Total Pageviews

Friday, April 27, 2018

ನಾನೊಂದು ದಾರಿ


ಭಗವಂತನೆ,
ನೀ ನನ್ನ ಅನಾಹತ ಗಾನ

ನಿನ್ನ ಕಾರುಣ್ಯದ ಫಲ ನಾನು
ನೀನು ಪರಮ ಆತ್ಮ, ಪರಮಾತ್ಮಾ
ನಾ ನಿನ್ನ ಆತ್ಮ

ಆದರೂ
ಲೋಕದ ಸಂತೆಯಲ್ಲಿ
ಮಾಂಸ ಮಾರುಕಟ್ಟೆಯ ಲೆಕ್ಕದಲ್ಲಿ
ನಾನು ಯಾರು? ನಾನು ಏನು?

ದೂರದ ಧ್ವನಿ
ನೀನೊಂದು ದಾರಿ,
ನಿನೊಂದು ಬೆಳಕು
ನಿನಗೂ ಆತ್ಮವಿದೆ

ಹೌದು,
ನನಗೂ ಆತ್ಮವಿದೆ ದೇವಾ,
ನಾನೊಂದು ನಿರಾಳ ದಾರಿ
ವಿಕಾರಗಳ ಲೆಕ್ಕದಾಚೆಯವನು

ನಡೆದಷ್ಟೂ ದೀರ್ಘ
ನುಡಿದಷ್ಟೂ ಮೌನ
ಮಾನ-ಸಮ್ಮಾನ
ಅವಮಾನ-ಸುಮ್ಮಾನ
ತೀರ್ಮಾನಗಳೆಲ್ಲ
ಅವರವರ ಬುತ್ತಿಯ ಊಟವಷ್ಟೆ
ಬಳಸಿಕೊಂಡಷ್ಟೂ ಬತ್ತದ ನಾನು
ದಾರಿಯಷ್ಟೆ
ತುಳಿಸಿಕೊಳ್ಳುತ್ತೇನೆ,
ಹಳಿಸಿಕೊಳ್ಳುತ್ತೇನೆ,
ಆದರೂ, ಶಿರಬಾಗಿ
ಉಳಿಸಿಕೊಳ್ಳುತ್ತೇನೆ ಅವರ ನೆನಪುಗಳ

ತುಳಿದವರ ಪಾದದ ಹಿಡಿ ಮಣ್ಣಲ್ಲಿ
ನನ್ನ ಅನ್ನ ಗಳಿಸಿಕೊಳ್ಳುತ್ತೇನೆ
ನೂರು ಜಾನಕಿಯರ ಹೆತ್ತು
ಜನಕನಾಗುತ್ತೇನೆ, ಧನಿಕನಾಗುತ್ತೇನೆ.

ನಾನು ದಾರಿ,
ಬರೀ ದಾರಿನಾನು
ಜಗದ ಪಾದಗಳ ಸೃಷ್ಟಿ
ನನ್ನ ಮೈ ತುಂಬಲೂ
ಲೋಕದ ಪಾದ ಮುದ್ರೆಗಳ ಅತಿವೃಷ್ಠಿ
ನಾನು ದಾರಿ
ಹೇಳಿದೆನಲ್ಲ ಪಾದಗಳ ಸೃಷ್ಟಿ,
ಮಾತನಾಡುತ್ತೇನೆ
ಅವುಗಳೊಂದಿಗೆ ಅಷ್ಟೆ

ಯಾಕೆಂದರೆ
ಪಾದಗಳಿಗೆ ನಾಲಿಗೆ ಇಲ್ಲ, ಬುದ್ಧಿ ಇಲ್ಲ
ಮೇಲಿಲ್ಲ-ಕೀಳಿಲ್ಲ, ಬಡವ-ಧನಿಕನಿಲ್ಲ
ಪಶು-ಪಕ್ಷಿ, ಕ್ರಿಮಿ-ಕೀಟ, ನಗ್ನ-ಭಗ್ನಗಳಿಲ್ಲ
ಇಲ್ಲಿ ತಕ್ಕಡಿ ಇಲ್ಲ,
ಇಲ್ಲ ಆಲಯವೂ

ಭಗವಂತನೆ
ಈಗ ನೀನೂ ಇಲ್ಲ,
ನಾನಳಿದು ಶತಮಾನವೇ ಉರುಳಿತು
ನಾನು
ದಾರಿ ಎಂಬ ನಂಬಿಕೆ ಮಾತ್ರ
ಬರೀ ನಂಬಿಕೆ
ನಂಬಿಕೆ!!? !!? !!?

