಲ್ಲವೆ?

ಭಾವ ಬುದ್ಧಿಗಳೆರಡನ್ನೂ ಸಹಜವಾಗಿ ಒಪ್ಪಿಸುವಂತೆ ಬರೆಯುವ ಪಾಟೀಲರು ಕನ್ನಡ ಕಾವ್ಯ ಪರಂಪರೆ ಕಂಡ ಅಪೂರ್ವ, ವೈವಿಧ್ಯಮಯ ಆಸಕ್ತಿ, ವಿಷಯಗಳ ಅನನ್ಯ ಕವಿ. ನವೋದಯದ ಋಷಿಗಳು, ನವ್ಯದ ಅರೆ ಬೆಂದವರು, ದಲಿತ-ಬಂಡಾಯದ ಭಾಷಣಕಾರ ಕವಿಗಳಾರಲ್ಲೂ ಸಿಗಲಾರದ ವಸ್ತು, ವಿಷಯ ವಿಸ್ತಾರ ಪಾಟೀಲರ ಕಾವ್ಯದಲ್ಲಿ ಇದೆ ಎಂದರೆ ಅತಿಶಯೋಕ್ತಿಯಾಗಲಾರದು. ಪಾಟೀಲರ ಕಾವ್ಯದ ಅತೀ ಮುಖ್ಯ ಕಾಳಜಿಗಳಲ್ಲಿ ಛಾಪು ಬಿಂಬಿಸುವುದೂ ಒಂದು. ತಮ್ಮನ್ನು ತಾವು ತೂಗಿ ನೋಡಿಕೊಳ್ಳುವ, ವಿಮರ್ಶಿಸಿಕೊಳ್ಳುವ, ಆ ಮೂಲಕ ಸಮಕಾಲೀನ ಸಂದರ್ಭಗಳನ್ನು ನೋಡುವ ಗುರಿಯಿಂದ ಪ್ರಾರಂಭವಾಗುವ ಅವರ ಹಾಡಿನ ಹಳ್ಳ ತನ್ನದೇ ಆದ ಛಾಪು ಮೂಡಿಸುವ ಗತ್ತಿನಲ್ಲಿ ಹರಿದು ಕಾವ್ಯ ಪರಂಪರೆಯ ಸಮುದ್ರವನ್ನು ಸೇರುತ್ತದೆ.
ನವೋದಯದ ಮೂಲದಿಂದಲೇ ಅವರು ಕಾವ್ಯ ಕೃಷಿಯನ್ನು ಪ್ರಾರಂಭಿಸಿದ್ದರೂ ಕೂಡಾ ತಮ್ಮ ರಸಯಾತ್ರೆ ಇಂಥ ಇಂಥ ಮೇರೆಗಳ ಉಲ್ಲಂಘನೆಯಾಯಿತು ಎಂದು ಹೇಳಿದ್ದಾರೆಯೆ ವಿನಃ ಇಂಥದೇ ಪರಂಪರೆಯನ್ನು ಸೇರಿತು ಎಂದು ಹೇಳಿಕೊಂಡಿಲ್ಲ. ಪ್ರತಿ ಬರಹದ ಸಂದರ್ಭದಲ್ಲಿ ತಟ್ಟನೆ ಎಚ್ಚರವಾಗಿ ಉಲ್ಲಂಘನೆ, ವ್ಯಂಗ್ಯ, ಟೀಕೆಯ ಪ್ರಹಾರಗಳತ್ತ ಎಳೆದೊಯ್ಯುವ ಅವರ ಮನಸ್ಸು, ಇವುಗಳಷ್ಟೇ ಸತ್ಯವಾದ ದಾರ್ಶನಿಕತೆ, ಸಹಜ ಸೌಂದರ್ಯ, ನವಿರಾದ ಹಾಸ್ಯ ಬಿಳಿ ತಿಳಿ ಮೋಡದಂಥ ರಮ್ಯ ಹಾಗೂ ಮೋಹಕತೆಯತ್ತ ಕೆಲವೊಮ್ಮೆ ನೋಡುವುದೇ ಇಲ್ಲ. ಬರೀ ಶಬ್ದ ಹಾಗೂ ಚರ್ಮಗಳ ನೆಲೆಯಲ್ಲಿ ಹುಟ್ಟೆ ಇಂಗಿ ಹೋಗುವ ಹಾಡುಗಳು ಶೀರ್ಷಿಕೆಯಲ್ಲಿ ಮಾತ್ರ ‘ಎಲುಬಿನ ಹಾಡು’ಗಳಾಗುತ್ತವೆ. ಸಮಾಜ ಸುಧಾರಣೆಯ ತೀವ್ರ ಬಯಕೆ ಇರುವ ಅವರಲ್ಲಿ ಸಮಸ್ಯೆಗಳಿವೆ ಆದರೆ ಸಮಸ್ಯೆಗಳ ಪರಿಹಾರಕ್ಕೆ ದಾರಿಗಳಿಲ್ಲ. ಯಯಾತಿಯ ಚಂಚಲ ಮನಸ್ಸಿನಂತೆ ಓಡಾಡುವ ಅವರ ಕಾವ್ಯ ಗುರಿಯಲ್ಲಿ ಕೆಲವು ಕಠಿಣ ಭೀಷ್ಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ.
ಬೇಂದ್ರೆ, ಕುವೆಂಪು, ಪುತಿನ, ಡಿ.ವಿ.ಜಿಯವರ ಗಿಡಗಂಟಿಗಳ ಕೊರಳಿಂದ ಉಲಿದ ಹಕ್ಕಿಯ ಹಾಡುಗಳನ್ನು ಆಲಿಸುತ್ತಲೇ ಬೆಳೆದ ಚಂಪಾ ಆನಂತರದ ಕಾಂಕ್ರೀಟ್ ಪ್ರಪಂಚದ ಭೀಷಣ ಪರಿಣಾಮಗಳನ್ನು ತಮ್ಮ ಕವಿತೆಗಳಲ್ಲಿ ಅದೇ ವ್ಯಂಗ್ಯ ಲೇವಡಿಗಳಿಂದ ದಾಖಲಿಸಿದ್ದಾರೆ. ಹಾಗೆ ದಾಖಲಿಸುವುದರ ಮೂಲಕ ಹಿಂದಿನವರು ಕಂಡಿರದ ಇನ್ನರ್ಧ ಸತ್ಯವನ್ನು ಕಾವ್ಯದ ಇತಿಹಾಸದ ಪುಟಗಳಿಗೆ ಸೇರಿಸಿ ಭೂತ ವರ್ತಮಾನಗಳ ಮಧ್ಯದ ವ್ಯತ್ಯಾಸಕ್ಕೆ ಕನ್ನಡಿ ಹಿಡಿಯುತ್ತಾರೆ. ನಿಸರ್ಗ ಕಾಸ್ಮ್ಯಾಟಿಕ್ಸ್ ಪರಿಕಲ್ಪನೆಗೆ ಒಳಗಾಗಿ ಹಿಂದಿನ ವಿಜೃಂಬಣೆಯೆಲ್ಲ ಹ್ಯಾಗೆ ಮರೆಯಾಗಿದೆ ಎಂಬುದನ್ನ ಬಹಳ ಸುಂದರವಾಗಿ ವಿವರಿಸುತ್ತಾರೆ. ಅರ್ಧ ಸತ್ಯದ ಹುಡುಗಿಯ ‘ಬೆಳಗು ಹರಿಯುವ ಮುನ್ನ’ ಅದಕ್ಕೊಂದು ಉತ್ತಮ ಉದಾಹರಣೆ. ಈ ಕವನದಲ್ಲಿ ಅತ್ಯಂತ ಪ್ರಾಮಾಣಿಕವಾದ ನಿಸರ್ಗ ಹಾಗೂ ಸಂಸ್ಕೃತಿಯ ಕಾಳಜಿಗಳಿದ್ದು ಅವುಗಳಿಗೆ ಮಾರಕವಾಗುತ್ತಿರುವ ವಿಷಯಗಳ ಕುರಿತು ಮಾನವೀಯ ತಲ್ಲಣವಿದೆ. ಸರಳ ಸರಳ ‘ಡಾವರ್ ಬೀಚ್’ನಂತೆ ಓದಿಸಿಕೊಂಡು ಹೋಗುವ ಈ ಕವನ ನಮ್ಮ ಬುದ್ಧಿ ಹೃದಯಗಳ ಮೂಲೆ ಮೂಲೆಯನ್ನು ತಟ್ಟಿ ಎಚ್ಚರಿಸುತ್ತದೆ. ಮರ ಮರಗಳ ಮಧ್ಯ ನಾದದ ಜೋಕಾಲಿ ಕಟ್ಟುವ ಹಕ್ಕಿಗಳ ಕಾಲ ಮುಗಿದು -

