Total Pageviews

Tuesday, June 10, 2014

ಸಾಧು ಸಂಗ ಕೊಟ್ಟು ಎನಗೆ ಪಾರುಗಾಣಿಸಯ್ಯ ಕೊನೆಗೆ.....


     ಪೂಜ್ಯ ಮತ್ತು ಪೂಜಕ ಈರ್ವರೂ ಈಗ ಒಂದೇದ್ವೈತಕ್ಕೆ ಇಂಬಿಲ್ಲವಯ್ಯಾ.
ಕರ್ಪುರವು ಉರಿಯಲು ನಿಶ್ಯೂನ್ಯವಾಹುದಯ್ಯಾ
ಅಂತೆಯೇ ನಿಮ್ಮ ಚೇತನವು ಅಪ್ಪುದಯ್ಯಾ  

                                                       
                                                             - ಬುರಹಾನ್ ಅಲ್-ದಿನ್

     ಮೇ 12 ರಿಂದ ಜೂನ್ 12 ರ ವೇಳೆ ನನ್ನ ಬದುಕಿನ ಅತ್ಯಂತ ಮಹತ್ವದ ಘಳಿಗೆ. ಇದೊಂದು ರೀತಿ ಆತ್ಮಾವಲೋಕನದ, ದೇಹಾವಲೋಕನದ ಸ್ಥಿತಿ ಎಂದೇ ಹೇಳಬೇಕು. ಈಗೆಲ್ಲ ನನ್ನ ಕೈ ಹಿಡಿದುದು ರಿಚರ್ಡ ಈಟನ್ ಅವರ ಸೂಫೀಜ್ ಆಫ್ ಬಿಜಾಪುರ ಕೃತಿ. ಮಹತ್ವದ ಸಾಲೊಂದನ್ನು ಓದಿಬಿಟ್ಟೆ, 'ಬಿಜಾಪುರ ಸೂಫಿಗಳನ್ನು ಹುಗಿದ ಸ್ಥಳಗಳ, ಕಟ್ಟಿದ ಕಟ್ಟಡಗಳ ಸಂಖ್ಯೆ ಮೂನ್ನುರರ ಸಮೀಪ.' ವಾಕ್ಯ ಓದುತ್ತಲೇ ಕುಟುಂಬ ಕಟ್ಟಿಕೊಂಡು ಓಡಿಯೇ ಬಿಟ್ಟೆ ನನ್ನೂರಿಗೆ, ಅದನ್ನು ತನ್ನ ಗರ್ಭದಲ್ಲಿರಿಸಿಕೊಂಡ ಬಿಜಾಪುರಕ್ಕೆ. ಬೇಡವಾಗಿದ್ದ ಭಾರಗಳನ್ನು ಚಿತಾಸಾಕ್ಷಿಯಾಗಿ ಹಿಡಿದ ಕಾರಣಕ್ಕೆ ನಿಭಾಯಿಸಲು ಇಂದಿಗೂ ಹೆಣಗಾಡಿದಂತೆ ಅಂದು ನಮ್ಮಪ್ಪನ ಒಂದು ಕಾಲ ಕನಸಿನ ಹೆಗಲಾಗಿದ್ದೆ ನಾನು. ಇಂಗ್ಲೀಷ್ ಸಾಹಿತ್ಯ ಓದಬೇಕು, ಅದರೊಳಗೇ ಮಹತ್ವದ ಸಾಧನೆಯನ್ನು ಮಾಡಬೇಕು ಎನ್ನುವ ಆತನ ಕನಸಿಗೆ ಆಸರೆಯಾಗಿ ನಿಂತವರು, ನನ್ನನ್ನು ಆ ಸಾಧನೆಗೆ ಅಣಿಯಾಗಿಸಿದವರು ಇದೇ ಸೂಫಿಗಳು ಮತ್ತು ಅವರ ದರ್ಗಾಗಳು. ಬೆಳಗಿನ ಆರು ಗಂಟೆಗೆ ಬಂದು ಈ ಸ್ಥಳಗಳಲ್ಲಿ ಕುಳಿತುಕೊಳ್ಳುತ್ತಿದ್ದ ನಾನು ಮಧ್ಯಾಹ್ನದ ಮೂರು ಗಂಟೆಗೆ ಕೋಣೆ ಸೇರುತ್ತಿದ್ದೆ. ಅಂದು ನನ್ನ ಜೊತೆಯಾದ ಸೂಫಿಗಳು ಇಂದಿಗೂ ನನ್ನ ಆತ್ಮದ ಕನವರಿಕೆಯಾಗಿದ್ದಾರೆ.  

