Total Pageviews

Tuesday, December 31, 2013

ಇವೆಲ್ಲವೂ ಶಶಿಯ ಕಿರಣಗಳೇ. . .



 ವೇಗೋತ್ಕರ್ಷದ ಸಿದ್ಧಾಂತಕ್ಕೆ ಮಳೆ ಹೊಡೆದುಕೊಂಡ ಆಧುನಿಕ ಮನುಷ್ಯನಿಗೆ ಕೆಲವೊಮ್ಮೆ ನೆನಪುಗಳೂ ಭಾರವಾಗುತ್ತವೆ. ಇನ್ನು ಕೆಲವೊಮ್ಮೆ ಕಳದೇ ಹೋಗುತ್ತವೆ, ಮತ್ತೆ ಕೆಲವೊಮ್ಮೆ ಉಳಿದೂ ದಾಖಲಿಸಲಾಗದ ಪಳೆಯುಳಿಕೆಗಳಾಗುತ್ತವೆ. ನನ್ನ ಈ ದಾಖಲಾತಿ ಇಂಥದೇ ಒಂದು ಸಾಧ್ಯತೆಯಿಂದ ಹೊರಬರುವ ಯತ್ನ. 2012ರ ಅಕ್ಟೋಬರ್ ತಿಂಗಳಲ್ಲಿ ನನ್ನ 'ಗಾಂಧಿ : ಅಂತಿಮ ದಿನಗಳು' ಕೃತಿಗೆ ಪ್ರಶಸ್ತಿ ಬಂತು. ಆನಂತರದ್ದೆಲ್ಲವೂ ಬರೀ ಭರಾಟೆ. ಇದರ ಸದ್ದಿನಲ್ಲಿ ಮೌನದ ಕೆಲವು ಆಲಾಪಗಳು ನನಗೇ ಕೇಳಿಸದೆ ಹೋದವೆನೋ.
       ನವೆಂಬರ್ 4 ರಿಂದ 8, 2012 ರವರೆಗೆ ಹಾಸನಾಂಬಾ ಕಲಾಕ್ಷೇತ್ರದಲ್ಲಿ ಶಶಿಕಿರಣ ದೇಸಾಯಿಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಜರುಗಿತು. ಈ ನಾಲ್ಕು ದಿನಗಳ ಪ್ರದರ್ಶನ ಸಮಾರಂಭದ ಉದ್ಘಾಟನೆಗೆ ಹೋದವನು ನಾನು. ನನ್ನದೇ ಉದ್ಘಾಟನಾ ಭಾಷಣವೂ ಕೂಡ. ನನ್ನೊಂದಿಗಿದ್ದವರು ಅಂತರ್ ರಾಷ್ಟ್ರೀಯ ಖ್ಯಾತಿಯ ಚಿತ್ರಕಲಾವಿದ ರಾಮಸ್ವಾಮಿ, ಹಾಸನದ ಬರಹಗಾರ ಮಿತ್ರರಾದ ಚಂದ್ರಕಾಂತ ಪಡೆಸೂರು, ತಿರುಪತಿಹಳ್ಳಿ ಶಿವಶಂಕರಪ್ಪ, ಯೋಗಾ ಮಾಸ್ಟರ್ ಹಾಗೂ ಹಿರಿಯ ಕಲಾವಿದ ಶ್ರೀ ಬಿ.ಎಸ್.ದೇಸಾಯಿ. ಇಷ್ಟೊಂದು ಜನಸಂದಣೀಯ ಚೆತ್ರಕಲಾ ಪ್ರದರ್ಶನವನ್ನು ನಾನು ಈ ಹಿಂದೆಂದೂ ನೋಡಿಲ್ಲವೆಂದೇ ಹೇಳಬೇಕು. ಇದು ಶ್ರೀ ಬಿ.ಎಸ್.ದೇಸಾಯಿಯವರ ಸಾಮಾಜಿಕ ಸಂಬಂಧಗಳ ಶ್ರೀಮಂತಿಕೆಗೆ ಸಾಕ್ಷಿಯಾದ ಸಮಾರಂಭವೂ ಕೂಡ.

       ಭಾವ ಮತ್ತು ಭಾವನೆಗಳ ಅದ್ಭುತ ಲೋಕದಿಂದ ಹೊರಹೊಮ್ಮುವ ಬಣ್ಣಗಳು ನಮ್ಮ ಕಣ್ಣುಗಳಿಗೆ ಕಾಣಿಸಿಕೊಳ್ಳುವುದು ನೆಪ ಮಾತ್ರಗಳಾಗಿ. ಅವುಗಳ ಹುಟ್ಟಿನೊಂದಿಗೆ ಅವುಗಳ ಉದ್ದೇಶ ಮತ್ತು ಗುರಿ ನಿರ್ಧಾರಿತವಾಗಿದ್ದೂ ಅವು ವ್ಯಕ್ತಿಯೊರ್ವನ ಕಲೆಯ ಗುರಿಯನ್ನು ತಲುಪುತ್ತಿರುವಂತೆ ವರ್ತಿಸುತ್ತವೆ. ಬಣ್ಣಕ್ಕೆ ಕಲಾವಿದ ನೆಪವಾದನೋ, ಕಲಾವಿದನಿಗೆ ಬಣ್ಣ ಸಾಧನವಾಯಿತೋ ಇದು ಬಿಡಿಸಲಾಗದ ಅತ್ಯಂತ ಸಂಕೀರ್ಣ ಪ್ರಶ್ನೆ. ಇದಕ್ಕೆ ಒಂದು ಉತ್ತರ ಸಾಧ್ಯವಿಲ್ಲ. ಆದರೆ ಒಂದನ್ನೇ ಹೇಳುವ ಹಲವು ಉತ್ತರಗಳು ಸಾಧ್ಯ. ಅಂತೆಯೇ ಈ ಸಮಾರಂಭವನ್ನು ಉದ್ಘಾಟಿಸುತ್ತ ನಾನು ಹೇಳಿದೆ ಇವೆಲ್ಲವೂ ಶಶಿಯ ಕಿರಣಗಳೇ. . .
       ಇಲ್ಲಿ ಶಶಿ ಓರ್ವ ವ್ಯಕ್ತಿಯು ಹೌದು ಸಮಷ್ಠಿಯನ್ನು ರಂಗೇರಿಸುವ ಶಕ್ತಿಯೂ ಹೌದು. ಈ ಪ್ರದರ್ಶನದಲ್ಲಿ ವ್ಯಕ್ತಿಯೊಬ್ಬನ ಕುಂಚ ಸೃಷ್ಠಿಯ ಸುತ್ತಲೂ ಗಿರಕಿ ಹೊಡೆಯುವ ಕಲಾರಾಧಕನಿಗೆ ವ್ಯಕ್ತಿಯು ಸಿಗುತ್ತಾನೆ, ಸಮಷ್ಠಿಯೂ ಸಿಗುತ್ತದೆ. ಶಶಿಕಿರಣ ದೇಸಾಯಿ ಇನ್ನೂ ಶುಕ್ಲಪಥಿಕ. ಸಾಗಬೇಕಾದ ದಾರಿ ಅನಂತವಾಗಿದೆ. ಪ್ರಸಿದ್ಧಿ, ಪ್ರಚಾರದ ರೋಗಗಳಿಂದ ಮುಕ್ತನಾಗಿ ಆರೋಗ್ಯವಂತನಾಗಿ ಬೆಳೆಯಬೇಕಿದೆ. ಆತನಿಗೆ ಶುಭವಾಗಲಿ.


No comments:

Post a Comment