ನಿಧಾನವಾಗಿ ಸೂರ್ಯ ಮೂಡುತ್ತಾನೆ
ಕಾರು, ಸ್ಕೂಟರು, ರಿಕ್ಷಾಗಳ ಕರ್ಕಶ ದನಿ
ಗಾಳಿಯನ್ನೂ ಸೀಳುತ್ತವೆ, ಜನ
ಕೆಮ್ಮುತ್ತಾರೆ, ಕ್ಯಾಕರಿಸುತ್ತಾರೆ
ನೀರಿನ ನಳದ ಸುತ್ತ
ಖಾಲಿ ಕೊಡಗಳ ಜಗಳ ಶುರುವಾಗುತ್ತದೆ ಮತ್ತೆ ರಾತ್ರಿಯವರೆಗೆ ಜಂಜಾಟ
ಗೊತ್ತ ಪಡಿಸಿದ ದಾರಿಯಲ್ಲಿ ಕವಾಯತು,
ಅವೇ ಮುಖಗಳು, ಅವೇ ಮಾತುಗಳು, ಅವೇ ವಿಮರ್ಶೆಗಳು.

ಇಲ್ಲಿಯ ಈ ಚಿತ್ರಣ ಎಲ್ಲೋ ನಮ್ಮೊಳಗಿನ ವಿಕೃತಿಯ ಪ್ರತೀಕ. ಇನ್ನುಳಿದ ಕವಿತೆಗಳಲ್ಲಿಯಂತೆ ಪಾಟೀಲರ ಚಿಂತನೆಗಳು, ಮಾತುಗಳು ಇಲ್ಲಿ ನನಗೆ ವಾಚ್ಯವೆನ್ನಿಸುವುದಿಲ್ಲ. ಅಪಾರ ಜೀವನ ಪ್ರೀತಿಯ ತಳಹದಿಯಿಂದ ಹೊರಟು ದಡ ಸೇರಿಯೇ ತೀರುವ ದೋಣಿಗಳಂತೆ ಕಾಣಿಸುತ್ತವೆ. ಇಂಥವುಗಳ ಮೂಲಕವೇ ಅವರು ಇಂದಿಗೂ ಪ್ರಸ್ತುತರಾಗುತ್ತಾರೆ. ಚಿಂತಕ ಡಿ.ಆರ್.ನ ಮಾತುಗಳಲ್ಲಿ ಹೇಳಬೇಕೆಂದರೆ “ಊರೇ ಉರಿದು ಹೋಗುತ್ತಿರುವಾಗ ಗುಲಾಬಿಯ ಬಗ್ಗೆ ಚಿಂತೆ ಮಾಡದೆ ಮನುಷ್ಯರ ಬಗ್ಗೆ, ಸಮಾಜದ ಬಗ್ಗೆ, ಸಮಾಜದ ಬಗ್ಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತಾ ನಮ್ಮ ಈ ಹೊತ್ತಿನ ಪ್ರಮುಖ ಕವಿ” ಆಗುತ್ತಾರೆ.
ಯುಗ ಹಾಗೆಯೇ ಇದೆ. ಚಿಂತನೆ ಬದಲಾಗಿದೆ. ಕಾವ್ಯದ ಆಶಯ, ಆಕೃತಿ ಎಲ್ಲವೂ ಬದಲಾಗಿವೆ. ಅಬ್ಬರಗಳು ಪೊರೆ ಕಳಚಿಕೊಂಡ ಹಾವಿನಂತಾಗಿವೆ. “ಅರ್ಧ ಸತ್ಯದ ಹುಡುಗಿ” ಇದೆನ್ನೆಲ್ಲ ದಾಖಲಿಸುತ್ತದೆ. ಸಾವಿನಂಥ, ರಾಜಕೀಯದಂಥ ಗಂಭೀರ ಚಿಂತನೆಯೊಂದಿಗೆ ಪ್ರಾರಂಭವಾಗುವ ಈ ಸಂಕಲನ.
ಕನ್ನಡ ಕಾವ್ಯದ
ಭೂತ ಭವಿಷ್ಯ
ಬಣ್ಣಿಸಿ ಹೇಳೋ ಗಾಂಪಾ

