Total Pageviews

Tuesday, November 20, 2018

ಗಾಂಧೀಜಿ ದೃಷ್ಟಿಯಲ್ಲಿ ರಾಮಾಯಣ ಮುಂದುವರೆದ ಭಾಗ


ಬದುಕಿನುದ್ದಕ್ಕೂ ಶ್ರೀರಾಮನ ಆದರ್ಶಗಳನ್ನು ಪಾಲಿಸಿದ್ದ ಗಾಂಧೀಜಿ ಬಾಳ ಮುಸ್ಸಂಜೆಯಲ್ಲಿ ಯಾರ ಮೊರೆ ಹೋಗಿದ್ದರು ಎಂಬ ಪ್ರಶ್ನೆಗೆ ಸಿಗುವ ಉತ್ತರವೂ ಶ್ರೀರಾಮನೆ. ತುಳಸಿದಾಸರರಾಮಚರಿತ ಮಾನಸಮತ್ತು ಮಹಾ ಕಾವ್ಯ ಕಟ್ಟಿಕೊಟ್ಟ ಮರ್ಯಾದಾ ಪುರುಷೋತ್ತಮ ರಾಮ ಗಾಂಧೀಜಿಯ ಅಂತಿಮ ದಿನಗಳ ಎಲ್ಲ ಪ್ರಶ್ನೆಗಳಿಗೆ ಪರಾಮರ್ಶನ ಆಕರವಾಗಿದ್ದರು. ಅದಕ್ಕೆ ಸಾಕ್ಷಿಯಾಗಿ ಕೆಳಗಿನ ಪತ್ರಗಳು.
Ø ಗಾಂಧೀಜಿಯ ದೃಷ್ಟಿಯಲ್ಲಿ ದೇವರು
(ಪಟೇಲರಿಗೆ ಬರೆದ ಪತ್ರ, ಕಲ್ಕತ್ತೆಯ ಭೇಲಿ ಘಾಟ್, ಹೈದರಿ ಮಂಜಿಲ್. ಅಗಸ್ಟ್ 17, 1947, ಸಮಯ 11.30 ರಿಂದ 2.30. ಸಂದರ್ಭ-ಗಾಂಧೀಜಿಯ ಪರ ಮತ್ತು ವಿರೋಧಿ ಎಲ್ಲ ಘೋಷಣೆಗಳನ್ನು ಧಿಕ್ಕರಿಸುತ್ತ, ಮತ್ತೊಂದೆಡೆ ಭಾರತೀಯ ಮುಸ್ಲಿಂ ಬಾಂಧವರು ಇದೇ ಅಗಸ್ಟ್ 18ರಂದು ನೆರವೇರಲಿರುವ ಸ್ವಾತಂತ್ರೋತ್ತರದ ಮೊದಲ ಈದ್ ಹಬ್ಬಕ್ಕಾಗಿ ಸಿದ್ಧವಾಗುತ್ತಿದ್ದಾರೆ. ಗಾಂಧೀಜಿ ಈದ್ ಹಬ್ಬವನ್ನು ತಮ್ಮ ಸೌಥ್ ಆಫ್ರಿಕಾದ ಹೋರಾಟದ ದಿನಗಳಿಂದ ಜೀವನದ ಕೊನೆಯ ಈದ್ವರೆಗೂ ಆಚರಿಸುತ್ತ ಬಂದಿದ್ದಾರೆ.)
``ಒಳ್ಳೆಯತನವೇ ದೇವರು. ಇಂತಹ ದೇವರಲ್ಲಿ ಒಂದಿಷ್ಟು ಕಡಿಮೆ ಒಂದಿಷ್ಟು ಹೆಚ್ಚು ಎಂದು ವಿಭಜನೆಯಿಲ್ಲ ಅಥವಾ ದೇವರು ದೆವ್ವಕ್ಕಿಂತಲೂ ಶ್ರೇಷ್ಠ ಎನ್ನುವ ತುಲನೆ ಮೂರ್ಖತನದ್ದು. ದೇವರು ಇಡಿಯಾಗಿ ಒಳ್ಳೆಯವನು. ಅವನಲ್ಲಿ ಕೆಡುಕಿಲ್ಲ. ದೇವರ ಕಲ್ಪನೆಯಲ್ಲಿ ಮನುಷ್ಯನ ಸೃಷ್ಠಿಯಾಗಿದೆ. ಆದರೆ ದುರ್ದೈವ. ಆನಂತರ ಮನುಷ್ಯ ತನ್ನ ಕಲ್ಪನೆಯಂತೆ ತನ್ನನ್ನು ರೂಪಿಸಿಕೊಂಡಿದ್ದಾನೆ. ಮನುಷ್ಯನ ಉದ್ಧಟತನವೇ ಆತನನ್ನು ಸಮಸ್ಯೆಗಳ ಸಮುದ್ರಕ್ಕೆ ಎಸೆದಿದೆ. ದೇವರು ಸರ್ವಶ್ರೇಷ್ಠ ವಿಜ್ಞಾನಿ. ಆತನ ಉಪಸ್ಥಿತಿಯಲ್ಲಿ ಕಬ್ಬಿಣವು ಚಿನ್ನವಾಗಿ ರೂಪಾಂತರಗೊಳ್ಳುತ್ತದೆ. ಹಾಗೆಯೇ ಎಲ್ಲ ಕೆಡಕು ಒಳಿತಾಗಿ ಬದಲಾಗುತ್ತದೆ.
ದೇವರು ಕಾಲಾತೀತ, ಆತ ಬದುಕುತ್ತಾನೆ. ಆದರೆ ನಮ್ಮಂತಲ್ಲ. ಆತನ ಸೃಷ್ಟಿಗಳೂ ಬದುಕುತ್ತವೆ. ಆದರೆ ಸಾವಿಗೆ ಅಧೀನವಾಗಿರುತ್ತವೆ. ಆದರೆ ದೇವರೇ ಜೀವನ, ದೇವರೇ ಜೀವ. ಹೀಗಾಗಿ ಒಳಿತು ಎನ್ನುವುದು ದೇವರಿಗೆ ವಿಶೇಷಣವಲ್ಲ. ಮೃತ ವಸ್ತುಗಳಲ್ಲಿ, ಜೀವಗಳಲ್ಲಿ ದೇವರ ಒಳಿತು ಚೈತನ್ಯವಾಗಿ ಜೀವದಾಯಿಯಾಗಿ ಬರುತ್ತದೆ. ದೇವರ ಒಳಿತಿನಿಂದಾಗಿಯೇ ಎಲ್ಲವೂ ನೀತಿಯಾಗಿ ಪರಿಣಮಿಸುವದು. ಯಾವುದೇ ನೀತಿ ನಮ್ಮೊಳಗೊಂದಾಗಬೇಕೆಂದು ಬಯಸುವದಾದರೆ ಅದು ದೇವರೊಂದಿಗೆ ಸಂಪರ್ಕಿಸಿಕೊಂಡಿರಬೇಕು. ನಾವು ಒಳ್ಳೆಯವರಾಗಲು ಬಯಸುತ್ತೇವೆ. ಯಾಕೆಂದರೆ ನಾವು ದೇವರನ್ನು ಅರ್ಥೈಸಿಕೊಳ್ಳಲು ಮತ್ತು ತಲುಪಲು ಯತ್ನಿಸುತ್ತೇವೆ. ಪ್ರಪಂಚದ ಸಿದ್ಧಾಂತಗಳೆಲ್ಲ ಧೂಳಿಪಟವಾಗುತ್ತವೆ, ಕಾರಣ ಅವು ಕಾಲಕಾಲಕ್ಕೆ ದೇವರಿಂದ ದೂರ ಸರಿಯುತ್ತವೆ. ಯಾವುದು ದೇವರ ಮುಖವಾಣಿಯಾಗಿರುತ್ತದೆಯೊ ಅದು ನಮ್ಮ ಅಸ್ತಿತ್ವದ ಭಾಗವಾಗಿರುತ್ತದೆ ಮತ್ತು ನಮ್ಮನ್ನು ಸಶಕ್ತರನ್ನಾಗಿಸುತ್ತದೆ.
ಒಳಿತನ್ನು ಹೊರತುಪಡಿಸಿದ ದೇವರು ಮೃತ್ಯುವಿನ ಆಹ್ವಾನವಷ್ಟೆ. ಇಂತಹ ದೇವರುಗಳು ನಮ್ಮ ಹುಚ್ಚು ಕಲ್ಪನೆಯಲ್ಲಿ ಸೃಷ್ಟಿಯಾಗುತ್ತಾರೆ.’’
