Total Pageviews

Wednesday, February 20, 2013

ಗಾಂಧಿ ಸಂಚಾರ: ಮೂರಕ್ಕೆ ನೂರರ ಸಂಭ್ರಮ !


ಗಾಂಧಿ ಸಂಚಾರ: ಮೂರಕ್ಕೆ ನೂರರ ಸಂಭ್ರಮ !

     ನಮ್ಮ ಗಾಂಧಿ(Gandhi) ಹೊರಟದ್ದು ಪೋರಬಂದರಿ(Porabandar)ನಿಂದಲ್ಲ, ಕರ್ನಾಟಕ(Karnataka)ದ ಸವದತ್ತಿ(Savadatti)ಯಿಂದ ಹೊರಟು ಈಗ ಬೆಂಗಳೂರಿ(Bangalore)ನೆಡೆಗೆ ಮುಖ ಮಾಡಿದ್ದಾನೆ. ನಾನೀಗ ಹೇಳುತ್ತಿರುವುದು ‘ಗಾಂಧಿ:ಅಂತಿಮ ದಿನಗಳು’ ರಂಗ ತಂಡದ ಸಂಚಾರದ ಕಥೆಯನ್ನ. ‘ಗಾಂಧಿ:ಅಂತಿಮ ದಿನಗಳು’ ಬರೆಯುವ ಮೂಲಕ ನಾನು ಕಿಡಿ ಹೊತ್ತಿಸಿದೆ. ಕಣ್ವ(Kanva) ಪ್ರಕಾಶನದ ಗೆಳೆಯ ಗಿರಿರಾಜು ಅದನ್ನು ಬೆಳಕಾಗಿಸಿದರು, ಆ ಬೆಳಕನ್ನು ರಂಗಕ್ಕಳವಡಿಸಿದವರು ರಂಗ ನಿರ್ದೇಶಕ ಗೆಳೆಯ ಮಲ್ಲಿಕಾರ್ಜುನ ಮಠದ. ಈ ಮಧ್ಯದಲ್ಲಿ ನಮ್ಮ ತಂಡದ ನಾಯಕ ಝಕೀರ ಹಾಗೂ ಮೂಲ ಕೃತಿಯನ್ನು ನಾಟಕ ರೂಪಾಂತರಗೊಳಿಸಿದ ಬಾಬಾಸಾಹೇಬ(Babasaheb) ಕಾಂಬ್ಳೆ ಇವರುಗಳನ್ನು ನಾನು ಸ್ಮರಿಸದೇ ಇರಲಿಕ್ಕಾಗುವುದಿಲ್ಲ. ಅಂತೆಯೇ ಎಲ್ಲ 26 ಜನ ಕಲಾವಿದರುಗಳನ್ನು. 

        ಸವದತ್ತಿಯ ‘ಪರಸಗಡ ನಾಟಕೋತ್ಸವ’ ದಿನದಿಂದ ತನ್ನ ಅಂತಿಮ ದಿನಗಳ ಯಾತನೆಯ ಕಥೆಯನ್ನು ಹೇಳುತ್ತ ತನ್ನ ಸಂಚಾರ ಪ್ರಾರಂಭಿಸಿದ ನಮ್ಮ ಗಾಂಧಿ. ಈ ಗಾಂಧಿಯನ್ನು, ಆತನ ತಲ್ಲಣಗಳನ್ನು ಅನಾವರಣಗೊಳಿಸಲು ನಿರ್ದೇಶಕ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಕನಿಷ್ಟ ಒಂದೂವರೆ ಲಕ್ಷ ರೂಪಾಯಿ ಹಣವನ್ನು ಸುರಿದು ನಾಲ್ಕಾರು ತಿಂಗಳು ಹಗಲು-ರಾತ್ರಿ ಹೆಣಗಾಡಿದ ರೀತಿಯನ್ನ ಪದಗಳಲ್ಲಿ ವಿವರಿಸಲಾಗದು. ನಾಲ್ಕು ಜನಗಳ ಸಂಸಾರ ನಿಭಾಯಿಸುವುದಕ್ಕೂ, 26 ಜನ ಕಲಾವಿದರ ಬವಣೆ ಭಾವನೆಗಳನ್ನು ಅರಿತುಕೊಂಡು ಒಂದು ನಾಟಕವನ್ನು ನಿರ್ದೇಶಿಸುವದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಈ ಕಾರಣಕ್ಕಾಗಿ ನೀವು ನಿರ್ದೇಶಕ ಗೆಳೆಯ ಮಠದರನ್ನು ಅಭಿನಂದಿಸಲೇಬೇಕಾಗುತ್ತದೆ.

