Total Pageviews

Friday, July 25, 2014

ಪ್ರಾರ್ಥನೆ ಇಷ್ಟೆ. . . .

 ಕ್ಷಮಿಸು ತಾಯೆ,
ಸಾಮಾನ್ಯರು ನಾವು
ಸೋತು, ಕೈ ಮುಗಿದು ಸರಿಯಬೇಕಾದವರು.


ಪ್ರಾರ್ಥನೆ ಇಷ್ಟೆ,
ನಾನೆಟ್ಟ ಮರಗಳ ನಿಟ್ಟುಸಿರು ತಾಗಿ
ನಿನ್ನ ಕುಡಿಯ ಕನಸುಗಳ ಕಮರಿಸದಿರಲಿ
ದಿಕ್ಕೆಟ್ಟ ಕುದುರೆ ಹತ್ತಿದವರು, ಅದರ ಹುಚ್ಚು ಹಸಿವಿಗೆ
ಸಿಕ್ಕದ್ದು ಸುರಿದು ಸಾವಿಗೆ ದೂಡದಿರಲಿ
ಮೈ ಮೆಚ್ಚಿದವರೇ ಮಲ್ಲಿಕಾರ್ಜುನರಾಗಿ
ಈಕೆಯ ಸಂದುಸಂದಿಗೂ ಕದಳಿ-ಕರ್ಪೂರ ಘಮಿಸಿ
ಬಂಗಾರದ ಬಾಳು ಸಂಭ್ರಮಿಸಿ
ಸತ್ತು ಸ್ವರ್ಗದಲ್ಲಿರುವ ನಿನಗೆ
ಗಾಳಿಯಲಿ ಲಾಲಿಹಾಡುವ ಭಾಗ್ಯ ಸಿಗಲಿ
ಹಸಿಗಾಗಿ ಬದುಕಿದ ಇವಳಿಗೂ
ಹುಸಿಯಲ್ಲೇ ಬಯಲಾದ ನಿನಗೂ
ಸದ್ಗತಿಯ ದಾರಿ ಸಿಗಲಿ


ಒಮ್ಮೆಯಾದರೂ ಜಪಿಸಲಿ ಪಶ್ಚಾತಾಪದ ಪವಿತ್ರ ಮಂತ್ರ
ಈ ಮನೆಯೊಳಗೆ ಮತ್ತೆ ಹುಟ್ಟಿಸಲಿ ಅವಳನ್ನೇ ಮಗಳಾಗಿ.



(ಅನುಹ್ಯ ರೋಗದಿಂದ ನರಳಿ ಕೆಲವು ವರ್ಷಗಳ ಹಿಂದೆ ಮರೆಯಾದ ತಾಯಿಗೊಂದು ಶಬ್ಧಾಂಜಲಿ)

No comments:

Post a Comment