Ø ಗಾಂಧೀಜಿಯ ದೃಷ್ಟಿಯಲ್ಲಿ ಶ್ರೀರಾಮ
(ಆಚಾರ್ಯ ಕೃಪಲಾನಿಗೆ ಬರೆದ ಪತ್ರ, ದೆಹಲಿ, ಸೆ. 27, 1947. ಸಾಯಂಕಾಲದ ಪ್ರಾರ್ಥನಾ ಸಮಯ. ಸಂದರ್ಭ: ಮಾ.ತಾರಾಸಿಂಗ್ ಲಡಕೆ ಲೇಂಗೆ ಪಾಕಿಸ್ತಾನಎಂಬ ಹೇಳಿಕೆಯನ್ನು ನೀಡಿ, ಹೃದಯನಾಥ ಕುಂಜ್ರು ಬ್ರಿಟಿಷರ ದುರಾಡಳಿತ ಕುರಿತು ಮತನಾಡಿದ ಕಾರಣ ದೆಹಲಿಯ ವಾತಾವರಣ ಪ್ರಕ್ಷುಬ್ಧಗೊಂಡಿದೆ. ಲಾರ್ಡ ಮೌಂಟ್ ಬ್ಯಾಟನ್ ನೌಖಾಲಿಯಲ್ಲಿ ಗಾಂಧೀಜಿಯವರು ಕೋಮು-ಸೌಹಾರ್ದದ ತಮ್ಮ ಅಭಿಯಾನವನ್ನು ಯಶಸ್ವಿಯಾಗಿ ಪೂರೈಸಿದ್ದಕ್ಕಾಗಿ ಅಭಿನಂದಿಸಲು ಬರುತ್ತಿದ್ದಾರೆ.)
“God alone knows if I will run away, If I am shot at or am attacked with knives, If I do run away, then people will know that the man they looked upon as a Mahatma was not indeed a Mahatma. It is also possible that I may still utter ‘Rama, Rama’ when I am shot at or otherwise attacked. Let the outcome be what it will; either way it will be for the good.”
ತಿಳಿದುಕೊಳ್ಳಿ, ಅಹಿಂಸೆ ನನ್ನ ಧರ್ಮ. ರಾಮ, ಈಶ್ವರ, ರಹೀಮ್ ನನ್ನ ವೈದ್ಯರು. ಎಲ್ಲ ರೋಗಗಳಿಗೆ ರಾಮನಾಮವೊಂದೇ ಮದ್ದು. ಹೃದಯ ಮತ್ತು ತುಟಿಯ ಮೇಲೆ ರಾಮನಾಮವನ್ನಿಟ್ಟುಕೊಂಡವನಿಗೆ ಯಾವ ಇಲಾಜಿನ ಅವಶ್ಯಕತೆಯೂ ಇಲ್ಲ. ಇದು ನನ್ನ ವಿಶ್ವಾಸ. ರಾಮನೇ ನಮ್ಮ ರಕ್ಷಕ, ಶರೀರ ತಾತ್ಕಾಲಿಕ. ಕ್ಷಣದಲ್ಲಿ ಬದುಕಿರುವ ದೇಹ ಇನ್ನೊಂದು ಕ್ಷಣದಲ್ಲಿ ಸಾಯುತ್ತದೆ. ಆದರೆ ಶ್ರೀರಾಮನ ಸ್ಮರಣೆಯನ್ನು ನಿರಂತರ ಮಾಡಿದವನ ಆತ್ಮ ಅಮರವಾಗಿರುತ್ತದೆ.

Ø ರಾಮ್ನಾಮ್ ಈಜ್ ಮೈ ಮೆಡಿಸಿನ್
(ಡಾ.ಸುಶೀಲಾ ನಯ್ಯರ್ ಅವರನ್ನು ಸಂಬೋಧಿಸಿ, ದೆಹಲಿ, ಅಕ್ಟೋಬರ್ 1, 1947. ಗಾಂಧೀಜಿ 79 ನೇ ಹುಟ್ಟು ಹಬ್ಬದ ಮುನ್ನಾ ದಿನ. ಸಂದರ್ಭ: ರಾಜಕುಮಾರಿ ಅಮೃತಾ ಕೌರ್, ಸುಚೇತಾ ಕೃಪಲಾನಿ ಮತ್ತು ಪಟೇಲ್ ಕೆಮ್ಮಿನಿಂದ ಅನಾರೋಗ್ಯ ಪೀಡಿತರಾಗಿದ್ದ ಗಾಂಧೀಜಿಯನ್ನು ನೋಡಲು ಬಂದಿದ್ದಾರೆ. ಅವರ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದ ಡಾ.ಸುಶೀಲಾ ನಯ್ಯರ್ ಪೆನ್ಸಿಲಿನ್ ಇಂಜೆಕ್ಷನ್ ಕೊಡುವ ಕುರಿತು ಕೇಳಿದ ಸಂದರ್ಭ.)
ಅನೇಕ ಬಾರಿ ಗಾಂಧೀಜಿಯವರಿಗೆ ವೈದ್ಯರ ವಾದ ಮೂರ್ಖ ಮತ್ತು ಉದ್ಧಟತನ ಎನಿಸಿತ್ತು. ವಿಜ್ಞಾನವನ್ನು ಕುರಿತು ಅವರ ವಾದವೇ ಬೇರೆ. ``Ramanama is my penicillin! ವಿಜ್ಞಾನವೇ ಅರಿತುಕೊಳ್ಳಬೇಕಾದುದು, ಕಲಿಯಬೇಕಾದುದು ಬಹಳಷ್ಟಿದೆ. ಸಮಸ್ಯೆಯ ಯಾವುದೋ ತುದಿ ಅಷ್ಟನ್ನೇ ವಿಜ್ಞಾನ ಮುಟ್ಟಿದೆ. ಅನಾರೋಗ್ಯ ಎಂದರೆ ಏನು? ಅದು ನಿಸರ್ಗದ ನಿಯಮಗಳ ಉಲ್ಲಂಘನೆ ಎಂದರ್ಥವಷ್ಟೆ? ಇನ್ನೊಂದರ್ಥದಲ್ಲಿ ತಪ್ಪಿಗೆ ಸಿಗುವ ಶಿಕ್ಷೆ. ದೇವರ ವಿರುದ್ಧದ ಹೆಜ್ಜೆಗೆ ಸಿಗುವ ಪರಿಣಾಮ. ದೇವರು ಮತ್ತು ಆತನ ನಿಯಮಗಳು ಎಲ್ಲ ಕಾಲಕ್ಕೂ ಒಂದೇ. ಅದಕ್ಕಾಗಿ ರಾಮ ನಾಮಸ್ಮರಣೆಯನ್ನು ಸಂಪೂರ್ಣವಾಗಿಸಿಕೊಂಡರೆ ಎಲ್ಲ ರೋಗಗಳು ಮರೆಯಾಗುತ್ತವೆ. ``ಸುಶೀಲಾ, ನಿನಗೆ ಗೊತ್ತಿಲ್ಲ ನಾಮಸ್ಮರಣೆಯ ಮಹಿಮೆ ಜನರಿಗೂ ಗೊತ್ತಿಲ್ಲ. ನನ್ನ ಇಡೀ ಬದುಕನ್ನು ಮೂಲಕವೆ ನಿರ್ಧರಿಸಿಕೊಂಡವನು ನಾನು. ಅವನ ಸೇವೆಗಾಗಿಯೆ ಮತ್ತು ಅವನ ಕರುಣೆಯಿಂದಲೇ ನಾನು ಬದುಕಬೇಕಿದೆ. ನೀವು ಯಾವುದೋ ಔಷಧಿಯ ಅಥವಾ ಶರೀರದ ಸೂತ್ರಗಳನ್ನು ಹುಡುಕಲು ಹೊರಟಂತೆ ನಾನು `ರಾಮನಾಮಎಂಬ ಸೂತ್ರದ ಹಿಂದಿನ ವಿಜ್ಞಾನವನ್ನು ಕಂಡುಹಿಡಿಯಲು ಭವಸಾಗರದಲ್ಲಿ ಬಿದ್ದಿದ್ದೇನೆ. ಪವಿತ್ರ ಸ್ಮರಣೆಯ ಹಿಂದಿನ ವಿಜ್ಞಾನ ನನಗೆ ಗೊತ್ತಾಗಲೇಬೇಕು, ಇಲ್ಲ ನಾನು ಸಾಯಬೇಕು.