Friday, April 20, 2018

ಆತ್ಮಕಥೆ: ಆತ್ಮ ವಿಕಸನ


Any one can tell the whole truth about himself. But Vanity, direction of interest and their disappointment with themselves have prevented them.
         ಇದು ಪ್ರಪಂಚದ ಆತ್ಮ ಸದ್ಗತಿಯ ಶೋಧದಲ್ಲಿರುವ ಪ್ರತಿಯೊಬ್ಬ ಸಾಧಕರೂ ನಂಬಿರುವ ಮಾತು. ಕಾರಣಕ್ಕಾಗಿಯೇ ಆತ್ಮ ಸಾಕ್ಷಾತ್ಕಾರ, ಆತ್ಮೋನ್ನತಿ, ಆತ್ಮೋದ್ಧಾರ, ಆತ್ಮವೃತ್ತಾಂತ ಹಾಗೂ ಆತ್ಮ ಕಥೆಯಂಥ ಪದ-ಪುಂಜಗಳ ಹಾಗೂ ಪ್ರಯೋಗಗಳ ಪ್ರಯತ್ನ ನಡೆಯಿತು.
      ಸತ್ಯ ಸರಳವಾಗಿದೆ, ಕಾರಣಕ್ಕಾಗಿಯೇ ಅದರ ಅನುಸರಣೆ ಕ್ಲಿಷ್ಟಕರವಾಗಿದೆ. ಸುಳ್ಳಿಗಿರುವ ಸಾಧ್ಯತೆಗಳು ಸತ್ಯಕ್ಕಿಲ್ಲ, ಆದರೆ ಸತ್ಯದಲ್ಲಿ ಸಿಗುವ ಸಮಾಧಾನ, ಸಂಭ್ರಮ ಮತ್ತು ಸ್ಥಿತಪ್ರಜ್ಞಾ ಸಂತೃಪ್ತಿ ಸುಳ್ಳಿನಲ್ಲಿ ಎಂದೂ ಸಾಧ್ಯವಿಲ್ಲ. ಸಾಹಿತಿ, ಸಹೃದಯಿ ಹಿರಿಯರಾದ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿಯವರ ಆತ್ಮಕಥೆಯ ಉತ್ತರಾರ್ಧಗಿರಿಜವ್ವನ ಮಗಲೋಕಾರ್ಪಣೆಗೊಂಡು ನನ್ನ ಮೇಲಿನ ಆಲೋಚನೆಗಳಿಗೆ ಕಾರಣವಾಯಿತು.
       ದೆಹಲಿಯಿಂದ ಮರಳುತ್ತಲೇ ನಾನು ಸಮರ್ಥವಾಗಿ ನಿಭಾಯಿಸಬೇಕಾಗಿದ್ದ ಮಹತ್ವದ ಸಮಾರಂಭ ಇದು. ಗದಗಿ ತೋಂಟದ ಮಠದ, ಎಂ.ಎಂ. ಕಲಬುರ್ಗಿ ಸಂಶೋಧನಾ ಕೇಂದ್ರದಿಂದ ಪ್ರಕಟಗೊಂಡ 238 ಪುಟಗಳ, 8 ಅಧ್ಯಾಯಗಳ ಆತ್ಮಕಥೆ ಒಂದರ್ಥದಲ್ಲಿ ಯಾದವಾಡ, ಮನ್ಸೂರು, ಮನಗುಂಡಿ ಹಾಗೂ ಧಾರವಾಡ ನಗರಗಳ ಆತ್ಮವೃತ್ತಾಂತವೇ ಸರಿ. ವ್ಯಕ್ತಿ ಸಮಷ್ಠಿಯಾಗುವುದು, ಸಮಷ್ಠಿ ವ್ಯಕ್ತಿಯಲ್ಲಿ ಅವಿತುಕೊಳ್ಳುವುದೆಂದರೆ ಇದೇ ಆಗಿರಬಹುದು.
