Total Pageviews

Wednesday, September 19, 2012

‘ಅಮಲಾಪುರಂ’ದ ಅಮಲು!



                             
Two days national seminar at Amalapuram
     ನನಗೂ ಆಂಧ್ರಕ್ಕೂ ಜೀವ-ಭಾವದ ಸಂಬಂಧ. ವರ್ಷಕ್ಕೆ ಮೂರು-ನಾಲ್ಕು ಬಾರಿ  ನನ್ನ ಜೀವವನ್ನು ಹೇಗೋ ಒಂದು ದಾರಿ ಮಾಡಿಕೊಂಡು ಆಂದ್ರದೇಶಂ ಎಳೆದುಕೊಂಡೇ ಬಿಡುತ್ತದೆ. ಇದ್ದಕ್ಕಿದ್ದಂತೆ ಅಮಲಾಪುರಂನಿಂದ ರಾಷ್ಠ್ರಿಯ ವಿಚಾರ ಸಂಕಿರಣವೊಂದಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಬರಲು ಅಹ್ವಾನ ಬಂತು. ‘ಆ ಅಂಟೆ ಅಮಲಾಪುರಂ’ ಎನ್ನುತ್ತಾ ನಾನು ಮಗುವಾಗಿಬಿಟ್ಟೆ. ಗೆಳತಿ ರಾಜೇಶ್ವರಿಯ ಸಹಾಯದಿಂದ ಪ್ರಯಾಣದ ವ್ಯವಸ್ಥೆಗಳನೆಲ್ಲಾ ಮಾಡಿಕೊಂಡು ಪ್ರಯಾಣಕ್ಕೆ ಸಿದ್ಧವಾಗಿಯೇಬಿಟ್ಟೆ. ನನಗೆ ಆಂದ್ರ ಎಂದರೆ ತುಂಬು ತಾಯಂದಿರ ನೆನಪು. ಪೊದೆ-ಪೊದೆಯಾದ ಕೂದಲು, ಬಟ್ಟಲುಗಣ್ಣು, ಎರಡು ಕೈಯಲ್ಲಿ ಹಿಡಿದು ತುಟಿಯಂಚಿನಿಂದ ಸುರಿದು ಬರುವಷ್ಟು ಹಾಲು ಹಿಂಡುವ ಮೊಲೆ, ಕಪ್ಪು ನೆಲದ ಬಣ್ಣ, ಬೆಟ್ಟದಂಥ ಜಘನಗಳು, ಅಬ್ಬಾ! ಇವರೆಂದರೆ ಶುದ್ಧ ದಕ್ಷಿಣ ಭಾರತ. ಒಪ್ಪುತ್ತೀರಾ? ನೆಲದಂತೆಯೇ ಹೆಣ್ಣು. ಈ ಭಾರ ಉತ್ತರದ ಹೆಣ್ಣಿಗೆ ಸಾಧ್ಯವಿಲ್ಲ. ಅದೇನಿದ್ದರೂ ಸಪೂರಾದ ಸಮತಟ್ಟಾದ ನೆಲ.
`RAGAM' with guests
ನನ್ನ ಇಂಗ್ಲಿಷ್ ಭಾಷಣದಲ್ಲಿ ಅಮಲಾಪುರಂದಲ್ಲಿ ನಾನು ಅದಕ್ಕೆಂದೇ ಹೇಳಿದೆ, ‘ನನ್ನ ಪಾಲಿಗೆ ಆಂದ್ರವೆಂದರೆ ಹೊಟ್ಟೆ ತುಂಬಾ ಊಟ, ಮುಗ್ಧ ನಗೆ, ರಾತ್ರಿ ಹರಿಯುವ ಕನಸುಗಳು’. ಶ್ರೀಶೈಲ ದೇವಸ್ಥಾನದ ಪ್ರಧಾನ ಅರ್ಚಕನ ತಂಗಿಯಾದ ಕಾರಣಕ್ಕೆ ನನ್ನವ್ವ ನನಗೆ ಆಂದ್ರಪ್ರದೇಶವನ್ನು ಪರಿಚಯಿಸಿದಳು. ಅಲ್ಲಿ ಉಂಡು ಬೆಳೆದ ನಾನು ನನ್ನ ಸೃಜನಶೀಲತೆಯಿಂದಾಗಿ ಆಂದ್ರದ ನಿರಂತರ ಅತಿಥಿಯಾದೆ. ನನಗೂ ಆಂದ್ರಕ್ಕೂ ನಲವತ್ತು ವರ್ಷದ ನಂಟು. ಇಲ್ಲಿಯ ಶ್ರೀ ಶ್ರೀ ನನ್ನ ಅತ್ಯಂತ ಪ್ರೀತಿಯ ಸಾಹಿತಿ ಆಂದ್ರದ ಶಿವಾರೆಡ್ಡಿಯ ಕವಿತೆಗಳನ್ನು ಕುರಿತು ಮಾತನಾಡಿದವನು ನಾನು. ವಾಣಿಶ್ರೀ, ಎನ್ ಟಿ ಆರ್, ಬಾಲಸುಬ್ರಮಣ್ಯಂ, ಪುಂಡರೀಕ ಅಕ್ಷಯ ನಾನು ಬಾಲ್ಯದಲ್ಲಿದ್ದಾಗ ಶ್ರೀಶೈಲದ ನನ್ನ ಮನೆಯಲ್ಲಿ ಕಂಡ ಘಟಾನುಘಟಿಗಳು. ಹೈದರಾಬಾದಿನ ಬಾಝಾರಿನಲ್ಲಿ ನನ್ನ ಕನಸುಗಳಿವೆ. ನನ್ನ ಸಾಹಿತ್ಯದ ಅಭಿಮಾನಿ ಗೆಳೆಯ ಧರ್ಮದಾಸ ಬಾರ್ಕಿ ಹಾಗೂ ಹಿತೈಶಿ ಪ್ರೊ. ತೇಜಸ್ವಿ ಕಟ್ಟಿಮನಿ ಇಲ್ಲೆ ಎಲ್ಲೊ ಕಳೆದುಕೊಂಡಿದ್ದಾರೆ. 
`Ragam with Shrinivas Rao
    ಎನೇನೋ ಹೇಳಿದೆ, ಹೇಳಬೇಕಾದುದು ಅಮಲಾಪುರಂ ಕುರಿತು. ರಾಜಮಂಡ್ರಿಯಲ್ಲಿ ಇಳಿದು ಗೋದಾವರಿ-ಗಾಯತ್ರಿಗಳನ್ನು ದಾಟಿ, ೮೦ ಕಿಲೋಮೀಟರ್ ಸಾಗಿದರೆ ಅಮಲಾಪುರಂ ಸಿಗುತ್ತದೆ. ಎಂತಹ ಚೆಂದದ ಊರು. ಬರಡು-ಬರಡಾದ ತೆಲಂಗಾಣ, ಬೆವರು ಸುರಿಸುವ ರಾಯಲ್‌ಸೀಮೆಗಳಿಂದ ಬೆಸತ್ತಿದ್ದ ನನಗೆ ಕೊಣಸೀಮಾದ ಈ ಅಮಲಾಪುರಂ ಎಂತಹ ಅಮಲೇರಿಸಿತ್ತು ಎನ್ನುತ್ತೀರಾ?
A view of East Godavri River
 ನಾನು ಉತ್ತರದಲ್ಲಿ ನರ್ಮದೆಯ ವ್ಯಾಪ್ತಿಯನ್ನು  ನೋಡಿ ಗಾಬರಿಯಾಗಿದ್ದೆ. ಅದರಷ್ಟೇ ಅಗಲ ದಕ್ಷಿಣದ ನಮ್ಮ ಗೋದಾವರಿ. ಅಮಲಾಪುರಂ ಶದ್ಧ ಸಾಂಪ್ರದಾಯಿಕ ಊರು. ಪಕ್ಕದಲ್ಲಿಯೇ ನಿಮ್ಮ ಹೆಂಡದಿರನ್ನು ಹುಚ್ಚು ಹಿಡಿಸುವ ಸೀರೆಗಳನ್ನು ನೇಯುವ ‘ಭಂಡಾರುಲಂಕಾ’ ಇದು ಸಂಪೂರ್ಣ ಬ್ರಾಹ್ಮಣರ ದ್ವೀಪ. ಈಗ ನನಗಲ್ಲೊಬ್ಬ ಗೆಳೆಯ ಸುಬ್ಬಾರಾವ್. ಆ ಮನೆಗಳನ್ನು ನೀವು ನೋಡಿಯೇ ಅನುಭವಿಸಬೇಕು. ನಾನು ಅಮಲಾಪುರಂಕ್ಕೆ ಹೋದದ್ದು ಕೂಡ ಆಂದ್ರದ ಅತ್ಯಂತ ಹಳೆಯ ಬ್ರಾಹ್ಮಣ ಸಂಸ್ಥೆಯ ಅತಿಥಿಯಾಗಿಯೇ. ಈ ದೇಶ ಅನುಭವಿಸಲು ಮೈಮರೆಯಬೇಕಷ್ಟೆ. 
      ಅಂದಹಾಗೆ ಗೋದಾವರಿ-ಗಾಯತ್ರಿಯೊಂದಿಗೆ ನನ್ನ ಮತ್ತು ‘ಆಕೆ’ಯ ಅಪರೂಪದ ಚಿತ್ರಗಳಿವೆ. ಆಂದ್ರದಲ್ಲಿ ಹಂಬಲಿಸಿ ನನಗೆ ಚಿಕನ್ ತಿನ್ನಿಸುವ ಅಮ್ಮಂದಿರಿದ್ದಾರೆ. ಪ್ರೊ. ವಿಶ್ವನಾಥ ರಾವ್, ಸಂಜಯರಾವ್‌ರಂತಹ ಗುರು-ಬಂಧುಗಳಿದ್ದಾರೆ.
ಕಾಲ ಅನುಮತಿಸಿದರೆ ಅಮಲಾಪುರಂದ ಅಮಲನ್ನು ನೀವು ಒಮ್ಮೆ ಅನುಭವಿಸಿ. ಯಾಕೆಂದರೆ ಇದು ಆಂದ್ರದ ಹೊಟ್ಟೆಯೊಳಗಿರುವ ಕೇರಳ. ನಾವಿರುವುದು ೧+೧ ದ ಜಮಾನದಲ್ಲಿ ಅಲ್ಲವೇ?       


No comments:

Post a Comment