Ø ರಾಮಾಯಾಣ ಕಾವ್ಯ
(ದೆಹಲಿ, 27 ಅಕ್ಟೋಬರ್ 1947. ಸಂದರ್ಭ: ಮೌನ ವೃತದಲ್ಲಿದ್ದ ಗಾಂಧೀಜಿಗೆ ಶ್ರೀಸಾಮಾನ್ಯನೊಬ್ಬ ಶ್ರೀರಾಮನ ಭಕ್ತರು ರಾವಣನ ಮೂರ್ತಿಯನ್ನು ಸುಡುವುದು ಯಾವುದರ ಸಂಕೇತ? ಎನ್ನುವ ಪ್ರಶ್ನೆಗೆ ಉತ್ತರಿಸುತ್ತ)
ಸೇಡು ಮನುಷ್ಯನಿಗೆ ಒಪ್ಪುವ ಭಾಷೆಯೇ ಅಲ್ಲ. ಕೇಳು, ಅದು ಯಾರಿಗೂ ಸಲ್ಲದು ಬಂಧು, ಯಾರೋ ನಿನಗೆ ಕೆಡಕನ್ನುಂಟುಮಾಡಿದ್ದಾರೆ, ಹಾಗಂತ ನೀನು ಅದನ್ನೇ ಪುನರಾವರ್ತಿಸಬೇಕಿಲ್ಲ. ಅದಕ್ಕೆ ಅರ್ಥವೂ ಇಲ್ಲ. ನಾನು ನಂಬಿದಂತೆ ಶ್ರೀರಾಮ ಪರಿಪೂರ್ಣನಾಗಿದ್ದ. ಆತ ದೇವನಾಗಿದ್ದ. ಅನ್ಯಾಯ ಅನೀತಿಯ ಸ್ವರೂಪಿಯಾಗಿದ್ದ, ಅಪರಾವತಾರವಾಗಿದ್ದ ರಾವಣನನ್ನು ನಾಶಮಾಡಲೆಂದೇ ಆತ ಅವತರಿಸಿದ್ದ. ದೇವರೊಬ್ಬನೇ ದುಷ್ಟತನವನ್ನು ನಾಶಮಾಡಲು ಅರ್ಹ ಎನ್ನುವ ಮಹಾ ಸಂದೇಶವನ್ನು ರವಾನಿಸುವದಕ್ಕಾಗಿಯೇ ರಾಮಾಯಣ ಕಾವ್ಯದ ರಚನೆಯಾಯಿತು. ತಲೆತಲಾಂತರಗಳಿಂದ ನಮ್ಮ ಹಿರಿಯರು ನಮಗೆ ರಾಮಾಯಣವನ್ನು ಬೋಧಿಸುತ್ತಿರುವುದು ನಾವು ದುಷ್ಟತನವನ್ನು ಅನುಕರಿಸಬೇಕೆಂದು ಅಲ್ಲ, ಬದಲಾಗಿ ಮೌಲ್ಯಗಳ ಪರಿಪಾಲನೆ ಮಾಡಬೇಕು
Ø ಸಾಮಾಜಿಕ ಬಿಕ್ಕಟ್ಟಿನ ಪರಿಹಾರ ಮಾರ್ಗ: ರಾಮ
(ಪಾಕಿಸ್ತಾನದ ಸಿಂಧ್ ಪ್ರಾಂತ್ಯದಿಂದ ಆಶ್ರಯ ಬಯಸಿ, ಅಕ್ಟೋಬರ್ 31, 1947 ರಂದು ದೆಹಲಿಗೆ ಬಂದ ನಿರಾಶ್ರಿತರನ್ನು ಉದ್ದೇಶಿಸಿ)
ನಾನು ಆಶಾವಾದಿ, ಮುಂಜಾವು ಮನುಷ್ಯನ ವಿಶ್ವಾಸ ಮತ್ತು ಆಶಾದಾಯಕತೆಯನ್ನು ಕುರಿತು ನಾನು ನನ್ನ ಪ್ರೀತಿಯ ಮೊಮ್ಮಗಳಾದ ಮನುಳೊಂದಿಗೆ ಮಾತನಾಡುತ್ತಿದ್ದೆ. ದೇವರು ನಿಜಕ್ಕೂ ನನ್ನ ಸತ್ವಪರೀಕ್ಷೆ ಮಾಡುತ್ತಿದ್ದಾನೆ. ನಾನು ಸತ್ಯಸಂಧನಾಗಿರುವುದಾದರೆ, ರಾಮನಾಮದಲ್ಲಿ ನನ್ನ ವಿಶ್ವಾಸ ನಿಜಕ್ಕೂ ಅಚಲವಾಗಿದ್ದರೆ, ನನ್ನ ನಿರ್ಧಾರ ದೃಢ ಎನ್ನುವುದಾದರೆ, ರಾಮನ ಹೆಸರನ್ನೇ ಉಚ್ಚರಿಸುತ್ತಾ ಹಿಂದೂ-ಮುಸ್ಲಿಂ ಐಕ್ಯತೆಯೆಂಬ ಯಜ್ಞಕುಂಡಕ್ಕೆ ನನ್ನನ್ನೇ ನಾನು ಆಹುತಿಯಾಗಿಸಿಕೊಳ್ಳುತ್ತೇನೆ. ನೀವೆಲ್ಲರೂ ನನ್ನ ಮಕ್ಕಳಿದ್ದಂತೆ. ನನ್ನ ಸಲಹೆಯನ್ನು ಕೇಳಿ. ಭಾರತದ ಯಾವುದೋ ಅಪರಿಚಿತ ನಗರದಲ್ಲಿ ರೀತಿ ಬದುಕಿಗಾಗಿ ಅರಸುವುದನ್ನು ನಿಲ್ಲಿಸಿ. ಸಿಂಧ್ಗೆ ಮರಳಿ ಹೋಗಿ. ಇಲ್ಲವೆ ಭಾರತದ ಲಕ್ಷಾಂತರ ಹಳ್ಳಿಗಳಿಗೆ ಹೋಗಿ.
Ø ರಾಮಾಯಣ ಓದುತ್ತ ಸುಮ್ಮನಿರಬಾರದೇ?
(ಪಾಕಿಸ್ತಾನದಿಂದ ಜೀವನವನ್ನು ಅರಸುತ್ತ ಓಡಿ ಬಂದ ಪಂಜಾಬಿ ಯುವಕನೊಬ್ಬ ಗಾಂಧೀಜಿಗೆ ಬರೆದ ಪತ್ರದಲ್ಲಿಯ ಪ್ರಶ್ನೆಗೆ ನವ್ಹೆಂಬರ 5, 1947ರಂದು ಪ್ರಾರ್ಥನಾ ಸಭೆಯಲ್ಲಿ ಗಾಂಧೀಜಿ ಉತ್ತರಿಸುತ್ತಾರೆ)
ಪ್ರಶ್ನೆ: ಕೈಯಲ್ಲೊಂದು ರಾಮಾಯಣವನ್ನುಹಿಡಿದುಕೊಂಡು ತೆಪ್ಪಗೆ ಬಿರ್ಲಾ ಹೌಸ್ದಲ್ಲಿ ಊಟ ಮಾಡಿ ಕುಳಿತುಕೊಂಡು ಮುಸ್ಲಿಂರ ಮಾನ-ಪ್ರಾಣಗಳ ರಕ್ಷಣೆಗೆ ಮುಂದಾಗಿರುವ ನೀವು ಇನ್ನೂ ಏಕೆ ಪಾಕಿಸ್ತಾನಕ್ಕೆ ಹೋಗಿಲ್ಲ?
ಗಾಂಧೀಜಿ: ಬಂಧು, ಹೋಗದೇ ಇರುವುದಕ್ಕೆ ಕಾರಣವಿಷ್ಟೆ. ದೆಹಲಿಯಲ್ಲಿಯ ನನ್ನ ಜವಾಬ್ದಾರಿಯನ್ನೇ ನನಗೆ ಸಮರ್ಥವಾಗಿ ನಿಭಾಯಿಸಲಾಗಿಲ್ಲ. ನೀನೇ ಹೇಳಿರುವಂತೆ ನಾನು ಮುಸ್ಲಿಂರ ಸ್ನೇಹಿತ. ಏಕೆಂದರೆ ನಾನು ಹಿಂದೂಗಳ ಸ್ನೇಹಿತನೂ ಕೂಡ. ಸಿಖ್ ಬಂಧುವೂ ಕೂಡ. ಗೊತ್ತಿರಲಿ, ನಾನು ಇಡೀ ಮಾನವ ಸಮಾಜದ ಬಂಧು. ನಾನು ದೆಹಲಿಯಲ್ಲಿಯೇ ಉಳಿದುಕೊಳ್ಳಲು ಮುಖ್ಯ ಕಾರಣಗಳೇ ಸಿಖ್ ಮತ್ತು ಹಿಂದೂಗಳ ಪ್ರೇಮ, ಸ್ನೇಹ. ಪಾಕಿಸ್ತಾನದ ನನ್ನ ಸಂದರ್ಶನ ವ್ಯರ್ಥಹೋಗುವುದಿಲ್ಲ ಎಂದು ಅನ್ನಿಸಿದ ಮರುಕ್ಷಣವೇ ನಾನು ಪಾಕಿಸ್ತಾನಕ್ಕೆ ಹೋಗುತ್ತೇನೆ. ಅದಕ್ಕಾಗಿ ಒಳಗಿನಿಂದ ಸಿದ್ಧವಾಗಬೇಕಿದೆ, ಆಗುತ್ತಿದ್ದೇನೆ.
Ø ಗಾಂಧೀಜಿ ಮತ್ತು ಶ್ರೀರಾಮ
(ತಿಹಾರಿನ ಮುಸ್ಲಿಂರು ಮತ್ತು ಪಾಕಿಸ್ತಾನದಿಂದ ಬಂದ ನಿರಾಶ್ರಿತರು ತಮ್ಮ ಅತಂತ್ರತೆಗಳಿಗೆಲ್ಲ ಗಾಂಧೀಜಿಯೇ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದಾಗ, ಅವರನ್ನುದ್ದೇಶಿಸಿ)
ನಿರಾಶ್ರಿತರ ಮುಖಗಳೆಲ್ಲ ನಿಜವಾಗಿದ್ದವೆ? ಅಥವಾ ಅವುಗಳಿಗೆ ಹಲವು ಮುಖವಾಡಗಳಿದ್ದವೆ? ಇಷ್ಟಕ್ಕೂ ಇದು ಯಾವುದರ ಫಲಶ್ರುತಿ? ಯಾರು ಹೊಣೆಗಾರರು ಇದಕ್ಕೆ? ನಮ್ಮನ್ನು ಲಾಹೋರಕ್ಕೆ ಕಳುಹಿಸಿಕೊಡಿ ಎಂದು ಗೋಗರೆಯುವ ಮೂಲಕ ಯಾವ ಉಪಕಾರವನ್ನು ಇವರು ಗಾಂಧೀಜಿಗೆ ಮಾಡುತ್ತಿದ್ದಾರೆ? ಲೋಕಕ್ಕೆ ಉಪಕರಿಸಿದವರಂತೆ ತಿಹಾರಿನ ಮುಸ್ಲಿಂರು ಗಾಂಧೀಜಿಯೊಂದಿಗೆ ಮಾತನಾಡಿದರೆ ಅತ್ತ ಪಾಕಿಸ್ತಾನದಿಂದ ನಿರಾಶ್ರಿತರೆಂದು ಬಂದವರು ದೆಹಲಿಯನ್ನ ಲೂಟಿ ಮಾಡುವುದು ತಮ್ಮ ಜನ್ಮಸಿದ್ದ ಹಕ್ಕು ಎಂದುಕೊಂಡಿದ್ದಾರೆ. ಪಾಕಿಸ್ತಾನಿಯರ ಕೈಯಲ್ಲಿ ಹಿಂಸೆ ಅನುಭವಿಸಿದ್ದೇ ಹೆಗ್ಗಳಿಕೆ ಎಂದುಕೊಂಡು ಭಾರತದಲ್ಲಿ ವಿಶೇಷ ಸವಲತ್ತುಗಳಿಗಾಗಿ ಗಾಂಧೀಜಿಯ ಮುಂದೆ ಧರಣಿ ಕೂಡ್ರುತ್ತಾರೆ. ಬಿಟ್ಟು ಬಂದ ಆಸ್ತಿಗೆ ಸಮಾನವಾಗಿ ಇಲ್ಲಿ ಆಸ್ತಿ ಬೇಕು, ಅಂಗಡಿ ಮುಂಗಟ್ಟುಗಳಲ್ಲಿ ಪುಕ್ಕಟೆ ಧಾನ್ಯಬೇಕು, ಅತ್ಯಂತ ಕಡಿಮೆ ಹಣದಲ್ಲಿ ಪಾತ್ರೆ-ಪಗಡೆ ಬೇಕು, ಸುತ್ತಾಡಲು ಕುದುರೆಗಾಡಿ ಬೇಕು, ಇದೆಲ್ಲವನ್ನು ಮುಂದೆ ನಿಂತು ಗಾಂಧೀಜಿಯೇ ಕೊಡಿಸಬೇಕು. ಯಾಕೆಂದರೆ ಇವರೆಲ್ಲ ಭಾರತಕ್ಕೆ ಬರುವ ಮೂಲಕ ಗಾಂಧೀಜಿಗೆ ಬಹಳ ದೊಡ್ಡ ಉಪಕಾರ ಮಾಡಿದ್ದಾರೆ. ಗಾಂಧೀಜಿಯ ಯಾವುದೋ ಪೂರ್ವದ ಋಣವನ್ನು ತೀರಿಸಲೆಂದೇ ದೇಶವಿಭಜನೆ ಮಾಡಿಕೊಂಡಿದ್ದಾರೆ, ಕಡಿದಾಡಿದ್ದಾರೆ, ಕೊಂದಿದ್ದಾರೆ, ರಕ್ತ ಹರಿಸಿದ್ದಾರೆ ಅಲ್ಲವೆ?
ಮತೀಯ ಎಂಬ ಎರಡು ಪದಗಳನ್ನು ಮುಂದಿಟ್ಟುಕೊಂಡು ಮತ್ತೆ ದಾಸ್ಯದ, ಗುಲಾಮಗಿರಿಯ, ಹೇವರಿಕೆಯ, ಅನಾಗರಿಕ ದಿನಗಳನ್ನೇ ಪ್ರಾರಂಭಿಸುವ ಸತ್ ಸಂಪ್ರದಾಯದ ಹಿಂದಣ ಅನಂತವನ್ನು ಮರೆಯುವ ಇವರನ್ನು ಅದೆಷ್ಟು ಗಾಂಧೀಜಿಗಳು ಬಂದರೂ ಸುಧಾರಿಸಲು ಸಾಧ್ಯವಿಲ್ಲ. ಇವರ ವರ್ತನೆಗಳು, ನಿರೀಕ್ಷೆಗಳು, ಸಂಕುಚಿತತೆಗಳು ಇವರನ್ನಷ್ಟೇಯಲ್ಲ; ಇಡೀ ದೇಶವನ್ನೇ ದಾರಿ ತಪ್ಪಿಸುತ್ತಿವೆ ಎನ್ನುವುದು ಗಾಂಧೀಜಿಗೂ ತಿಳಿದಿತ್ತು. ಅಂತೆಯೇ ಅವರು ನಿರಾಶ್ರಿತರಿಗೆ ತಿಳಿಹೇಳುತ್ತಾರೆ, “ಗೆಳೆಯರೇ. ಹುಟ್ಟು ಮತ್ತು ಅನುಸರಣೆಯಲ್ಲಿ ನಾನೊಬ್ಬ ಪರಿಶುದ್ಧ ಹಿಂದೂ. ನನ್ನ ಧರ್ಮಕ್ಕೆ ವಿಸ್ತೃತತೆಯನ್ನು ತರುವುದೇ ನನ್ನ ಕರ್ತವ್ಯ. ನಾನೀಗ ಸ್ಥಿತಪ್ರಜ್ಞ. ಶ್ರೀರಾಮನ ಕೈಹಿಡಿದುಕೊಂಡು ಈಗಾಗಲೇ ಸಾಕಷ್ಟು ಮುಂದೆ ಬಂದಿದ್ದೇನೆ. ನಾನು ಸಾಯುವಾಗ ಶ್ರೀರಾಮ ನಾಮ ಉಚ್ಚರಿಸುತ್ತಲೇ ಸಾಯಬೇಕೆಂದು ನನ್ನ ಮಹದಾಸೆ. ದಿನದಿಂದ ದಿನಕ್ಕೆ ನನ್ನ ಆಸೆ ತೀವ್ರಗೊಳ್ಳುತ್ತಿದೆ. ಒಂದು ಕಾಲವಿತ್ತು, ನನ್ನ ವೈರಿಗಳೂ ನನ್ನ ಮಾರ್ಗದರ್ಶನ ತೆಗೆದುಕೊಳ್ಳುತ್ತಿದ್ದರು. ಆದರೆ ಈಗ? ನನ್ನ ಸಹಚರರೇ, ಸ್ನೇಹಿತರೇ ನನ್ನ ಕಣ್ಣೊಳಗೆ ಕಣ್ಣಿಟ್ಟು ನೋಡುತ್ತಿಲ್ಲ. ಅದೇನು ಕಾರಣವೊ; ನನ್ನ ಬಳಿಯೂ ಸುಳಿಯುತ್ತಿಲ್ಲ. ಆದಾಗ್ಯೂ ನನ್ನ ಮಾನಸಿಕ ಆರೋಗ್ಯ ಸ್ತಿಮಿತತೆಯನ್ನು ಕಳೆದುಕೊಂಡಿಲ್ಲ. ಬದುಕಿಗೆ ಶ್ರೀರಾಮ ನಾಮ ಒಂದು ಸಾಕು. ನಿದ್ದೆಯಿಂದ ಏಳುವ ಪ್ರತಿ ಮನುಷ್ಯನೂ ಹೊಸ ಬದುಕಿನ ಖುಷಿಯನ್ನು ಅನುಭವಿಸುವಂತೆ ನಾನು ರಾಮನಾಮ ಉಚ್ಚರಣೆಯಿಂದ ಪುಳಕಿತನಾಗುತ್ತೇನೆ. ಕಳೆದುಹೋದ ಹಳೆಯದನ್ನ ಮರೆತು ಬಿಡಿ. ಬೆಳಕಿನೆಡೆಗೆ, ಕರ್ತವ್ಯದೆಡೆಗೆ ಮುಖ ಮಾಡಿ.”