ನನಗೆ ನನ್ನ ಜನ, ನನ್ನ ಸಂಸ್ಕೃತಿ ಅಸಹ್ಯಕ್ಕೊಳಪಡುವುದು ಸಹಿಸಲಾಗದ ವಿಚಾರ. ಬಿಜಾಪುರದ ನನ್ನ ಸಾಧನೆಯ ಸ್ಥಳಗಳು, ನನ್ನ ಏಕಾಂತದ ಅಸಹಾಯಕ ಕ್ಷಣಗಳು ಎಲ್ಲ ವಿವರಿಸುತ್ತ ಶಿಶುನಾಳಕ್ಕೆ ಬಂದಾಗ ಮಬ್ಬುಗತ್ತಲೆ. ಅವನ ಕೆಲವು ಸಾಲುಗಳು -
ಬಹಳೊಂದು ಚೆಲ್ವಿಕೆ ನನ್ನ ಹೆಂಡತಿ
ಅಳು ತಾಪ ಕೇಳಿಸಿದಿ ನನ್ನ ಹೆಂಡತಿ
ಕೀಳು ಮಾತೆಲ್ಲ ಜಗದೊಳಗೆ ಮೋಹಿಸಿ
ಸೂಳೆಯೆಂದೆನಿಸಿದಿ ನನ್ನ ಹೆಂಡತಿ


 ಏಟ್ಸನ 'ಪ್ರೇಯರ್ ಟು ಮಾಯ್ ಡಾಟರ್' ನೆನಪಿಸುವ ಈ ಸಾಲುಗಳು ವರ್ತಮಾನವನ್ನು ವ್ಯಂಗಿಸುತ್ತಲೇ ನಮ್ಮ ಬದುಕುಗಳನ್ನು ತಿದ್ದುವ ಶರೀಫ, ಬದುಕಿದ್ದಾಗಲೂ ಶಿಕ್ಷಕ, ಗತಿಸಿದ ಮೇಲೂ ಶಿಕ್ಷಕ ಎನ್ನುವುದನ್ನು ಖಾತರಿ ಪಡಿಸುತ್ತವೆರ ಹೆಂಡತಿಯಾದವಳು ಹೊಸ್ತಿಲೊಳಗೆ ಇರಬೇಕಾದುದರ ಸುಖವನ್ನು ವಿವರಿಸುತ್ತದೆ.   

      ಒಂದು ವಾರದ ಅಲೆದಾಟದ ನಂತರ ಊರಿಗೆ ಬಂದಾಗ ಎಷ್ಟೊಂದು ತಾಯಂದಿರ, ಅಭಿಮಾನಿಗಳ ಹರಕೆ ಮತ್ತು ಕಾಣಿಕೆ. ಝಾನ್ಸಿ, ಮುಂಬಯಿ, ಗೋಕರ್ಣ, ಚಿಂತಾಮಣಿ ಸಾಲು ಸಾಲಾಗಿ ಹರಕೆಗಳು, ಹಾರೈಕೆಗಳು ಮತ್ತು ಕೊಡುಗೆಗಳು. ಇದನ್ನೊಂದು ಶಾಲುಗಳ ಸಂತೆಯೇ ಎನ್ನಬೇಕು. ಇನ್ನು ಹರಕೆಯ ಈ ಶಾಲುಗಳು ನನ್ನ ಬದುಕಿನ ಭಾಗಗಳೇ ಆಗಬೇಕು. ಅಷ್ಟೊಂದು ಬಂದಿವೆ, ಕೆಲವು ನಿಮ್ಮೊಂದಿಗಿವೆ. ನಿಮ್ಮ ಅಭಿಮಾನದ ಧೂಳಿನ ಕಣವಾದ ನಾನು ಅಹಂಕಾರದ ಸಂಕೇತವಾಗದೆ ಹೋದರೆ ಸಾಕು ನಾನು ಈ ದೇಶದ ಸೂಫಿಗಳನ್ನು, ಸಾಧು-ಸಂತರನ್ನು ಗೌರವಿಸಿದ್ದೇನೆ ಎಂದುಕೊಂಡಿದ್ದೇನೆ.






No comments:

Post a Comment