ನಮ್ಮ ಆದಿಕವಿ
ಪಂಪಾ ಗುರುವೇ
ನಮ್ಮ ಅಂತ್ಯ ಕವಿ ಚಂಪಾ
ಎಂಬ ಲಘುದಾಟಿಯ ಹನಿಗವನಕ್ಕೆ ನಿಲ್ಲುತ್ತದೆ.
ಇದು ಯುಗ ಧರ್ಮವೇ ಬದಲಾಗುತ್ತಿರುವ ಸಂದರ್ಭ. ಟಕ್ಕನೆ ಕಂಪ್ಯೂಟರ್ ಗುಂಡಿಯೊಂದನ್ನು ಅದುಮಿ ಇಪ್ಪತ್ತೆರಡು ಇಂಚುಗಳ Sಛಿಡಿeeಟಿ ಮೇಲೆ ಇಡೀ ಪ್ರಪಂಚವನ್ನೇ ನೋಡಲು ಕುಳಿತ ಇಂದಿನ ಕವಿಕಾವ್ಯದ ಪ್ರಶ್ನೆಗಳೂ ಬದಲಾಗಿವೆ. ಚಂಪಾ ಯಾವುದನ್ನು ಸಾಧಿಸಲು ಕಾವ್ಯ ಕೃಷಿಗಿಳಿದರೋ ಅದು ಒಂದು ಹಂತದಲ್ಲಿ ಸಾಧಿಸಿಯಾಗಿದೆ. ವ್ಯಕ್ತಿ ಪೂಜೆ ಮರೆಯಾಗುತ್ತಿದೆ. ಯಾರು ಯಾರನ್ನೂ ಈಗ ತಡೆಯಬಲ್ಲರು. ಫೋಸ್ಟ ಸ್ಟ್ರಕ್ಚರಲ್‌ದ ಈ ಗಾಳಿಯಲ್ಲಿ ವಿಮರ್ಶಕ ಮೂಲೆ ಗುಂಪಾಗಿದ್ದಾನೆ. ಆತನ ಪ್ಯಾರಾಮೀಟರ್‌ಗಳ ಸರ್ಟಿಫಿಕೇಟ್‌ಗಳೆಲ್ಲ ಗೆದ್ದಲು ತಿಂದಿವೆ. ಕಾವ್ಯ ಖಿ.ಗಿ. Sಛಿಡಿeeಟಿಮೇಲೆ ಕಾಣೂವ ಅಲ್ಪ ಅವಧಿಯ ಮುದ್ದು ಮುಖದ ಹುಡುಗಿಯಂತಾಗಿದೆ. ಇದು ಒಂದು ಹಂತದ ನಿರೀಕ್ಷೆಯೂ ಕೂಡಾ. ಅತ್ಯಂತ ಸಮಕಾಲೀನವಾದ ವ್ಯಕ್ತಿ (ಶಾಂತರಸ, ಚೆನ್ನಣ್ಣ, ವಿಶುಕುಮಾರ, ರಾಮಣ್ಣ, ಕುವೆಂಪು, ಶರ್ಮ ಕುರಿತು ಇಲ್ಲಿ ಕವನಗಳಿವೆ) ಆದರೆ ಜಾಗತಿಕ ಸ್ವರೂಪ ಉಳ್ಳ ವಿಚಾರಗಳನ್ನು ಕವಿ ಚಂಪಾ ತಮ್ಮ ಬಹುಪಾಲು ಕವಿತೆಗಳಿಗೆ ಅಳವಡಿಸಿಕೊಂಡಿದ್ದಾರೆ. ಸಮನ್ವಯದ, ಸೌಜನ್ಯದ ದಾರಿಯಿಂದ ಸಾವಿರ ಮೈಲು ದೂರವಿರುವ ಕವಿ ಎಲ್ಲ ವೈವಿಧ್ಯಗಳನ್ನು ಈ ಸಂಕಲನದಲ್ಲಿ ಒಂದು ಏಕತಾನತೆಗೆ ಅಳವಡಿಸುವ ಹುಚ್ಚು ಪ್ರಯತ್ನಕ್ಕೆ ಎಳೆಸುವುದಿಲ್ಲ. ಎಲ್ಲ ವಿಷಯ ವಿಚಾರಗಳೂ ಅವರ “ಅರ್ಧ ಸತ್ಯದ ಹುಡುಗಿ” ಯ ಹಾಗೆ ಅರ್ಧಂಬರ್ಧ, ಅಪೂರ್ಣ. ಈ ಎಲ್ಲ ಅಪೂರ್ಣತೆಗಳು ಬೆರೆತು ಒಂದು ಪೂರ್ಣತೆಯತ್ತ ಸಾಗುವುದಾದರೆ ಸಾಗಲಿ ಆದರೆ ಕವಿಯ ಗುರಿ ಮಾತ್ರ ಇದು ಅಲ್ಲ. ಸಾಹಿತ್ಯ ಕೃಷಿಯ ಈ ದೀರ್ಘ ಪ್ರವಾಸದ ನಂತರವೂ ಚಂಪಾ ಅವರ “ಅರ್ಧ ಸತ್ಯದ ಹುಡುಗಿ” ಕಾಯುತ್ತಾಳೆ ಕೆನೆಗಟ್ಟಬೇಕಾದ ಈ ಕೆಳಗಿನ ಕನಸಿಗಾಗಿ,

ಗೋಡೆ ಗೋಡೆಗೆ ಢಿಕ್ಕಿ ಹೊಡೆಯುತ್ತಿವೆ ಮಾತುಗಳು
ಕಾಯುತ್ತಿರುವೆ
ಈ ಮಾತುಗಳ ನಡುವಿನ ಮೌನಕ್ಕಾಗಿ
ಈ ಮೌನಗಳ ಸಂಧಿಸುವ
ಸೇತು ಬಂಧಕ್ಕಾಗಿ.