Ø ಗಾಂಧೀಜಿ ಮತ್ತು ತುಳಸಿ ರಾಮಾಯಣ
             (..ಸಿ.ಸಿ. ಕೆಲವು ಮುಖಂಡರನ್ನುದ್ದೇಶಿಸಿ, ರಾಮನಾಮ ಸ್ಮರಣೆಯ ಮಹತ್ವದ ಕುರಿತು ಮಾತನಾಡುತ್ತಾರೆ)
ಅಂದಿನ ಪ್ರಾರ್ಥನೆಯ ವಿಶೇಷತೆ ಗಾಂಧೀಜಿಯ ಅತ್ಯಂತ ಪ್ರೀತಿಯ ತುಳಸಿ ಭಜನ್, “ಔರ್ ನಹೀ ಕಾಲು ಕಾಮ್ ಕೇ, ಮೈ ಭರೋಸೇ ಅಪನೆ ರಾಮ್ ಕೇ. ವಿಶೇಷತಃ ಪ್ರಾರ್ಥನೆಗೂ ಗಾಂಧೀಜಿಯ ಬದುಕಿಗೂ ಒಂದು ಅವಿನಾಭಾವ ಸಂಬಂಧ. 1943 ರಲ್ಲಿ ಬ್ರಿಟಿಷರು ಅವರನ್ನು ಆಗಾಖಾನ್ ಅರಮನೆಯಲ್ಲಿ ಬಂಧಿಸಿಟ್ಟಾಗ, ಪ್ರಪಂಚದಿಂದ ಮುಕ್ತನಾಗಿ, ಅವರು ಒಂಟಿಯಾಗಿದ್ದಾಗ ಇದನ್ನು ಕೇಳಿದ್ದರು, ಮೂಲಕ ಸಮಾಧಾನಿಸಿಕೊಂಡಿದ್ದರು. ತಮ್ಮ 21 ದಿನಗಳ ಉಪವಾಸವನ್ನು ಇದೇ ಸಾಲುಗಳನ್ನು ನಂಬಿಕೊಂಡು ಯಶಸ್ವಿಯಾಗಿಸಿಕೊಂಡಿದ್ದರು. ನೆನಪನ್ನು ಇಂದು ಗಾಂಧೀಜಿ ಇಲ್ಲಿ ಎಲ್ಲರೆದುರು ಬಿಚ್ಚಿಡುತ್ತಿದ್ದಾರೆ. “21 ದಿನ ಹೇಗೆ ಬದುಕಿದೆ ಎಂದುಕೊಳ್ಳುತ್ತೀರಿ? ಯಾವುದೇ ನೀರು, ಹಣ್ಣಿನ ರಸ, ವೈದ್ಯಕೀಯ ಕಾಳಜಿಗಳಿಂದ ಮಾತ್ರ ಖಂಡಿತವಾಗಿಯೂ ಅಲ್ಲ. ಪ್ರಾರ್ಥನೆಯಿಂದ, ಬರೀ ಶ್ರೀರಾಮನ ಹೆಸರಿನಿಂದ. ಟೆಲಿಗ್ರಾಮ್ ಸಂದೇಶದ ಮೂಲಕ ಗೆಳೆಯರೊಬ್ಬರಿಂದ ನಾನು ಪ್ರಾರ್ಥನೆಯನ್ನು ತರಿಸಿಕೊಂಡೆ. ಇದರ ಅರ್ಥವಿಷ್ಟೆ, ‘ರಾಮನೇ ಎಲ್ಲಾ, ಅವನ ಮುಂದೆ ಎಲ್ಲವೂ ಸೊಲ್ಲ. ..ಸಿ.ಸಿ. ಎಲ್ಲ ಸದಸ್ಯರೂ ಶನಿವಾರ ಹಾಜರಾಗಲಿರುವ ಮಹತ್ವದ ಸಭೆಗೂ ಮುಂಚೆ ಸಾಲುಗಳನ್ನು ಸ್ಮರಿಸಿಕೊಳ್ಳಬೇಕೆಂದು ನಾನು ಆಗ್ರಹಿಸುತ್ತೇನೆ. ಅವರು ಹಾಗೆ ಮಾಡಲೇಬೇಕು, ಏಕೆಂದರೆ ಅವರು ಹೊರಗಿರುವ ಎಲ್ಲ ಕಾಂಗ್ರೆಸ್ಸಿಗರ ಪ್ರತಿನಿಧಿಗಳು. ಹಾಗೆ ಮಾಡದೆ ಸೈತಾನನನ್ನು ತಮ್ಮ ಎದೆಗಳಲ್ಲಿ ಬಚ್ಚಿಟ್ಟುಕೊಂಡು, ದೇವರನ್ನು ಹೊರಗಿಟ್ಟು ಹೋದರೆ ದೇಶದ ಉಪ್ಪಿನ ಋಣ ತೀರದು. ಈಗ ಕೋಮುಗಲಭೆಯ ಕಾಲ ಮುಗಿದಿದೆ. ತಿಳುವಳಿಕೆಯ ಹೊಸ ಪರ್ವ ಶುರುವಾಗಿದೆ ಎನ್ನುವುದಾದರೆ ಅದು ಇಲ್ಲಿಂದಲೇ ಶುರುವಾಗಲಿ. ನಮ್ಮನ್ನು ನೋಡಿ ಆಗಲೇ ದೇಶ ಬಿಟ್ಟು ಬಂದಿರುವ ಸಿಖ್ ಮತ್ತು ಹಿಂದೂ ಸಹೋದರರನ್ನು ಪಾಕಿಸ್ತಾನ ಅವರ ನೆಲಗಳಿಗೆ, ಮನೆಗಳಿಗೆ ಮರಳಿ ಕರೆಯಿಸಿಕೊಳ್ಳಬಹುದು. ನನ್ನ ಮಾತುಗಳು ನಿಮ್ಮ ಹೃದಯಗಳನ್ನು ಕಲಕಿವೆಯೇ? ಎಐಸಿಸಿ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬಹುದೇ? ನಾನು ನಿಮ್ಮನ್ನೇ ನಂಬಿದ್ದೇನೆ.” ರಾಜಕೀಯ ಸಭೆಯೊಂದಕ್ಕೆ ಹೋಗುವಾಗ ಪ್ರಾರ್ಥನೆ ಹೇಳಬೇಕು, ರಾಮನ ಭಜನೆ ಮಾಡಬೇಕು ಎಂದು ಗಾಂಧೀಜಿ ಮಾತಾಡುವಾಗ ಇವರÀ ತಲೆ ಕೆಟ್ಟಿದೆ ಎಂದು ಕೆಲವು ಕಾಂಗ್ರೆಸ್ಸಿಗರು ಒಳಗೊಳಗೇ ನಗುತ್ತಿದ್ದರೆನ್ನಿ.