       ಸವದತ್ತಿಯ ‘ರಂಗ ಆರಾಧನಾ’ ತಂಡ ಅನೇಕ ವೈಶಿಷ್ಟ್ಯತೆಗಳ ಒಂದು ಸಮರ್ಥ ಸಂಘಟನೆ. ನಾಟಕ ಬರೀ ಅವರ ಹವ್ಯಾಸವಲ್ಲ, ಶ್ರದ್ಧೆಯೂ ಕೂಡ. ಈ ತಂಡದಲ್ಲಿ ಅರವತ್ತರ ಹಿರಿಯರಿಂದ ಹಿಡಿದು ಹದಿನಾಲ್ಕರ ಎಳೆಯರವರೆಗೂ ರಂಗಾಸಕ್ತ ಗೆಳೆಯರಿದ್ದಾರೆ. ಕೆಲವರು ಹೃದಯ ಚಿಕಿತ್ಸೆ ಮಾಡಿಸಿಕೊಂಡವರಾದರೆ ಮತ್ತೆ ಕೆಲವರು ಮಂಡೆ ನೋವಿನಿಂದ ಗೋಳುಹೊಯ್ದುಕೊಳ್ಳುವವರೂ ಇದ್ದಾರೆ. ಆದರೆ ಗಮನಿಸಬೇಕಾದುದು ರಂಗದ ಬೆಳಕು ಹರಿದ ತಕ್ಷಣ ಅವರಲ್ಲಿ ಉಂಟಾಗುವ ಆ ವಿದ್ಯುತ್ ಸಂಚಾರ, ಆ ಮೂಲಕವೇ ಗೆಲುವು ಕಂಡದ್ದು ನಮ್ಮ ಗಾಂಧಿ ಸಂಚಾರ.

       ‘ಗಾಂಧಿ:ಅಂತಿಮ ದಿನಗಳು’ ಮೊದಲ ಪ್ರಯೋಗ ಕಂಡದ್ದು ಸವದತ್ತಿಯ ಐತಿಹಾಸಿಕ ಕೋಟೆಯಲ್ಲಿ. ಅಲ್ಲಿಯ ರಾಜಕಾರಣಿ ಮಿತ್ರರು, ವ್ಯಾಪಾರಿ ಬಂಧುಗಳು, ಹಾಗೂ ರಂಗಾಸಕ್ತರು ಈ ಪ್ರಯೋಗಕ್ಕೆ ಕಾರಣರಾದರು. 2013 ಜನೆವರಿ 4 ರ ಹೊಸ ವರ್ಷದ ಮೊದಲ ವಾರದಲ್ಲಿ ಇಂಥ ಒಂದು ಬೆಳವಣಿಗೆ ಅನೇಕ ಅರ್ಥಗಳಿಗೆ ಕಾರಣವಾಗುವುದಿಲ್ಲವೆ? ಅಂದಿನ ಪ್ರದರ್ಶನಕ್ಕೆ ಕನಿಷ್ಠ 600 ಟಿಕೇಟುಗಳು ಮಾರಾಟವಾಗಿ, ಪ್ರದರ್ಶನದ ಮಧ್ಯ ಆಗಾಗ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತ ಹೊರಟ ನಮ್ಮ ಗಾಂಧಿ ಈಗಲೂ ