Total Pageviews

Thursday, March 6, 2014

ನಿಂದೆ ನಿರ್ನಾಮಕಾರಿಯೇ ವಿನಹ ನಿರ್ಮಾಣಕಾರಿಯಲ್ಲ

  ವೇಲಾಪುರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಬೇಲೂರು ಮತ್ತು ಡಾ. ಎನ್.ರಾಮರೆಡ್ಡಿ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಬೇಲೂರು ಕೃಷ್ಣಮೂರ್ತಿಯವರ ನೂರು ನಾಟಕಗಳ ಹತ್ತು ಸಂಪುಟಗಳ ಲೋಕಾರ್ಪಣೆ ಸಮಾರಂಭ ಚನ್ನಕೇಶವೇಗೌಡ ಕಲ್ಯಾಣ ಮಂಟಪ ಬೇಲೂರಿನಲ್ಲಿ ದಿನಾಂಕ 18/01/2014 ರಂದು ಜರುಗಿತು. ವೇದಿಕೆಯಲ್ಲಿ ನನ್ನೊಂದಿಗಿದ್ದವರು ಬೇಲೂರಿನ ಶಾಸಕರಾದ ಶ್ರೀ ವೈ.ಎನ್.ರುದ್ರೇಶಗೌಡ, ಪ್ರಕಾಶಕ ಮಿತ್ರ ಮಾನಸ, ಶ್ರೀ ಕವಿತಾ ಕೃಷ್ಣ, ಶ್ರೀ ಎಚ್.ಎಂ.ದಯಾನಂದ ಹಾಗೂ ಸನ್ಮಿತ್ರ ಪ್ರೊ. ಜಯಣ್ಣಗೌಡ.
      ಕೆಲವು ಸಭಾ ಮರ್ಯಾದೆ ಮತ್ತು ರೀತಿ ನೀತಿಗಳನ್ನು ಪಾಲಿಸದೇ ಇರುವದಕ್ಕಾಗಿ 14/04/2012 ರಿಂದ ಸ್ಥಳೀಯ ಕಾರ್ಯಕ್ರಮಗಳಿಗೆ ಹೋಗುವುದನ್ನು ನಿಲ್ಲಿಸಿದ್ದೆ. ಆದರೆ ಬೇಲೂರು ಕೃಷ್ಣಮೂರ್ತಿಯವರ ಕಾರಣಕ್ಕಾಗಿ, ಅವರ ನಿರಂತರ ಜೀವನೋತ್ಸಾಹಕ್ಕಾಗಿ ಈ ವೇದಿಕೆಯಲ್ಲಿ ಪಾಲ್ಗೋಳ್ಳಬೇಕಾಯಿತು. 95 ರ ಅಂಚಿನಲ್ಲಿ ಕುಳಿತು ಬರೆದ ಖುಷ್‍ವಂತ ಸಿಂಗ್‍ನ ಆತ್ಮಕತೆಯ ಈ ಸಾಲುಗಳಿಂದ 85 ರ ಬೆ.ಕೃ(ಬೇಲೂರು ಕೃಷ್ಣಮೂರ್ತಿ) ಅವರ ಈ ಸಮಾರಂಭದ ಪ್ರಾಸ್ತಾವಿಕ ನುಡಿಗಳನ್ನು ನಾನು ಪ್ರಾರಂಭಿಸಿದೆ. ವ್ಯಕ್ತಿಯ ವರ್ತಮಾನದ ಜೊತೆ ಜೊತೆಗೆಯೇ ಆತನ ಇತಿಹಾಸ ರೂಪಗೊಳ್ಳುತ್ತಿರುತ್ತದೆ. ಈ ಪ್ರಜ್ಞೆ ಇರುವ ವ್ಯಕ್ತಿಯಲ್ಲಿ ಅನ್ಯ ಆಲೋಚಗಳಿಗೆ ಅವಕಾಶವಿರುವುದಿಲ್ಲ. ‘ನಿಂದೆ ನಿರ್ನಾಮಕಾರಿಯೇ ವಿನಹ ನಿರ್ಮಾಣಕಾರಿಯಲ್ಲ’ ಎನ್ನುವುದನ್ನು ತಿಳಿದ ಇಂಥವರು ಅಂಥರ್ಮುಖಿಗಳಾಗಿರುತ್ತಾರೆ. ಕವಿ ಕೀಟ್ಸ್, ಶರೀಫ್, ವೈಕುಂಠ ದಾಸರೆಲ್ಲರೂ ಇಂಥ ಅಂಥರ್ಮುಖಿಗಳೆ. ಸರ್ಪಭೂಷಣ ಶಿವಯೋಗಿ ಹೇಳುವಂತೆ-
