ಕಡಲಾಚೆಯ ಮಡಿಲೊ
ಬಿತ್ತಿ, ಬುತ್ತಿಯಾದ ನೆಲವೊ
ನೆತ್ತಿಗಾಸರೆ ಎಂಬ ನೆರಳೊ
ಗೊತ್ತಿಲ್ಲ, ಹೊರಡಲೇಬೇಕಿದೆ
ಇನ್ನು ಮರಳಿ ಬರದಂತೆ. . . . . . .
ಮರಭೂಮಿಯೊಳು ಮೃತ್ಯುವೊ
ಬಾಗಿಲೋರೆಯಾಗಿಟ್ಟ ಬದುಕೊ
ಕನಸು ಕಣ್ಣಿಗೆ ಒರಸಿ
ಅಗ್ಗಿ ಹಾಯಲು ಕರೆವ ಕಾಳ ಕತ್ತಲೆಯೊ
ಗೊತ್ತಿಲ್ಲ, ಹೊರಡಲೇಬೇಕಿದೆ
ಇನ್ನು ಮರಳಿ ಬರದಂತೆ. . . . . . . . . . . .
ವಿಜಯವೊ ವಿನಾಶವೊ
ಮರುಹುಟ್ಟೊ ಮಹಾಮನೆಯೊ
ಅಲ್ಲಿರುವುದು ಬರೀ ಗುಹೆಯೊ
ಗೊತ್ತಿಲ್ಲ, ಹೊರಡಲೇಬೇಕಿದೆ
ಇನ್ನು ಮರಳಿ ಬರದಂತೆ. . . . . . . . . . . . . . .
ನಟ್ಟಿರುಳ ನಿರಾಸೆಯೊ
ದಟ್ಟಿರುಳ ದುರಾಸೆಯೊ
ಮುನ್ನಡೆಸಿದ್ದು ದೈವವೊ
ಹಿಂದೆ ನಡೆಸುದುದೇನು ದೇವರೊ
ಇನ್ನಿಡುವ ಅಡಿಯತ್ತ
ಹುತ್ತ ಎಂಥದೋ ನಿನ್ನೊಳ ಚಿತ್ತ
ಗೊತ್ತಿಲ್ಲ, ಹೊರಡಲೇಬೇಕಿದೆ
ಇನ್ನು ಮರಳಿ ಬರದಂತೆ. . . . . . . . . . . . . .
ಹಿಂದೆ ರಮಿಸಿದಿರೇಕೊ
ಇಂದು ನಮಿಸುವರೇಕೊ
ಮುಂದೆ ಏನುಂಟೋ ಮಾನಾಪಮಾನ
ಇದ್ದ ಮನೆಯೊಂದು
ಕದ್ದ ಎದೆಯೊಂದು
ಎದ್ದು ನಿಲ್ಲಿಸಿದ್ದೆಲ್ಲಿ, ಯಾರ ಮುಂದೆ
ಗೊತ್ತಿಲ್ಲ, ಹೊರಡಲೇಬೇಕಿದೆ
ಇನ್ನು ಮರಳಿ ಬರದಂತೆ. . . . . .
ಹೆರಿಗೆ ಇಲ್ಲದ ಹುಟ್ಟು ನಾನು
ನನಗ್ಯಾರು ತಂದೆ-ತಾಯಿ?
ಬೆರಗೆ ನಾನು, ಕ್ಷಣದ ಅರಗೆ?
ಒರೆಗೆ ಹಚ್ಚಲು ನಾನು
ಹೊರಟೇ ಬಿಡಬೇಕು
ಧರೆಗೆ ದಕ್ಕಲು ಇನ್ನು ಮರೆಯಾಗಲೇಬೇಕು . . . . . . . .
ಇವರೆಲ್ಲರನ್ನೂ
ನನ್ನ ಸಾಹಿತ್ಯ ಬದುಕಿನ ಒಂದಿಲ್ಲಾ ಒಂದು ಹಂತದಲ್ಲಿ ಸಂಧಿಸಿದ್ದೆ, ಈ ವ್ಯಕ್ತಿ - ಶಕ್ತಿಗಳ ಅಪರೂಪದ
ಬೆಳಕಿನಲ್ಲಿ ನನ್ನ ಬಾಳಿನ ಮುಂದಿನ ದಿಕ್ಕು - ದೆಸೆಗಳನ್ನು ರೂಪಿಸಿಕೊಂಡಿದ್ದೆ, ಭೂತಕಾಲಕ್ಕೆ ಜಾರುತ್ತಿರುವ
2019 ಇವರನ್ನು ನಮ್ಮಿಂದ ಭೌತಿಕವಾಗಿ ಅಳಸಿ ಹಾಕಿದೆ. ಆದರೆ ಭಾವಲೋಕದಲ್ಲಿ ನೆನಪುಗಳನ್ನು ಇನ್ನಷ್ಟು
ಆಳಗೊಳಿಸಿದೆ. ಸಾವಿನೊಂದಿಗೆ ತಕರಾರವಿಲ್ಲ, ಯಾಕೆಂದರೆ ಸಾವಿಗೆ ಕಿವಿ ಇಲ್ಲ. ಇವರ ಸಾಧನೆಯ ಬೆಳಕು
ಮುನ್ನಡೆಸಲಿ ನಮ್ಮನ್ನು.
ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು.
ಸರ್ ಸಾವಿನೊಂದಿಗೆ ತಕರಾರು ಇಲ್ಲ
ReplyDeleteಸಾವಿಗೆ ಕಿವಿ ಇಲ್ಲ
ಸಾವಿಗೆ ಕಣ್ಣು ಇದ್ದಿರಲಿಕ್ಕಿಲ್ಲ