Ø ಬದುಕು ಮತ್ತು ತುಳಸಿ ರಾಮಾಯಣ
(ತುಳಸಿದಾಸರ ಭಜನೆಯ ಕುರಿತು ಹೇಳಿದ ಮಾತು)
ಹಿಂದೂ ಧರ್ಮದ ವಿಷಯಕ್ಕೆ ಬಂದಾಗ ಗಾಂಧೀಜಿ ಬಹುವಾಗಿ ಹಚ್ಚಿಕೊಂಡಿದ್ದು ತುಲಸಿದಾಸರ ಭಜನ್ ಒಂದನ್ನು. ಅದು ಹೇಳುತ್ತದೆ-
ಅನುಕಂಪವೇ ಧರ್ಮ, ದುರಹಂಕಾರವೇ ಅದರ ವೈರಿ,
ನೀನಿರುವವರೆಗೂ ನಿನ್ನೊಳಗೇ ಅನುಕಂಪವ ದೂರಬೇಡ.
ಬರೀ ಜೀವಿತಕ್ಕಾಗಿ ಜೀವಿಸುವುದಿಲ್ಲ ಮನುಷ್ಯ ಎನ್ನುವುದು ಗಾಂಧೀಜಿಯವರ ಅಚಲ ನಂಬಿಕೆ. ಸಾವಿನಿಂದ ಪಾರಾಗುವುದು ಯಾವ ದೊಡ್ಡ ಸಾಧನೆಯೂ ಅಲ್ಲ, ಧೈರ್ಯದಿಂದ ಬಾಳಿ ಸಾವನ್ನು ಎದುರಿಸುವುದು ಒಂದು ದೊಡ್ಡ ಸಾಧನೆ. ಇದು ಸುಮ್ಮನೆ ಸಿದ್ಧಿಸುವುದಿಲ್ಲ, ಯೋಗ್ಯವಾದುದ್ಯಾವುದೂ ಸರಳವಾಗಿ ಸಿದ್ಧಿಸುವುದಿಲ್ಲ ಎನ್ನುತ್ತಿದ್ದ ಗಾಂಧೀಜಿ, Life becomes lovable only when death is treated as a friend” ಎಂದಿದ್ದಾರೆ.

Ø ರಾಮ, ರಹೀಮ, ರೆಹಮಾನ
(ಯಾರನ್ನು ಪೂಜಿಸಬೇಕು ಎಂಬ ಜನಗಳ ಪ್ರಶ್ನೆಗೆ ಉತ್ತರಿಸುತ್ತ)
ದೇವನ ಸಾಗರದ ಒಂದು ಹನಿ ಮನುಷ್ಯ. ಹನಿಯನ್ನು ದಯಾಸಾಗರನಾದ ಭಗವಂತ ಕಾಯದೇ ಹೋದರೆ ಸೈತಾನ ಆತನನ್ನು ನುಂಗಿ ಬಿಡುತ್ತಾನೆ. ದೇವರು ದೊಡ್ಡವನು ಬಂಧುಗಳೇ, ಆತನ ದಯೆ ಮಾತ್ರ ನಮ್ಮನ್ನು ರಕ್ಷಿಸಲು ಸಾಧ್ಯವಿದೆ. ನನಗೆ ಹೇಳಿ, ಬೈಬಲ್ ಅರ್ಥದಂತೆ ಬದುಕಿದ ಕ್ರಿಶ್ಚಿಯನ್ನರು ಯಾರಿದ್ದಾರೆ? ಗಾಯತ್ರಿ ಮಂತ್ರದ ಅರ್ಥದಂತೆ ಬದುಕಿದ ಹಿಂದೂಗಳು ಯಾರಿದ್ದಾರೆ? ಈಶಾವಾಶೋಪನಿಷತ್ ಹೇಳುತ್ತದೆ, ‘ಸೃಷ್ಟಿಯ ವಸ್ತುಗಳೆಲ್ಲ ಭಗವತ್ಪ್ರೇರಿತ. ಖುರಾನ್Àಂತೆ ಬದುಕಿದ ಮುಸ್ಲಿಮರು ಯಾರಿದ್ದಾರೆ? ಎಲ್ಲವೂ ಹೇಳುತ್ತವೆ, ಇಡೀ ಪ್ರಪಂಚವೇ ದೇವ ಪ್ರೇರಿತ, ದೇವರಿಗೆ ಅಧೀನ. ಹಾಗಿದ್ದಲ್ಲಿ ಪರಸ್ಪರ ದ್ವೇಷ ಎಲ್ಲಿಂದ ಬಂತು? ಸಂಕುಚಿತತೆ ಎಲ್ಲಿ ಮನೆ ಮಾಡಿತ್ತು? ಮಂತ್ರ ಎಂದರೇನು? ಮಾನವ ಕುಲಕ್ಕೆ ದುರಂತ ಯಾಕೆ ಬಂತು?”
Ø ಶ್ರೀರಾಮನ ಕೈಗೊಂಬೆ ಗಾಂಧೀಜಿ
(ಡಿಸೆಂಬರ್ 24 ನಸುಕಿನ 5 ಗಂಟೆಗೆ ಗುಜರಾತಿನ ಸ್ನೇಹಿತನೊಬ್ಬನಿಗೆ ಬರೆದ ಪತ್ರದ ಸಾಲುಗಳು)
ರಾಮನಾಮವನ್ನ ಉಸಿರಾಡುವ ನನ್ನನ್ನು ಯಾರೂ ಹಿಂಸಿಸಲು ಸಾಧ್ಯವಿಲ್ಲ. ಇದು ನನ್ನ ಅಚಲ ನಂಬಿಕೆ. ನನ್ನ ಸುತ್ತಲಿನ ಪ್ರಪಂಚ ಹೊತ್ತಿ ಉರಿಯುತ್ತಿದ್ದರೂ ಶಾಂತನಾಗಿ ಉಳಿಯುವ ಶಕ್ತಿ ನನಗೆ ಬಂದುದೇ ರಾಮನಾಮದಿಂದ. ನಾಮಸ್ಮರಣೆಗಾಗಿಯೇ ನಾನು ಪ್ರಾತಃಕಾಲ ಎದ್ದು ಕುಳಿತುಕೊಳ್ಳುವುದು. ನಾನು ಆತ ಕುಣಿಸಿದಂತೆ ಕುಣಿಯುವ ಒಂದು ಸಾಮಾನ್ಯ ಗೊಂಬೆ. ಪ್ರಪಂಚದಲ್ಲಿ ನಾವು ಕ್ರಿಯೆಗೆ ತೊಡಗಿಕೊಂಡಿರುವುದೇ ಆತನ ಆಜ್ಞೆಯಿಂದಾಗಿ. ಅವನ ಆಜ್ಞೆಯಿಲ್ಲದೇ ಇಲ್ಲಿ ಒಂದು ಹುಲ್ಲು ಕಡ್ಡಿಯೂ ಅಲುಗದು. ಆದರೂ ಮನುಷ್ಯನ ಸೊಕ್ಕನ್ನು ಗಮನಿಸು. ಎಲ್ಲವೂ ತಾನೇ, ತನ್ನಿಂದಲೇ, ತನಗಾಗಿಯೇ ಎನ್ನುವ ದುರಹಂಕಾರದ ಅಬೇದ್ಯ ಕೋಟೆಯನ್ನು ನಿರ್ಮಿಸಿಕೊಂಡಿದ್ದಾನೆ. ಆದರೆ ಈತನ ಅಜ್ಞಾನಕ್ಕೆ ದೇವರು ಸುಮ್ಮನೆ ನಗುತ್ತಾನಷ್ಟೆ.
Ø ಶ್ರೀರಾಮನೆಂದರೆ ಯಾರು?