‘ಜನಮೆಚ್ಚಿ ನಡಕೊಂಡರೇನುಂಟು ಲೋಕದಿ,
 ಮನಮೆಚ್ಚಿ ನಡಕೊಂಬುವುದೇ ಚಂದವು,
 ಜನರೇನು ಬಲ್ಲರು ಒಳಗಾಗೋ ಕೃತ್ಯವ ಮನವರಿಯದ ಕಳ್ಳತನವಿಲ್ಲ’ ಆತ್ಮರತಿ, ಮೆರವಣಿಗೆ ಮತ್ತು ಜನ್ಮದಿನೋತ್ಸವಗಳ ಮೋಹದಿಂದ ಹೊರಬಂದುದಾದರೆ ಕೃಷ್ಣಮೂರ್ತಿಯವರಿಗೂ ಒಂದು ಅರ್ಥಪೂರ್ಣ ಅಸ್ಥಿತ್ವವಿದೆ. ಅವರ ಸಾಹಿತ್ಯಕ್ಕೆ ಕಾಲಾತೀತ ಗೌರವವಿದೆ ಎನ್ನುವುದು ಇಂದಿನ ನನ್ನ ವಾದವಾಗಿತ್ತು.
       ಹಲವು ಹಂಗುಗಳಿಂದ ಹೊರಬಿದ್ದಿರುವ ಬೆ.ಕೃ ಅವರ ಬದುಕು ಖುಷ್‍ವಂತ್ ಸಿಂಗನ ಆತ್ಮಕಥೆಯ ಎರಡು ಉಲ್ಲೇಖಗಳನ್ನು ನಾನಿಲ್ಲಿ ನೆನಪಿಸಿಕೊಳ್ಳುವಂತೆ ಮಾಡಿದೆ. ಮೊದಲನೆಯದು ಅವರ ಶಿಸ್ತು ಮತ್ತು ಸಮಯ ಪ್ರಜ್ಞೆ  ಕುರಿತಾಗಿ “You have only one life so make the best use of it. Don’t waste time, for time is worship and not a minute should be wasted” ಬೆ.ಕೃ ನೂರು ನಾಟಕಗಳನ್ನು ಬರೆದರು ಎನ್ನುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅವರು ಒಂದು ಕ್ಷಣ ಸಮಯವನ್ನು ಹಾಳುಮಾಡದೆ ಬದುಕಿದರು ಎನ್ನುವುದು. ಎರಡನೆಯದಾಗಿ ದೇವರು ಮತ್ತು ದೈವದ ಭಯಗಳಿಂದ ಮುಕ್ತರಾಗಿ ಬದುಕಿದರು ಎನ್ನುವುದು. ನಿಧನದ ನಂತರ ತಮ್ಮ ಶರೀರವನ್ನು ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಥೆಗೆ ದಾನವಾಗಿ ಕೊಟ್ಟಿರುವ ಕೃಷ್ಣಮೂರ್ತಿ ಈ ಕಾರಣಕ್ಕಾಗಿಯೂ ನಮಗೆ ಅವರು ಆದರ್ಶವಾಗಲೇ ಬೇಕು. ಖುಷ್‍ವಂತನ ಈ ಸಾಲುಗಳನ್ನು ಓದಿ-
“Here lies one who spared neither man nor God, waste not tears on him” ಇದೇ ದಾರಿಯಲ್ಲಿದ್ದಾರಿ ನಮ್ಮ ಬೇಲೂರು ಕೃಷ್ಣಮೂರ್ತಿಯವರೂ ಕೂಡ.

No comments:

Post a Comment