Saturday, November 26, 2011

kannada

            ಕನ್ನಡದ(kannada) ಬಗೆಗೆ ಇಷ್ಟು ಗೊತ್ತಿದ್ದರೂ ಸಾಕು
   

ಯಾಕೆ ಕನ್ನಡಿಗರು ಕನ್ನಡವನ್ನು ಕುರಿತು ಅಭಿಮಾನಪಡಬೇಕು?ಇದಕ್ಕೆ ನಾನು ಕಂಡುಕೊಳ್ಳುವ ಉತ್ತರ ಕನ್ನಡದ  ಇತಿಹಾಸದ ಈ ಮುಂದಿನ ಅಂಶಗಳನ್ನು ಆದರಿಸಿದೆ. ಮತ್ತು  ಈ ಕಾರಣಗಳಿಗಾಗಿಯೇ ಅಭಿಮಾನ ಪಡಬೇಕಿದೆ. ಹಾಗೆಯೇ  ಇದನ್ನು ಅರಿತುಕೊಳ್ಳುವದು ಪ್ರತಿಯೊಬ್ಬ ಕನ್ನಡಿಗನ  ಜವಾಬ್ದಾರಿ ಎಂದು ನನಗನ್ನಿಸಿದೆ. 1) ಭಾರತಿಯ ಭಾಷೆಗಳಲ್ಲಿ  ಕನ್ನಡ ಮೂರನೆಯ ಅತಿ ಪ್ರಾಚೀನ ಭಾಷೆ 2) ಕನ್ನಡ ಎರಡು ಸಾವಿರ ವರುಷಗಳಿಗೂ ಪುರಾತನ. 3) ಕನ್ನಡ 99.99 % ತಾರ್ಕಿಕ ಭಾಷೆ 4) ಕನ್ನಡಕ್ಕೆ ಎಂಟು ಜ್ಞಾನಪೀಠಗಳ ಗರಿಮೆ, 5 )ವಿನೋಭಾ ಭಾವೆ ಅವರ ಪ್ರಕಾರ ಕನ್ನಡ ವಿಶ್ವ ಲಿಪಿಗಳ ರಾಣಿ. 6) ಕನ್ನಡಕ್ಕೆ ಸ್ವತಂತ್ರ ಲಿಪಿ 7) ಕನ್ನಡ ಭಾಷಾ ಉಚ್ಛಾರ ಮತ್ತು ಲಿಪಿಗಳ ಮಧ್ಯ ಸಮನ್ವಯ 8) ವಿದೇಶಿಗನೊಬ್ಬನಿಂದ (ಕಿಟಲ್) ಕನ್ನಡ ನಿಘಂಟು 9) ರಗಳೆ ಸಾಹಿತ್ಯ ಕನ್ನಡದಲ್ಲಿ ಮಾತ್ರ 10) ಭಾರತೀಯ ಲೇಖಕರುಗಳಲ್ಲಿಯೇ ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದ ಲೇಖಕ ಕುವೆಂಪು, ಕನ್ನಡಿಗ. 11) ಕನ್ನಡ ಛ್ಛಂಧಸ್ಸು ಉಳಿದೆಲ್ಲ ಭಾಷೆಗಳಿಗಿಂತಲೂ ಭಿನ್ನ 12) ಕನ್ನಡ ತಿಳುವಳಿಕೆ ಇಲ್ಲದೆ ಮಾರಾಠಿ ಭಾಷೆಯ ಅಧ್ಯಯನವೇ ಅಪೂರ್ಣ 13) ಕನ್ನಡದ ಹಟ್ಟಿ ಚಿನ್ನದ ಗಣಿಯಿಂಲೇ ಗ್ರೀಕರಿಗೆ ಸ್ಪೂರ್ತಿ 14) ಪ್ರಥಮ ಎನಸೈಕ್ಲೊಪೀಡಿಯಾ ಕನ್ನಡದಲ್ಲಿ, ಆನಂತರ ಶಿವ ತತ್ವ ರತ್ನಾಕರ ಎನ್ನುವ ಹೆಸರಿನಲ್ಲಿ ಸಂಸ್ಕ್ರತಕ್ಕೆ ಭಾಷಾಂತರ. 15) 230 ಬಿ ಸಿ ಯಲ್ಲಿಯೇ ಅಶೋಕನ ಬ್ರಹ್ಮಗಿರಿ ಶಾಸನದಲ್ಲಿ ಕನ್ನಡದ ಕುರುಹು 16) ಮೊದಲ ಮತ್ತು ಎರಡನೆ ಶತಮಾನದಲ್ಲಿ(ಎ ಡಿ)ಯೇ  ಗ್ರೀಕ ನಗೆ ನಾಟಕಗಳಲ್ಲಿ ಕನ್ನಡ ಪದಗಳ ಬಳಕೆ 17) ಕನ್ನಡದ ಹಲ್ಮಿಡಿ ಶಾಸನ 450(ಎ ಡಿ) ವರುಷಗಳಷ್ಟು ಪುರಾತನ 18) ಕನ್ನಡದ ಕವಿರಾಜ ಮಾಗ ಒಂದು ಪ್ರಭುದ್ದ ಕಾವ್ಯ 850(ಎ ಡಿ)ರಲ್ಲಿಯ ರಚನೆ 19) ಕನ್ನಡದ ವಚನ ಸಾಹಿತ್ಯ ಸಂಪೂಣ ದೇಶಿ ಮತ್ತು ವಿಶ್ವ ಸಾಹಿತ್ಯದಲ್ಲಿಯೇ ವಿಶಿಷ್ಟ 20) ಕನ್ನಡದ ದಾಸ ಸಾಹಿತ್ಯದಿಂದ  ಭಾರತದ ಭಕ್ತಿ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ 21) ಕನ್ನಡದ 16ನೇ ಶತಮಾನದ ಕನಕದಾಸರ ‘ರಾಮಧ್ಯಾನ ಚರಿತೆ’ ಒಂದು ವಿನೂತನ ಬರಹ 22) ಕನ್ನಡ ಈಗ ಶಾಸ್ತ್ರಿಯ ಭಾಷೆ 23) ಕನ್ನಡ ಭಾಷೆ ಎಂದರೆ ಹುಚ್ಚು, ಹಸಿವು ಮತ್ತು ಸಂಸ್ಕತಿ.