         ‘ಬೈದವರೆನ್ನ ಬಂಧುಗಳೆಂಬೆ, ಬಡಿದವರೆನ್ನ ಒಡಹುಟ್ಟಿದವರೆಂಬೆಎನ್ನುವ ಸೂತ್ರವನ್ನೆ ಉಸಿರಾಗಿಸಿಕೊಂಡು ಬದುಕು ನೀಡಿದುದೆಲ್ಲವನ್ನು ನಿರ್ಭಾವುಕವಾಗಿ ಒಡಲೊಳಗಿರಿಸಿಕೊಂಡು ನಡೆದ ಅವರ ಆತ್ಮಕಥೆಯನ್ನು ಓದುವಾಗ ನನಗೆ ಸಾಮರ್ ಸೆಟ್ ಸಾಲುಗಳು ನೆನಪಾಗುತ್ತಿದ್ದವು - I am not gravely shocked at the sins of others unless they personally affected me and even when they do I have learnt at last generally to excuse them. It is meet not to expect too much of others. You should be grateful when they treat you well, but unperturbed when they treat you ill. For every one of is made pretty much what he is by the bent of his desires and the need of his soul.  
           ಬದುಕೆಂದರೇನು? ಅಂದರೇನು? ಅಂದುಕೊಳ್ಳುವುದರಲ್ಲಿಯೇ ಬತ್ತಿಬಿಡುತ್ತದೆ ಬದುಕಿನ ಹಳ್ಳ. ಆದರೆ ಸತ್ತು ಬಿಡುವುದಿಲ್ಲ. One does not die immediately one has made one’s will. ಅನ್ಯವಾಗಿ-ಭಿನ್ನವಾಗಿ ರೂಪಾಂತರಗೊಂಡು ಕಾಡುತ್ತಲೇ ಇರುತ್ತದೆ. ನೆನಪುಗಳ ಶರಶೆಯ್ಯ ಮೇಲೆ ಮಲಗಿರುವ ನಾವೆಲ್ಲ ಅರ್ಥದಲ್ಲಿ ಭೀಷ್ಮಾಚಾರ್ಯರೆ. ಅಂತೆಯೇ ಹೇಳುತ್ತಾರೆ - A great part of our lives is occupied in reverie and the more imaginative eye are, the more varied and vivid this will be. How many of us could face having our reveries automatically registered and set before us? We should be overcome with shame. We should cry that we could not really be as mean, as  wicked as pretty, as selfish, as obscene, as snobbish, as vain, as sentimental as that. But reveries as important as cautions.

