Total Pageviews

Thursday, December 26, 2013

‘ಇರುವಷ್ಟು ಕಾಲ’ದಲ್ಲಿ ಕವಿಗಳೊಂದಿಗೆ

Eruvashtu Kaal Cover Page
       ಕರ್ನಾಟಕ ಸ್ವಾಭಿಮಾನಿ ವೇದಿಕೆ ಮತ್ತು ಅತ್ತಿಮಬ್ಬೆ ಪ್ರತಿಷ್ಟಾನ ಟ್ರಸ್ಟ್ ಬೆಂಗಳೂರು, ಇವುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 02 ಡಿಸೆಂಬರ 2013 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಜರುಗಿದ ಸಮಾರಂಭದಲ್ಲಿ ನನ್ನ ಮಹತ್ವದ ಕೃತಿ ‘ಇರುವಷ್ಟು ಕಾಲ, ಇರುವಷ್ಟೇ ಕಾಲ. . .’ ಕವನ ಸಂಕಲನವನ್ನು ಡಾ. ಸಾ.ಸಿ.ಮರುಳಯ್ಯು(Dr.S.C.Marulayya)ನವರು ಬಿಡುಗಡೆ ಮಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಅಪರೂಪದ ಸೂಫಿ ಗೆಳೆಯ ಶ್ರೀ ರಂಜಾನ್ ದರ್ಗಾ(Ramjan Darga) ಆತ್ಮದ ನಿವೇದನೆಗೆ ನಮಗಿರುವ ಏಕೈಕ ಮಾಧ್ಯಮ ಕಾವ್ಯ ಎಂದದ್ದು ಎಷ್ಟೊಂದು ಸೂಕ್ತವಾಗಿತ್ತು. ಗುರು ಹಾಗೂ ಈ ಕಾರ್ಯಕ್ರಮದ ರೂವಾರಿ ಚಂಪಾ(Champa) ಮತ್ತೆ ಕಾಲೇಜಿನ ಯುವಕರಂತೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ನಿಂತು ನಾಲ್ಕು ಗಂಟೆಗಳವರೆಗೆ ಈ ಕಾರ್ಯಕ್ರಮವನ್ನು ನಿಭಾಯಿಸಿದ ರೀತಿಯನ್ನು ನೀವು ಗಮನಿಸಬೇಕಿತ್ತು. ನಮ್ಮೊಂದಿಗಿದ್ದ ರಾಜಕಾರಣಿ, ಕವಿ ಶ್ರೀ ಕೆ.ಎಚ್.ಶ್ರೀನಿವಾಸ(K.H.Shinivas), ಶ್ರೀಮತಿ ಉಷಾ.ಪಿ.ರೈ(Usha.P.Rai), ಮನೋಹರಿ ಪಾರ್ಥಸಾರಥಿ, ಶ್ರೀ ಪುಟ್ಟೇಗೌಡ, ನ್ಯಾಯಮೂರ್ತಿ ಮಹಿಪಾಲ ದೇಸಾಯಿ(Mahipal Desai)(ಖಲೀಲ್ ಜಿಬ್ರಾನ್:ಪ್ರವಾದಿ), ಡಾ. ಕೊ. ಶ್ರೀವಸಂತಕುಮಾರ(Dr.K.Shrivasantakumar)(ಜೈನ ರಾಮಾಯಣ ಭಾಗ-2) ಮತ್ತು ಚಂಪಾ(ಚಂಪಾಲಹರಿ) ವೇದಿಕೆ ಮೇಲಿರುವುದರೊಂದಿಗೆ, ನನ್ನಂಥ ಎಳೆಯ ಗೆಳೆಯನೊಂದಿಗೆ ತಮ್ಮ ಕೃತಿಗಳನ್ನೂ ಬಿಡುಗಡೆಗೊಳಿಸಿ ಪಟ್ಟ ಸಂಭ್ರಮ ಅಷ್ಟಿಷ್ಟಲ್ಲ. ಡಾ. ಬಾನಂದೂರು ಕೆಂಪಯ್ಯ(Dr.Bananduru Kempayya) ತಮ್ಮ ಕಂಚಿನ ಕಂಠದಿಂದ ಜನಪದ ಗೀತೆಯೊಂದನ್ನು ಹಾಡಿ ರಂಜಿಸಿದ್ದನ್ನು ಮರೆಯುವುದು ಸಾದ್ಯವಿಲ್ಲ. ಇದೇ ಸಂದರ್ಭದಲ್ಲಿ ಜರುಗಿದ ರಾಜ್ಯೋತ್ಸವ ಕವಿಗೋಷ್ಠಿಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಬಂದ 60 ಜನ ಕವಿಗಳು ಇದರಲ್ಲಿ ಪಾಲ್ಗೊಂಡಿದ್ದು 32 ಜನ ಕವಯತ್ರಿಯರೂ ಇದರಲ್ಲಿ ಪಾಲ್ಗೊಂಡಿದ್ದು ಲಿಂಗ ಸಮಾನತೆ ಈ ಕಾರ್ಯಕ್ರಮ ಸಾಕ್ಷಿಯಾಗಿತ್ತು ಎನ್ನಬಹುದೇ.(?)
Book Releasing ceremany of Ragam