Sunday, November 20, 2011

ಗಾಂಧಿಯ ಭಾಷೆ (Gandhi's language)


Mahatma Gandhi – as a writer of simple, easy, graceful, idiomatic, forceful and succinct prose he has no equals.  Gandhiji’s prose style attained the acme of perfection in The Story of My Experiments with Truth which is unrivalled for transparent sincerity of heart and boldness of convictions.  In order to express his individual convictions about Truth and Ahimsa and his experiments with Truth Gandhiji envolved an individual style which bears the stamp of his personality.
Before writing his autobiography The Story of My Experiments with Truth Mahatma Gandhi had written numerous articles for the Indian Opinion, Navjivan, and Young India.  He had also written The History of Satyagrah in South Africa, Key to Health, a large number of letters and pamphlets.  Thus, before writing his autobiography he was well equipped with a fine style.
The writings of Carlyle, Ruskin and Tolstoy exercised formative influence on Mahatma Gandhi as a writer.  Carlyle’s the Heroes and Hero-Worship, Ruskin’s Unto This Last and Tolstoy’s The Kingdom of God is Within You captivated Mahatma Gandhi and he felt spiritual and intellectual affinity with these writers.  The prophetic and forcible style of these writers left an imperishable stamp on the style of Gandhiji.
Indeed, Mahatma Gandhi intended to write his autobiography not only for describing his own experiments with truth but also “to provide some comfort and food for reflection for my coworkers”. 
How vigorous, forceful, simple and graceful is Gandhiji’s style in the following lines!  Describing the nature of friendship he writes: “True friendship is an identity of souls rarely to be found in this world.  Only between like natures can friendship be altogether worthy and enduring.  Friends react on one another.  Hence in friendship there is very little scope for reform.  I am of opinion that all exclusive intimacies are to be avoided; for man takes in vice far more readily than virtue.  And he who would be friends with God must remain alone, or make the whole world his friend”.
The saying “style is the man” is applicable to Mahatma Gandhi’s prose style.  He was sincere in thoughts, words and deeds.  With perfect candidness and sincerity he described even the great secrets of his life and did not conceal anything about his life from readers.  His style reflects the transparent sincerity and frankness of his heart.  In this respect he is unique in Indo-Anglian prose.  Other Indo-Anglian prose masters, Pt. J.L.Nehru, Chakravarti Rajgopalachari, Lala Hardayal, Nirad C. Chaudhuri etc., have numerous graces and qualities in their prose but none of them could surpass Mahatma Gandhi in cultivating frank and sincere style.  Indeed, perfect sincerity, truth and frankness had been his chief aim in writing his autobiography.  He wrote in its introduction: “………I am not going to conceal or understate any ugly things that must be told.  I hope to acquaint the reader fully with all my faults and errors.  My purpose is to describe experiments in the science of Satyagrah, not to say how good I am”.
Mahatma Gandhi’s prose style acquired a prophetic tone, as he had to exercise moral influence on his coworkers.  The prophetic tone of his style echoes the prophetic utterances of Carlyle and Ruskin who tremendously influenced him.  The following extracts from his autobiography and other writings illustrate the prophetic quality of his style:

1.       “This Ahimsa is the basis of the search for truth.  I am realizing every day that the search is vain unless it is founded on Ahimsa as the basis.  It is quite proper to resist and attack a system, but to attack and resist its author is tantamount to resisting and attacking oneself.  For we are all tarred with the same brush, and are children of one and the same creator, and as such the divine powers within us are infinite.  To slight a single human being is to slight those divine powers, and thus to harm not only that being but with him the whole world”.
2.       To see the universal and all-pervading Spirit of Truth face to face one must be able to love the meanest of creation as oneself.  And a man who aspires after that cannot afford to keep out of any field of life.  That is why my devotion to Truth has drawn me into the field of politics; and I can say without the slightest hesitation, and yet in all humility, that those who say that religion has nothing to do with politics do not know what religion means”.

3.       Every religion is as precious to me as my own Hinduism… No though of conversion is permissible to me at all.  We must help a Hindu to become a better Hindu, a Mussalman to become a better Mussalman and a Christian to become a better Christian …… We must eradicate from our midst the secret pride that our religion is more true and that another’s is less so.  Our attitude towards all other religions must be absolutely clear and sincere.  Our prayer for others should never he, “Oh God, give me the light which Thou hast given me,” but “Give him all the light and truth that he needs for his highest attainment.”

4.       “All your scholarship, all your study of Shakespeare and Wordsworth would be in vain, if at the same time you do not build your character and attain mastery over your thoughts and actions.  When you have attained self-mastery and learnt to control your passions, you will not utter notes of despair”.

Terseness of expression is a great virtue of Mahatma Gandhi’s prose style.  He possessed it in a greater degree than any other prose writer in Indo-Anglian literature.  This terseness is attained by the use of weightiest and simplest words an by a persistent avoidance of superfluous epithets.  His autobiography, articles and speeches are the best specimen of lucid and succinct prose.  His sentences are arranged with compactness and strength.  He expressed his thoughts in the fewest possible words and employed only such terms as are the most expressive, and which add something material to the sense.  Examples of succinct, precise and ophoristic style abound in his prose.  A few examples are quoted below:

1.      “there could not be a cleaning without clean confession.”
2.      “…..but to me the Gita became in infallible guide of conduct.  It became my dictionary of daily reference.”
3.      “I was a cruelly kind husband.”
4.      “service without humility is selfishness and egotism.”
5.      “The seeker after Truth should be humbler than the dust.”
6.      “Life is greater than all art.”
7.      “Truth is hard as a adamant and tender as a blossom.”
8.      “Though God may be Love, God is Truth above all.”
9.      “A Satyagrah struggle is impossible without capital in the shape of character.”
10.  “Non-violence is the summit of bravery.”
11.  “Politics bereft of religion are a death trap because they kill the soul.”
12.  “Faith is a kind of sixth sense which works in cases which are without the purview of Reason.”
13.  “The highest form of freedom carries with it the greatest measure of discipline and humanity.”
14.  “Woe to the teacher who teaches one thing with his lips, and carries another in his breast”.
15.  “Fearless is the first requisite of spirituality.  Cowards can never be moral.”
16.  “A man is but the product of his thoughts; what he thinks he becomes.”
17.  “Work done spontaneously and joyfully is never oppressive.”
18.  “A man of few words will rarely be thoughtless in his speech; he will measure every word.”


Mahatma Gandhi employed similes, metaphors and other figures of speech to express his thoughts vigorously, forcefully and emphatically.  Below are given the examples of the artistic and poetic use of simile:
1.      “Truth is hard as adamant and tender as a blossom.”
2.      “Sir Pherozeshah had seemed to me like the Himalaya, the Lokmanya like the ocean.  But Gokhale was as the Ganges.”
3.      “Truth is like a vast tree, which yields more and more fruit, the more you nurture it.”
4.      “Polak who joined the Phoenix settlement took to it “like a duck takes to water.”
5.      The under-dog “live packed like sardines.”  The following are the examples of metaphor:
a.      “Mine was but a feeble pipe amongst those veteran drums.”
b.      “The deeper the search in the mine of truth, the richer the discovery of the gems buried there, …..”
“A cruelly kind husband” is an example of oxymoron.
Mahatma Gandhi’s prose style is unique for precision, clarity, frankness, sincerity, prophetic tone and vigour in Indo-Anglian prose.  His is an idiomatic style which is remarkable for purity and propriety in the use of words and phrases, and clearness and unity in the structure of sentences.  Gandhiji’s style is always correct in construction and perspicuous in meaning.

-     Dr. R. G. Mathapti

    Date: 25-11-2006

Submitted to            :     Academic Staff College, Karnatak University, Dharwad.


Saturday, November 5, 2011

ಸಾಧನೆಯ ಹಾದಿಯಲ್ಲಿ: ಡಾ ಐ ಎಮ್ ಮೋಹನ್

                            
                     

‘ಪ್ರೀತಿಯಿಲ್ಲದೆ ನಾನೇನೂ ಮಾಡುವುದಿಲ್ಲ. ದ್ವೇಷವನ್ನೂ ಕೂಡ ’-ಇವು ನನ್ನ ಗುರುಗಳಾದ ಚಂಪಾ ಅವರ ಸಾಲುಗಳು. ಈ ಪ್ರೀತಿಯ ನೆಲೆಗಳೇ ವಿಚಿತ್ರ. ಒಂದಂತೂ ಸತ್ಯ, ಪ್ರೀತಿಸದ, ಪ್ರೀತಿಗೊಳಪಡದ ಬದುಕಿಗೆ ಒಂದು ಹಿತವಿರುವುದಿಲ್ಲ. ನಾನು ಬೇಲೂರಿಗೆ ಬಂದಂದಿನಿಂದ ನನ್ನ ಪ್ರೀತಿಯ ತೆಕ್ಕೆಗೆ ಬಿದ್ದ ಕೆಲವೇ ಹಿರಿಯರಲ್ಲಿ ಡಾ.ಐ ಎಮ್ ಮೋಹನ್ ರು ಒಬ್ಬರು. ಈಗ ಅವರಿಗೆ ೫೬ನೆಯ ಕನ್ನಡ ರಾಜ್ಯೋತ್ಸವದ ಅಂಗವಾಗಿ ಇದೇ ಹದಿಮೂರರಂದು ಬೇಲೂರಿನಲ್ಲಿ ನಾಗರಿಕ ಸನ್ಮಾನ. ಹೀಗಾಗಿ ಅವರ ಸಾಧನೆಯ ಹಾದಿಯ ಒಂದು ಅವಲೋಕನ ನಿಮ್ಮೊಂದಿಗೆ ಅವಶ್ಯಕ ಎಂದುಕೊಂಡಿದ್ದೇನೆ ನಾನು.  

        ಮೂಲತಃ ಈ ಪ್ರಪಂಚದಲ್ಲಿ ಯಾವುದಕ್ಕೂ ಯಾವ ಅರ್ಥವೂ ಇಲ್ಲ. ಒಂದರ್ಥದಲ್ಲಿ ಅರ್ಥ ಎನ್ನುವುದು ಆಪಾದನೆ. ಅದೊಂದು ರೀತಿಯ ಎಡಿಷನ್(edition). ಈ ಬದುಕೇ ಒಂದು ರೀತಿಯ ಅರ್ಥದ ಅನ್ವೇಷಣೆ. ಕ್ರಿಯೆಯ ಮೂಲಕ ಅರ್ಥಗಳನ್ನು ತುಂಬಿ ಮನುಷ್ಯ ಮಹಾನ್ ಆಗುತ್ತಾ ಬಂದಿದ್ದಾನೆ. ಮತ್ತು ಅಂಥವರ ಬದುಕು ಅರ್ಥಪೂರ್ಣ ಬದುಕು ಎಂದು ಇತಿಹಾಸದಲ್ಲಿ ದಾಖಲಿಸಿದ್ದಾನೆ.