ಕನ್ನಡದಲ್ಲಿ ನಾನು ಅತಿ ಹಚ್ಚು ಓದಿದ ಲೇಖಕರ ಪಟ್ಟಿಯಲ್ಲಿ ಬರುತ್ತಾರೆ ಸಿದ್ದಲಿಂಗ ಪಟ್ಟಣಶೆಟ್ಟಿ. ಅವರಮೀರಾ ವಾಣಿ’, ‘ಆಶಾಡದ ದಿನಗಳು’, ‘ನೀನಾಕಾವ್ಯಸಕಲನ ಹಾಗೂಸ್ಥಿತಪ್ರಜ್ಞಾ ದರ್ಶನನನ್ನ ಅತ್ಯಂತ ಪ್ರೀತಿಯ ಓದುಗಳು. ಮಹಾ ಪದಮೋಹಿ ಪ್ರೊ. ಪಟ್ಟಣಶೆಟ್ಟಿ. ಅವರ ನಾಯಿ ಬೆಳ್ಳಿಯಪ್ಪ, ಮಗ ಸಮುದ್ರ ಹಾಗೂ ಮಗಳು ಹೂ ನನ್ನ ಮನೋಲೋಕದ ಮಹತ್ವದ ಪಾತ್ರಗಳೆ. ಪದಗಳ ಪವಾಡ ಗೊತ್ತಿರುವ ನಮ್ಮ ಮಧ್ಯದ ಅಪರೂಪದ ಲೇಖಕ ಅವರು. ಅವರಿಗೆ ಗೊತ್ತು Words have weight sound and appearance. It is only by considering these that you can write sentence that is good to look at and good to listen to.
 ಮೂರು ವರ್ಷಗಳ ಹಿಂದೆ ನನ್ನಪ್ರೀತಿ ನಲವತ್ತು ರೀತಿಕೃತಿ ಲೋಕಾರ್ಪಣೆಗೊಳಿಸುತ್ತ, ನನ್ನ ಬರಹವನ್ನು ಕುರಿತು ಪ್ರೊ. ಬರಗೂರು ಕೆಲವು ಮಾತುಗಳನ್ನಾಡಿದ್ದರು – ‘ಕೆಲವು ಲೇಖಕರು ಓದಿಸಿಕೊಳ್ಳುವುದಿಲ್ಲ, ಮತ್ತೆ ಕೆಲವರು ಓದಿಸಿಕೊಂಡು ಒಳಗೆ ಬಿಟ್ಟುಕೊಳ್ಳುವುದಿಲ್ಲ, ಒಳಗೊಯ್ದು ಒಂದು ವಿಶಾಲ-ವಿಚಾರ-ಬಾವಲೋಕದ ವಿಹಾರ ಮಾಡಿಸುವುದಿಲ್ಲ. ಇನ್ನು ಕೆಲವರು ಮಾಡಿಸಿಯೂ ಒಂದು ತಾತ್ವಿಕ ಪ್ರಶ್ನೆ ಹುಟ್ಟಿಸುವುದಿಲ್ಲ. ಪ್ರಶ್ನೆ ಹುಟ್ಟಿಸಿದವರು ಕೆಲವೊಮ್ಮೆ ಹೈರಾಣಾಗಿಸಿ ದಡಕ್ಕೆ ತಂದು ಬಿಡುವುದಿಲ್ಲ. ಹೀಗಾಗಿ ಅಂದೊದು ಅರ್ಥಪೂರ್ಣ ಓದಲ್ಲ.’ ಮಾತುಗಳನ್ನು ಇಲ್ಲಿ ನೇರವಾಗಿ ಅನ್ವಯಿಸಿ ಕವಿ, ಪ್ರೊ. ಸಿದ್ದಲಿಂಗ ಪಟ್ಟಣಶೆಟ್ಟಿ ಮಿತಿಗಳನ್ನು ಕ್ರಮಿಸಿದ ಓರ್ವ ಸಮರ್ಥ ಬರಹಗಾರ. ಅದಕ್ಕೆ ಮತ್ತೊಂದು ಸಾಕ್ಷಿ ಗಿರಿಜವ್ವನ ಮಗ’.