        ಹೆಸರಿಸಲೇಬೇಕಾದ ಕೆಲವು ಹಿರಿಯರು ನಮ್ಮೊಂದಿಗೆ ಈ ಕಾರ್ಯಕ್ರಮದಲ್ಲಿ ಕೇಳುಗರಾಗಿ ಪಾಲ್ಗೊಂಡಿದ್ದಾರೆ. ಉದಾಹರಣೆಗೆ ಶ್ರೀ ಜರಗನಹಳ್ಳಿ ಶಿವಶಂಕರ(Jaraganahalli Shivashankar), ಡಾ. ಜಿ.ಎಚ್.ಹನ್ನೆರಡುಮಠ, ಶ್ರೀ ವಡ್ಡಗೆರೆ ನಾಗರಾಜಯ್ಯ, ಶ್ರೀದೇವಿ ಕಳಸದ, ಸುಜಾತಾ ವಿಶ್ವನಾಥ(Sujata Vishwanath), ಡಾ. ವರದಾ ಶ್ರೀನಿವಾಸ, ಶ್ರೀಮತಿ ಸಕೀನಾ ಬೇಗಂ ಇನ್ನೂ ಅನೇಕರು.
Ragam with Ramjan Darga
    ‘ಇರುವಷ್ಟು ಕಾಲ! ಇರುವಷ್ಟೇ ಕಾಲ. . .’ ನನ್ನ ಅತ್ಯಂತ ಪ್ರೀತಿಯ ಆರನೆಯ ಕಾವ್ಯ ಸಂಕಲನ. ಕಣ್ವ ಪ್ರಕಾಶನದ ಗೆಳೆಯ ಎಂ.ಆರ್.ಗಿರಿರಾಜು(M.R.Giriraju) ಈ ಸಂಕಲನವನ್ನು ಕಾವ್ಯಕ್ಕೆ ದುಬಾರಿಯಾದ ಈ ಕಾಲಘಟ್ಟದಲ್ಲಿ ಅತ್ಯಂತ ಮುತುವರ್ಜಿಯಿಂದ ಪ್ರಕಟಿಸಿದ್ದಾರೆ. ಸನ್ಮಿತ್ರ ಶ್ರೀ ಬಿ.ಎಸ್.ದೇಸಾಯಿ(B.S.Desai) ಸಂಕಲನದ ತುಂಬ ತಮ್ಮ ರೇಖಾ ಚಿತ್ರಗಳನ್ನು ಎಳೆದು ಜೀವ ತುಂಬಿದ್ದಾರೆ. ಸಂಕಲನ ಪ್ರಕಟವಾಗುವ ಸಂದರ್ಭದ ಆಸು-ಪಾಸಿನಲ್ಲಿಯೇ ಸಿಹಿಗಾಳಿಯ ಸಂಪಾದಕ ಮಿತ್ರ ರಾಜು ಮಳವಳ್ಳಿ(Raju Malavalli) ಮುಂಚಿತವಾಗಿಯೇ ಒಂದು ಲೇಖನವನ್ನು ಪ್ರಕಟಿಸಿ ಪುಸ್ತಕದ ಪ್ರಮೋಷನ್‍ಗೆ ಸಹಕರಿಸಿದ್ದಾರೆ. ಹೀಗಾಗಿ ನನ್ನ ಪುಸ್ತಕವನ್ನು ಕುರಿತು ನಾನು ಈ ದಿನ ಬಹಳಷ್ಟು ಏನಾದರು ಹೇಳಬೇಕಾದುದಿದೆ ಅಂದುಕೊಳ್ಳಲೇ ಇಲ್ಲ. ನನ್ನ ನಂಬಿಕೆ ಇಷ್ಟೆ-