(ದೆಹಲಿ ಬಿರ್ಲಾಹೌಸ್, ಪ್ರಾರ್ಥನಾ ಸಭೆಯಲ್ಲಿ ಶ್ರೀರಾಮನನ್ನು ಕುರಿತು)
ತನ್ನೊಳಗೆ ಶಾಂತನಾದವನ ಸಮೃದ್ಧಿ ಆತನ ದೃಷ್ಟಿ, ಮಾತು ಮತ್ತು ಕಾಯಕದಲ್ಲಿ ವ್ಯಕ್ತವಾಗುತ್ತಾ ಹೋಗುತ್ತದೆ. ಆತ ಗುಡಿಸಲಿನಲ್ಲಿಯೂ ನಾಳೆಯ ಚಿಂತೆ ಇಲ್ಲದೆ ನಿಶ್ಚಿಂತನಾಗಿರುತ್ತಾನೆ. ಯಾಕೆಂದರೆ ನಾಳೆಯನ್ನು ಆತ ದೇವರಿಗೆ ಬಿಟ್ಟಿರುತ್ತಾನೆ. ಮಹಾರಾಜ ದಶರಥನ ಮಗ ಶ್ರೀ ರಾಮಚಂದ್ರ ನಮ್ಮ ನಿಮ್ಮಂತೆಯೇ ಒಬ್ಬ ಮನುಷ್ಯ. ಅಯೋಧ್ಯೆಯ ಪಟ್ಟವನ್ನೇರುವಾಗ ತಾನು 14 ವರ್ಷ ವನವಾಸಕ್ಕೆ ಹೋಗಬೇಕಾಗುತ್ತದೆ ಎನ್ನುವುದು ಆತನಿಗೂ ಗೊತ್ತಿರಲಿಲ್ಲ. ಆದರೆ ಶಾಂತಿಯನ್ನು ತನ್ನೊಳಗೆ ಸ್ಥಾಪಿಸಿಕೊಳ್ಳುವುದು ರಾಜ್ಯಭಾರದ ಸಂಕೇತವಾದ ಕಿರೀಟ ಧರಿಸುವುದಕ್ಕಿಂತಲೂ ಕಷ್ಟಕರ ಎನ್ನುವುದು ಆತನಿಗೆ ಗೊತ್ತಿದ್ದುದರಿಂದ ಬೆಳವಣಿಗೆ ಆತನಿಗೆ ಆಘಾತಕಾರಿಯಾಗಲಿಲ್ಲ.  ಬಹುತೇಕದ ಶಾಂತಿ ವಸ್ತುಗಳಲ್ಲಿಲ್ಲ ಎನ್ನುವುದು ಶ್ರೀ ರಾಮನಿಗೆ ಗೊತ್ತಿತ್ತು. ಹೀಗಾಗಿ ವನವಾಸಕ್ಕೆ ಹೋಗಬೇಕೆಂದು ಆಜ್ಞೆ ಬಂದಾಗ ಆತನ ಮನಃಶಾಂತಿ ಕದಡಲಿಲ್ಲ. ಕಾರಣ ಶ್ರೀರಾಮ ಮೂರು ವಿಚಾರಗಳಲ್ಲಿ ವಿಶೇಷವಾದ. ಮೊದಲನೆಯದಾಗಿ ತನ್ನ ಹೆಂಡತಿ, ಸಹೋದರ, ಸಾಮ್ರಾಜ್ಯ ಕಳೆದುಕೊಂಡು; ಎರಡನೆಯದಾಗಿ ಜಗತ್ತಿನಿಂದ ನಿಂದಿಸಲ್ಪಟ್ಟು, ಒಂದು ಹಂತದಲ್ಲಿ ಮರ್ಯಾದೆ ಕಳೆದುಕೊಂಡು; ಮೂರನೆಯದಾಗಿ ಶಾರೀರಿಕ ಹಿಂಸೆಗೂ ಒಳಗಾಗಿ, ನಿದ್ರಾಹೀನನಾಗಿ ಮಡದಿ, ಯುದ್ಧ ಎಂದು ಅಲೆದ. ಆದರೆ ಇಂತಹ ಮೂರು ಕೆಟ್ಟ ಘಳಿಗೆಗಳಲ್ಲಿ ಆತ ದೇವರನ್ನೇ ಸ್ಮರಿಸಿದ, ದೇವನಾಗಿ ಬದುಕಿದರು. ಹೀಗಾಗಿ ದೇವ ಮಾನವನಾದರು. ನಮ್ಮ ಆಲೋಚನೆಗಳಂತೆಯೇ ನಮ್ಮ ಬದುಕು.

Ø ಹೇ ರಾಮ್!!
(ದೆಹಲಿ ಬಿರ್ಲಾಹೌಸ್ ಪ್ರಾರ್ಥನಾ ಸಭೆ, ಜನೇವರಿ.30,1948 ಸಂಜೆ, ಸಂದರ್ಭ: ಮಹಾತ್ಮ, ಮೃತ್ಯುವಿಗೂ ಮುನ್ನ)
ಗೋಡ್ಸೆಯ ಗುಂಡಿಗೆ ಬಲಿಯಾದ ಗಾಂಧೀಜಿ ಸಾಯುವಾಗಲೂ ಶ್ರೀರಾಮನನ್ನು ಸ್ಮರಿಸಿಕೊಂಡೇ ಕೊನೆಯುಸಿರೆಳೆದರು ಎನ್ನುವುದು ಒಂದು ಸ್ಥಾಪಿತ ಅಸತ್ಯ. ಬಹುತೇಕ ಮೂಲಕ ಗಾಂಧೀಜಿಯವರನ್ನು ದೈವಿಕರಿಸುವ ಯತ್ನವಿರುವುದನ್ನು ನಿರಾಕರಿಸಲಾಗದು. 1948 ಜನೇವರಿ 30 ಎಂಬ ದಿನದ ಅರ್ಧ ಭಾಗ ಹೀಗಿದೆ. ಗಾಂಧೀಜಿ ಅಂತಿಮವಾಗಿ ಹೇಳಬೇಕಾದುದೇನೋ ಎಂದುಕೊಂಡು ಸರ್ದಾರ್ ಪಟೇಲ್ ಹಾಗೂ ಮನಿಬೆನ್ನಳನ್ನು ಕರೆಯಿಸಿಕೊಂಡಿದ್ದಾರೆ.
ಇತ್ತೀಚಿಗೆ ನೆಹರು ಮತ್ತು ಪಟೇಲರ ಮಧ್ಯದ ಅಂತರ ಹೆಚ್ಚುತ್ತಿದ್ದು, ಅದರ ಮಧ್ಯದ ಲಾಭ ಯಾರಿಗಾಗಬಹುದು? ದೇಶದ ಆಡಳಿತದ ಮೇಲೆ ಯಾವ ಕೆಟ್ಟ ಪರಿಣಾಮಗಳಾಗಬಹುದು? ಅವರಿಬ್ಬರೂ ಎಲ್ಲ ಕಾಲಕ್ಕೂ ಜೊತೆಯಾಗಿ ಸಹೋದರರಂತೆ ದೇಶವನ್ನು ನಡೆಯಿಸಿಕೊಂಡು ಹೋಗಬೇಕಾದುದರ ಅನಿವಾರ್ಯತೆ ಹೇಗಿದೆ? ಎಲ್ಲವನ್ನೂ ಕೊನೆಯ ಬಾರಿಗೆ ವಿವರಿಸಿ ಹೇಳುತ್ತಾರೆ ಗಾಂಧಿ. ಇಷ್ಟರಲ್ಲಿ ಸಾಯಂಕಾಲದ ಪ್ರಾರ್ಥನೆಗೆ ಸ್ವಲ್ಪ ತಡವಾಗಿಹೋಯಿತು. ಮಧ್ಯ ಅನೇಕ ಬಾರಿ ಗಾಂಧೀಜಿಯನ್ನು ಪ್ರಾರ್ಥನೆಗೆ ಸರಿಯಾದ ಸಮಯಕ್ಕೆ ಕರೆದುಕೊಂಡು ಹೋಗುವ ಪ್ರಯತ್ನಗಳನ್ನು ಮನು ಮಾಡಿದ್ದಳು. ಆದರೆ ಗಾಂಧೀಜಿಗೆ ಪಟೇಲರ ಮುಂದೆ ಇಂದು ಎಷ್ಟು ಮತನಾಡಿದರೂ ಅತನಿಗೆ ಸಮಾಧಾನವಿಲ್ಲ. ಕೊನೆಗೆ ಹೇಳುತ್ತಾನೆ, “Now I must tear myself away!”