   ಏನೆಲ್ಲವೂ ಇದೆ ಕೃತಿಯಲ್ಲಿ, ಮರೆಯಲಾಗದ ಪುಟಗಳಲ್ಲಿಯಾದವಾಡ ವಿರುಪಾಕ್ಷಜ್ಜನ ಕಾಠೇವಾಡಿ ಕುದುರೆ, ಕೂಲಿ ಹಾಯ್ದು ಕಾಲು ಕೊಯ್ದಾಗ ಕಾಯ್ದ ಗುರುಸಿದ್ದ ಮಾವ, ಸಾವುಕಾರ ಸಂಗಪ್ಪನ ಕೊಲೆಯಿಂದ ಮಾನ ಕಳೆದುಕೊಂಡ ಯಾದವಾಡವೆಂಬ ತಾಯಿ, ಗಲಗಿನ ದೌತಿ ನೀಡಿ ಅಕ್ಷರ ದಾಸೋಹ ನೀಡಿದ ಬಸಪ್ಪ ಕಾಕಾ, ಸತ್ಯವಾನ ಸಾವಿತ್ರಿ ಸಣ್ಣಾಟದಲ್ಲಿ ಕ್ವಾಣದ ಮೇಲೆ ವೇದಿಕೆಗೆ ಬಂದ ಬಸಯ್ಯ, ಸೀರೆ ಹುಡುಕಿದ ಸಣ್ಣ, ದೊಡ್ಡ ಮತ್ತು ನಡುಕಿನ ಮಾವಂದಿರು, ಯಾದವಾಡದಲ್ಲಿ ಬೆಳವಡಿ ಮಲ್ಲಮ್ಮ ಮತ್ತು ಶಿವಾಜಿಗೆ ಸಂಬಂಧಿಸಿದ ಒಂದು ಶಿಲಾ ಲೇಖ, ಅವ್ವನ ಗೆಳತಿ ಓಮವ್ವನ ಕಥೆ, ದನಗಳ ಮಾರಾಟದ ಗಣಿಸಾಬಾ ಮತ್ತು ಮನ್ಸೂರಿನ ಮಲ್ಲೇಶಪ್ಪ ಊರ್ಫ ಮಲ್ಲಿಕಾರ್ಜುನ ಮನ್ಸೂರ ಹೀಗೆ ಹಲವಾರು ಪಾತ್ರಗಳು ಘಟನೆಗಳು. ಇಲ್ಲಿ ಸಿದ್ದಲಿಂಗ ಪಟ್ಟಣಶೆಟ್ಟಿ ನೆಪ ಮಾತ್ರ.
      ಸಿದ್ದಲಿಂಗ ಪಟ್ಟಣಶೆಟ್ಟಿ ಗಾಂಧಿ ಹತ್ಯೆಯ ಹಿನ್ನಲೆಯಲ್ಲಿ ಚಹಾ ಕುಡಿಯುವುದನ್ನೇ ಬಿಟ್ಟ ಪುಸ್ತಕದ ಪ್ರಸಂಗ ನನ್ನನ್ನು ತುಂಬಾ ಕಾಡಿದೆ. ಇದು ಹತ್ಯೆಯನ್ನು, ಹಿಂಸೆಯನ್ನು ವಿರೋಧಿಸಿದ ಸತ್ಯಾಗ್ರಹದ ಒಂದು ಮಾರ್ಗದಂತೆ ನನಗೆ ಕಂಡಿದೆ. ನಾವು ಆರಾಧಿಸುವ ಯಾವುದೇ ವ್ಯಕ್ತಿಗೆ ಗೌರವ ಕೊಡುವುದೆಂದರೇನುಅವರು ನಂಬಿದ ಮೌಲ್ಯಗಳಿಗೆ ಧಕ್ಕೆಯಾದಾಗ ನಾವೂ ನಲುಗುವುದು ಎಂದೇ ಅಲ್ಲವೆ?
        ಗದಿಗೆಮ್ಮ ಗದ್ದುಗೆಯಾದ ಪ್ರಸಂಗ ಯಾರೂ ಮರೆಯಲಾಗದ ಕಟುವಾಸ್ತವ. ಕರುಳು ಹಿಂಡುವ ಸಂದರ್ಭವನ್ನು ಓದಿಯೇ ಅನುಭವಿಸಬೇಕು.
          