      ‘ಕವಿತೆಯೊಂದಿಗಿನ ನನ್ನ ಈ ಅನುಸಂಧಾನ ನನ್ನ ಪ್ರೀತಿಯೊಂದಿಗಿನ ಸಮಾಗಮವಷ್ಟೆ. ನನ್ನ ಕವಿತೆಯೊಳಗಿನ ಮನುಷ್ಯರು ಬದಲಾಗಿದ್ದಾರೆ. ಬದುಕಿನ ವ್ಯವಹಾರದಲ್ಲಿ ಹಂತ ಹಂತಕ್ಕೆ ಸೈದ್ಧಾಂತಿಕ ಜಾರತನಕ್ಕೆ ಒಳಗಾಗಿದ್ದಾರೆ. ತಮ್ಮ ಪಾಪದ ಹೇಸಿಗೆಯನ್ನೂ ನನ್ನ ಹಾಗೂ ನನ್ನ ಕವಿತೆಗೆ ಹೊರಸಿ ಶುದ್ಧರಾಗಿದ್ದಾರೆ. ಇಂದು ಆ ಶುದ್ಧಿಯ ವ್ಯಾಪ್ತಿಗೆ ಒಳಪಡದವರು ನಾನು ಮತ್ತು ನನ್ನ ಕವಿತೆ ಮಾತ್ರ. ಹಾಗೆ ನೋಡಿದರೆ ನಾನು ಶುದ್ಧ ಪಾಪಿ, ಕವಿತೆ ಶುದ್ಧ ಲಜ್ಜಾಹೀನ. ಬಿರುಗಾಳಿಯಂತೆ ಸುತ್ತಿಬರುವ ನಾವು ಯಾರಿಗೆ ಪ್ರೀಯರೋ ಆ ದೇವರಿಗೇ ಗೊತ್ತು. ನಾವಿಬ್ಬರೂ ಮಾತ್ರ ಪ್ರೀತಿಯ, ಸಮಾಗಮದ ತೂರ್ಯಾವಸ್ಥೆಯಲ್ಲಿದ್ದೇವೆ.’ ಎಂದುಕೊಂಡಿದ್ದೇನೆ.
Ragam with Bananduru Kempayya


        ನನ್ನೊಳಗಿನ ಧ್ಯಾನ, ಮೌನ ಮತ್ತು ಮುಕ್ತಿಗಳ ಮೊದಲ ಕೂಡಲಸಂಗಮ ಜರುಗಿದ್ದು ಈ ಸಂಕಲನದಲ್ಲಿ. ಪದಗಳ ಮೋಹದಿಂದ ಹೊರ ಬಂದು ಅರ್ಥದ ಹಾಗೂ ಅದರ ಆಚೆಯ ಅನಂತ ಲೋಕದಲ್ಲಿ ಕ್ರಮಿಸಿದ ಒಂದಿಷ್ಟು ಅನುಭವ ನನಗೆ ಈ ಬರಹದ ಮೂಲಕ ಒದಗಿದೆ. ಪುಸ್ತಕ ನಿಮ್ಮ ಮೆಚ್ಚಿನ ಅಂಗಡಿಗಳಲ್ಲಿ ಲಭ್ಯವಿದೆ.

No comments:

Post a Comment