       ಬದುಕಿಗೆ ಈ ಅರ್ಥಗಳನ್ನು ಆಪಾದಿಸುವ, ಅರ್ಥದ ಹೊಸ ಸಾಧ್ಯತೆಗಳನ್ನು ಹುಡುಕುವ ಮನುಷ್ಯ ಯಾವ ದೊಡ್ಡ ಕುಟುಂಬಕ್ಕೆ ಸಂಬಂಧಿಸಿದವನು ಮತ್ತು ಯಾವ ರಾಜಕೀಯ, ಆರ್ಥಿಕ, ಶೈಕ್ಷಣಿಕ ಹಿನ್ನೆಲೆಗಳಿಂದ ಬಂದವನು ಎನ್ನುವ ಪ್ರಶ್ನೆಗಳು ಮುಖ್ಯವಾಗುವುದಿಲ್ಲ, ಬದಲಾಗಿ ಆತ ಯಾವ ಬದ್ಧತೆಗಳನ್ನು ಕಾಯ್ದುಕೊಂಡವನು ಎನ್ನುವುದು ಚಿಂತನಾರ್ಹ. ಮನುಷ್ಯ ಎಂದರೆ ಬದ್ಧತೆ. ಇಂತಹ ಬದ್ಧತೆಗೆ ಒಂದು ಉದಾಹರಣೆ ಡಾ ಐ ಎಮ್ ಮೋಹನ್.

       ಕನಾಟಕದಲ್ಲಿ ಬರೀ ಪ್ರಾಂಶುಪಾಲರಾಗಿದ್ದುಕೊಂಡೇ ಸಾಧನೆ ಮಾಡಿದ ಕೆಲವರಿದ್ದಾರೆ. ಉದಾಹರಣೆಗಾಗಿ ಹೇಳಬೇಕೆಂದರೆ ಪ್ರೊ.ಗಣಾಚಾರಿ, ಭೋಗಿಶಯನ, ಪ್ರೊ ಜಿ ಬಿ ಸಜ್ಜನ. ಇವರೆಲ್ಲಾ ಒಂದು ಕಾಲೇಜಿನ ಪ್ರಾಂಶುಪಾಲರಾಗಿ ಸಮಾಜದ ಗಮನ ಸೆಳೆದ ವ್ಯಕ್ತಿಗಳು. ಈಗ ಈ ಪರಂಪರೆಗೆ ಒಂದು ಹೊಸ ಸೇರ್ಪಡೆ ಡಾ ಐ ಎಮ್ ಮೋಹನ್.

       ೧೯೬೪ರ ನವ್ಹೆಂಬರ್ ೧೮ ರಂದು ಐರವಳ್ಳಿ ಮಂಜೇಗೌಡ ಮೋಹನರವರು ಬೇಲೂರು ತಾಲ್ಲೂಕಿನ ಪುಟ್ಟ ಗ್ರಾಮವಾದ ಐರವಳ್ಳಿಯಲ್ಲಿ ಜನಿಸಿದರು. ಬಾಲ್ಯದ ಏಳನೇಯ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡರೂ ತಾಯಿ ಹುಚ್ಚಮ್ಮನವರ ಮಮತೆ, ಬೆಳವಣಿಗೆಯ ಯಾವ ಹಂತಗಳಲ್ಲೂ ಕೈ ಬಿಡಲಿಲ್ಲ. ನಿಷ್ಠುರತೆ, ಶಿಸ್ತು, ಕೃಷಿ ಕುರಿತ ಕಾಳಜಿ, ಒಕ್ಕಲುತನದ ಸೂಕ್ಷ್ಮತೆ ಹಾಗೂ ಸಂಗೀತದ ದೀಕ್ಷೆಯನ್ನು ತಂದೆ ಮಂಜೇಗೌಡರಿಂದ ಪಡೆದಿದ್ದ ಮೋಹನ, ಅಣ್ಣ-ಅಕ್ಕರೊಂದಿಗೆ ಜೀವನವನ್ನು ಅರ್ಥೈಸಿಕೊಂಡರು. ಪ್ರಾಥಮಿಕ ಶಿಕ್ಷಣವನ್ನು ಗೆಂಡೆಹಳ್ಳಿಯಲ್ಲಿ, ಕಾಲೇಜು ಶಿಕ್ಷಣವನ್ನು ಹಾಸನದಲ್ಲಿ, ಹಾಗೂ ಸ್ನಾತಕೋತ್ತರ ಶಿಕ್ಷಣವನ್ನು ಮಂಗಳೂರಿನಲ್ಲಿ ಪೂರೈಸಿದರಲ್ಲದೇ, ಸಧ್ಯ ಬೆಳಗಾವಿಯ ರಾಣಿ ಚೆನ್ನಮ್ಮಾ ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಡಾ. ಅನಂತನ್ ಅವರ ಮಾರ್ಗದರ್ಶನದಲ್ಲಿ ಬಹಾದ್ದೂರ ಇನಸ್ಟಿಟ್ಯೂಟ್ ಆಫ್ ಮ್ಯಾನೆಜ್‌ಮೆಂಟ್ ಮೈಸೂರಿನಿಂದ ಡಾ ಐ ಎಮ್ ಮೋಹನ್ ತಮ್ಮ ಪಿ.ಎಚ್.ಡಿ ಯನ್ನು ಪೂರೈಸಿದರು.