ನಾವ್ಯಾರು ದೂರದವರಲ್ಲ, ಹೊರಗಿನವರಲ್ಲ, ಒಬ್ಬರಿನ್ನೊಬ್ಬರಿಂದ ಸೀಳಿಕೊಂಡವರಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೇಶ ವಿಭಜನೆ, ಅಲ್ಲಾ ಭಕ್ಷ ಮತ್ತು ಚೋಂಗ್ಯ ಘಟನೆ ಇಲ್ಲಿ ಅನಾವರಣಗೊಂಡಿದೆ, ಜಾತಿ ಕದನಗಳಿಂದ ಪ್ರಕ್ಷುಬ್ಧಗೊಂಡ 1947 ಸಂದರ್ಭದಲ್ಲಿ ಮುಸ್ಲಿಂ ಕುಟುಂಬ ಒಂದು ಪಟಣಶೆಟ್ಟರ ಊರಿಗೆ ಬಂದು ಮರೆಯಾಗಿ ಹೋಗುವ ಘಟನೆ, ಪ್ರತಿಯೊಂದು ಊರಿನ ಹೊಟ್ಟೆಯಲ್ಲೂ ಘಟಿಸಿರಬಹುದಾದ ತಳಮಳಕ್ಕೆ ಸಾಕ್ಷಿಯಾಗುತ್ತದೆ.
          ಇಡೀ ಪುಸ್ತಕದ ಶಕ್ತಿ ಅಡಗಿರುವುದೇ ಗುರು ಪರಮಪರೆಯ ಸ್ಮರಣೆಯಲ್ಲಿ. ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ನೂರಾರು ಪುಟಗಳಲ್ಲಿ ಗಿರಿಜವ್ವನ ಮಗನಾಗಿದ್ದ ತಮ್ಮನ್ನು ನಾಡು-ನುಡಿಯಾಗಿಸಿದ  ಗುರುಗಳನ್ನು ಸ್ಮರಿಸುವುದರಲ್ಲಿ, ಅವರ ಅನನ್ಯ ವ್ಯಕ್ತಿತ್ವಗಳನ್ನು ಅನಾವರಣಗೊಳಿಸುವುದರಲ್ಲಿ ವ್ಯಯಿಸಿದ್ದಾರೆ. ಟ್ರೇನಿಂಗ ಕಾಲೇಜ ಸೇರಿಸಿದ ಸಂಗಪ್ಪ ಮಾಸ್ತರು, ರಾಯರ ಅಂಗಡಿ, ಬಾಸೆಲ್ ಮಶಿನ್ ಸ್ಕೂಲ್, ಮುಳುಗುಂದ ಮಠದ ಗುರುಗಳು, ಬಂಗಾರಿ ಗುರುಗಳು, ಕೆ.ಎಸ್. ಪಾಟೀಲ್, .. ನವಲಗುಂದ ಹುದ್ದಾರ, ಅರಳಗುಪ್ಪಿ ಸರ್, ದಾತಾರ ಸರ್, ಸಾರಂಗ ಮಠ ಸರ್ ಹಾಗೂ ಹಲವರು.
          ಪ್ರೀತಿಯ ದಾಳಿಗೊಳಗಾದವರು ಕವಿ ಪಟ್ಟಣಶೆಟ್ಟಿ. ಪುಸ್ತಕದ ಪುಟ ಪುಟವೂ ಗೆಳೆಯರುಮಲ್ಲಪ್ಪ ಬಂಗಾಲಿ, ಮೌಲಾನಾ, ಶಂಕರ ಬಂಗಾರಿ ಮಾಲತಿ ಕೋಟೂರ, ಶ್ರೀಪಾದ ಅಣವೇಕರ ಕೊಟಬಾಗಿ ಬಸೂ, ತೇಗೂರು ಮೂಗಪ್ಪ, ವಡ್ಡರ ಚಂದ್ರಶೇಖರ, ಸುನಗದ ಮೌಲಾ, ಮೋತಿಲಾಲ ಹಲವಾಯಿ, ಹನುಮಂತ ಚೌಧರಿ ಹಾಗೂ ಶಿವಶಂಕರ ಹಿರೇಮಠ.
           ‘ಗಿರಿಜವ್ವನ ಮಗಮರೆತು ಬಿಡಬಹುದಾದ ಪುಸ್ತಕವಲ್ಲ. ಉತ್ತರಾರ್ಧದ ನಿರೀಕ್ಷೆಯಲ್ಲಿ ನಮ್ಮನ್ನಿಡುತ್ತಲೇ ಮೊದಲ ಭಾಗದಲ್ಲಿ ಈಗಷ್ಟೆ ಜೀವನದ ಮೊದಲ ಪುಟ ವಿಸ್ತಾರಗೊಂಡಿದೆ. ಇಲ್ಲಿಯ ಅನುಭವೆಂಬ ಬೃಂಗದ ಬೆನ್ನೇರಿ ನಮ್ಮ ಆತ್ಮಗಳು ವಿಕಾಸಗೊಳ್ಳಬೇಕಿವೆ.