ಈಗ 5 ಗಂಟೆಯ ಸಮಯ ದಾಟುತ್ತಿದೆ. ಅಭಾ ಮತ್ತು ಮನುರ ಹೆಗಲುಗಳ ಮೇಲೆ ಅಂತಿಮವಾಗಿ ಭಾರವಾಗಿ ನಗುತ್ತಾ, ನಗಿಸುತ್ತಾ ಬಿರ್ಲಾ ಹೌಸ್ ತನ್ನ ನಿತ್ಯದ ಪ್ರಾರ್ಥನಾ ಸ್ಥಳದೆಡೆಗೆ ಗಾಂಧೀಜಿ ಹೆಜ್ಜೆಗಳನ್ನು ಹಾಕುತ್ತಾನೆ. ಕೇಳುತ್ತಾಳೆ ಅಭಾ, ‘ಸೊಂಟದಲ್ಲಿರುವ ಗಡಿಯಾರವನ್ನು ಗಮನಿಸುವುದೇ ಇಲ್ಲಾ ಎನ್ನುವುದಾದರೆ ಅದನ್ನು ಯಾತಕ್ಕಾಗಿ ನೇತು ಹಾಕಿಕೊಳ್ಳಬೇಕು ಬಾಪು?’ ಗಾಂಧೀಜಿ ಮುಗಳ್ನಕ್ಕು ಮೊದಲು ತಪೆÇ್ಪಪ್ಪಿಕೊಂಡು ಮತ್ತೆ ಮರು ಪ್ರಶ್ನೆ ಹಾಕುತ್ತಾನೆ. ಅದನ್ನು ಮೀರಿದ ನಿಮ್ಮಂತಹ ಇಬ್ಬರು ಸಮಯಪರಿಪಾಲಕರು ನನ್ನೊಂದಿಗಿರುವಾಗ ನಾನು ಅದನ್ನೇಕೆ ನೋಡಿಕೊಳ್ಳಬೇಕು? ಇಂದು 10 ನಿಮಿಷ ತಡವಾಗಿದ್ದರೆ ಅದಕ್ಕೆ ಕಾರಣ ನೀವೆ. ರೋಗಿಯ ವೇಳಾಪಟ್ಟಿಯನ್ನು, ಕ್ರಿಯಾವಿಧಿಯನ್ನು ಕರಾರುವಕ್ಕಾಗಿ ಇಡಬೇಕಾದುದು ನರ್ಸ್ ಆದವಳ ಕೆಲಸವಲ್ಲವೇ? ಒಂದು ವೇಳೆ ರೋಗಿ ದೇವರೊಂದಿಗೆ ಮಾತನಾಡುತ್ತಾ ಕುಳಿತಿದ್ದರೂ ಕೂಡಾ ಆಕೆ ತನ್ನ ಸಮಯ ಪರಿಪಾಲನೆಯನ್ನು ಮರೆಯಬಾರದು. ಗಾಂಧೀಜಿ ಇಷ್ಟು ಹೇಳುತ್ತಾ ಸ್ವಲ್ಪ ಅವಸರದಿಂದ ವೇದಿಕೆಯೆಡೆಗೆ ಬಂದ. ಮುಖದ ತುಂಬಾ ನಗು, ಮಧ್ಯ ಮಧ್ಯ ಅಲ್ಲಲ್ಲಿ ನಿಂತು ಎರಡೂ ಕೈಗಳನ್ನೆತ್ತಿ ನಮಸ್ಕಾರ. ಪ್ರತಿಯಾಗಿ ಜನರಿಂದಲೂ ಅಲ್ಲಲ್ಲಿ ನಮಸ್ಕಾರ, ಮುಗುಳ್ನಗೆ, ಅಭಿನಂದನೆ ಹಾಗೂ ಅಂತಿಮವಾಗಿ, ಹೊರಟವರ ಆರೋಗ್ಯ ವಿಚಾರ, ಉಭಯಕುಶಲೋಪರಿ ಏನೆಲ್ಲ.
ಇಂದಿನ ಪ್ರಾರ್ಥನೆಗೆ ಕನಿಷ್ಠ ಒಂದು ಸಾವಿರ ಜನ ಸೇರಿದ್ದಾರೆ, ಇಷ್ಟರಲ್ಲಿ ಜನರನ್ನು ಸೀಳಿಕೊಂಡು ಭಯಾನಕ ಅವಸರದಲ್ಲಿರುವ ಮತ್ತು ಬುಶ್ಶರ್ಟ್ನಲ್ಲಿರುವ ಒಬ್ಬ 37 ವರ್ಷಗಳ ಯುವಕ ಗಾಂಧೀಜಿಯ ಮುಂದೆ ನಿಲ್ಲುತ್ತಾನೆ. ಎಲ್ಲರೂ ಗಲಿಬಿಲಿಗೊಳ್ಳುವ ಮುಂಚೆಯೇ ಆತ ಗಾಂಧಿಯನ್ನು ನಮಸ್ಕರಿಸುವುದಕ್ಕೆ ಮನು ಅಡ್ಡಿಯೊಡ್ಡುತ್ತಲೇ, ಆಕೆಯನ್ನು ದೂರ ತಳ್ಳಿಪ್ಯಾಂಟಿನಿಂದ ಬ್ಯಾರೆಟ್ ಪಿಸ್ತೂಲನ್ನು (ನಂ. 606824) ಹೊರತೆಗೆದು ಮೂರು ಸುತ್ತು ಗುಂಡು ಹಾರಿಸುತ್ತಾನೆ. ಎರಡು ಗಾಂಧೀಜಿಯ ಎದೆ ಹೊಕ್ಕರೆ ಒಂದು ಆತನ ಕಿಬ್ಬೊಟ್ಟೆಯನ್ನು ಸೇರುತ್ತದೆ. ಮೊದಲೇ ಉಪವಾಸದಿಂದ ಕೃಶಗೊಂಡಿದ್ದ ಗಾಂಧೀಜಿಯ ದೇಹ `„„„„ಹ್' ಎನ್ನುವ ಕೊನೆಯ ಶಬ್ದದೊಂದಿಗೆ ನೆಲಕ್ಕುರುಳುತ್ತದೆ. ಆದರೆ `ಮಹಾತ್ಮ' ಗಾಂಧಿಯವರು ಸಾಯುವಾಗ `ಹೇ ರಾಮ್' ಎಂದು ಕೈ ಮುಗಿದೇ ತೀರಿಕೊಂಡರೆಂದು ಕೆಲವು ಇತಿಹಾಸಕಾರರಿಂದ ದಾಖಲಾಗುತ್ತದೆ. ಕೊಲೆಯ ಆರೋಪವನ್ನು ಎದುರಿಸುತ್ತ ಕೋರ್ಟಿನ ಕಟಕಟೆಯಲ್ಲಿ ನಿಂತ ಗೋಡ್ಸೆ `` ಕೃತ್ಯ ನನ್ನಿಂದ ಆಗದಿದ್ದರೆ ಚೆÀನ್ನಾಗಿತ್ತು. ಆದರೆ ಪರಿಸ್ಥಿತಿ ಕೈ ಮೀರಿ ಹೋಗಿತ್ತು. ನನ್ನ ಮತ್ತು ಗಾಂಧಿ ನಡುವೆ ಯಾವುದೇ ವೈರತ್ವವಿಲ್ಲ. ನಾನೂ ಗಾಂಧಿ ಮತ್ತು ಸಾವರ್ಕರರ ಆರಾಧಕನೆ. ಆದರೆ ದೇಶದ ಮತೋನ್ಮಾದ ಮಾರ್ಗವೊಂದರ ಪರವಾಗಿ ಗಾಂಧಿ ತೋರಿಸಿದ ಪಕ್ಷಪಾತಕ್ಕಾಗಿ ಅವರ ಹತ್ಯ ಮಾಡಿದ್ದೇನೆ. ಇದು ನನ್ನ ದೇಶದ ಬಗೆಗೆ ನನಗಿರುವ ಹಿತಾಸಕ್ತಿ'' ಎಂದು ಹೇಳಿಕೆ ನೀಡುತ್ತಾರೆ?
ತುಳಸಿದಾಸರ ಶ್ರೀ ರಾಮಚರಿತ ಮಾನಸದಿಂದ ಮರ್ಯಾದಾ ಪುರುಷೋತ್ತಮ ಶ್ರೀರಾಮನನ್ನೆತ್ತಿಕೊಂಡು ಇಡೀ ಮಾನವ ಸಮಾಜಕ್ಕೆ ಆದರ್ಶವಾಗಿ ಬೆಳೆದ ಮಹಾತ್ಮ ಗಾಂಧೀಜಿ ಅಂತಿಮವಾಗಿ ಹರಿಜನ ಪತ್ರಿಕೆಯಲ್ಲಿ ಹೀಗೆ ಬರೆಯುತ್ತಾರೆ – ‘I myself have been a devotee of Tulasidas from my childhood and have, therefore, always worshipped God as Rama. I laugh within myself when someone objects that Rama or the chanting of Ramanama is for the Hindus only, how can Mussalmans therefore take part in it? Is there one God for the Mussalmans and another for the Hindus, Paris or Christians? No, there is only one omnipotent and omnipresent God. He is named variously and we remember Him by the name which is most familiar to us.
My Rama, the Rama of our prayers is not the historical Rama, the son Dasharatha, the King of Ayodhya. He is the eternal, the unborn, the one without a second. Him alone I worship. His aid alone I see, and so should you. He belongs equally to all. I, therefore, see no reason why a Mussalman or anybody should object to taking His name. But he is in no way bound to recognize God as Ramanama. He may utter to himself Allah or Khuda so as not to mar the harmony of the sound.
To me...Rama, described as the Lord of Sita, son of Dasharatha, is the all-powerful essence whose name, inscribed in the heart, removes all suffering--mental, moral and physical.