        ಯಾವ ವ್ಯಕ್ತಿಯು ಸ್ವಯಂಭೂ ಅಲ್ಲ. ಆತ ಅನೇಕ ವ್ಯಕ್ತಿ ಮತ್ತು ಶಕ್ತಿಗಳ ಸಂಗಮ. ಅನೇಕ ಪ್ರಭಾವಗಳ ಪ್ರತಿಫಲನ. ಹಾಗೆಯೇ ಡಾ ಐ ಎಮ್ ಮೋಹನ್‌ರನ್ನೂ ಕೂಡ ಅನೇಕ  ಗುರುವರ್ಯರು ರೂಪಿಸಿದ್ದಾರೆ. ಅವರಲ್ಲಿ ಪ್ರಮುಖವಾಗಿ ಎಮ್ ನರಸಿಂಹಮೂರ್ತಿ, ಪ್ರೊ ರಂಗರಾವ್, ಪ್ರೊ ನರಸಿಂಹರಾವ್, ಪ್ರೊ ಶ್ರೀಪಾದ ಹಾಗೂ ಡಾ.ಅನಂತನ್ ಅವರನ್ನೂ ಇಲ್ಲಿ ಸ್ಮರಿಸಬಹುದು. ಇದುವರೆಗೆ ೫೦ ಕ್ಕೂ ಮೀರಿದ ಪ್ರೊಜೆಕ್ಟ್‌ಗಳಿಗೆ, ಏಳು ಜನ ಎಮ್‌ಫಿಲ್ ವಿದ್ಯಾರ್ಥಿಗಳಿಗೆ ಹಾಗೂ ಓರ್ವ ಪಿಎಚ್‌ಡಿ ವಿದ್ಯಾರ್ಥಿಗೆ ಮಾರ್ಗದರ್ಶಕರಾಗಿರುವ ಡಾ ಐ ಎಮ್  ಮೋಹನ್ ಕ್ರಿಯಾಶೀಲ ಜೀವನ ಪದ್ಧತಿಯನ್ನ ರೂಢಿಸಿಕೊಂಡಿದ್ದಾರೆ.

         ಹೊಳೆನರಸೀಪುರ, ಮೈಸೂರು, ಕುಶಾಲನಗರ, ಹಾಸನ, ಸಕಲೇಶಪುರ ಹಾಗೂ ಸಧ್ಯ ಬೇಲೂರಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಡಾ ಐ ಎಮ್ ಮೋಹನ್ ನಿಂತ ನೀರಲ್ಲ. “ಹರಿವ ಹೊಳೆಗೂ ಉಂಟು ಎರಡು ತೋಳು, ಬೆಸೆಯಬೇಕಲ್ಲವೇ ನಮ್ಮ ಬಾಳು” ಎನ್ನುವ ಕವಿವಾಣಿಯಂತೆ ತಾವು ಸೇವೆ ಸಲ್ಲಿಸಿದ ಪ್ರತಿ ಸ್ಥಳದಲ್ಲಿಯೂ ಡಾ. ಮೋಹನ ಏನಾದರೂ ಒಂದು ಹೊಸದನ್ನು ಮಾಡಲು ಹೆಣಗಾಡಿದ್ದಾರೆ. ಯುಜಿಸಿ ಗೆ ಸಂಬಂಧಪಟ್ಟ ಅನೇಕ ಚಟುವಟಿಕೆಗಳಲ್ಲಿ ತಮ್ಮನ್ನೇ ತಾವು ಯಾವಾಗಲೂ ತೊಡಗಿಸಿಕೊಂಡು ನಿರ್ಜೀವ ಕಾಲೇಜಿಗೆ ಜೀವ ತುಂಬುವ ಪ್ರಯತ್ನ ಮಾಡಿದ್ದಾರೆ. ಸಧ್ಯ ಕಾಲೇಜಿಗೆ ಹೊಸ ಕಾಯಕಲ್ಪ ನೀಡಿದ್ದಾರೆ. ಗೂಂಡಾಗಿರಿ, ಅಶಿಸ್ತು, ಅಕ್ರಮತೆಯ ಕೇಂದ್ರವಾಗಿದ್ದ ಕಾಲೇಜನ್ನು ಶಿಸ್ತು, ಸಮಯ ಪರಿಪಾಲನೆಯ ಮೂಲಕ ವಿದ್ಯಾಮಂದಿರವಾಗಿ ಬದಲಾಯಿಸಿ ಬೇಲೂರು ಜನತೆಯ ಪ್ರೀತಿ ಮತ್ತು ಗೌರವಗಳಿಗೆ ಭಾಜನರಾಗಿದ್ದಾರೆ. ಇಂದು ಡಾ.ಮೋಹನರವರನ್ನು ಗುರುತಿಸುವುದೆಂದರೆ ವೈಡಿಡಿ ಕಾಲೇಜನ್ನೇ ಗುರುತಿಸಿದಂತೆ. ಒಂದು ಸಾರ್ಥಕ ಬದುಕಿರಬೇಕು, ಕಾಯಕದ ಬಗ್ಗೆ ತೃಪ್ತಿ ಇರಬೇಕು, ಆಮೂಲಕ ಸಮಾಜದ ಋಣ ತೀರಿಸಬೇಕು ಎಂದು ಸದಾ ಆಲೋಚಿಸುವ ಡಾ. ಮೋಹನ ಧೀರ್ಘಾಯುಷಿಗಳಾಗಲಿ ಎನ್ನುವುದು ನಮ್ಮ ಹರಕೆ.

         ತಮ್ಮ ಸಹಧರ್ಮಿಣಿಯು, ಸಹೊದ್ಯೋಗಿಯೂ ಆಗಿರುವ ಶ್ರೀಮತಿ ಎಚ್ ಎಸ್ ಸುನಂದಾ ಅವರಿಂದಲೂ ನಾನು ಈ ಬದುಕಿನಲ್ಲಿ  ಏನೆಲ್ಲವನ್ನು ಕಲಿತಿದ್ದೇನೆ ಎಂದು ವಿನೀತನಾಗಿ ಹೇಳುವ ಡಾ.ಮೋಹನ ವೈದ್ಯಕೀಯ ಓದುತ್ತಿರುವ ಎರಡು ಮಕ್ಕಳ ತಂದೆ ಕೂಡ. “ಮನೆ ಗೆಲ್ಲದವನು ಸಮಾಜವನ್ನು ಗೆಲ್ಲಲಾರ” ಎನ್ನುವ ಸತ್ಯವನ್ನು ತಿಳಿದಿರುವ ಡಾ.ಮೋಹನ ತಮ್ಮ ವೈಯಕ್ತಿಕ ಬಾಳನ್ನು ಸೊಗಸಾಗಿರಿಸಿಕೊಂಡವರು. ಈ ಸೊಗಸಾದ ಬಾಳು ನಿರಂತರವಾಗಿರಲಿ ಎನ್ನುವುದೇ ನಮ್ಮ ನಿಮ್ಮೆಲ್ಲರ ಹಾರೈಕೆ ಅಲ್ಲವೇ?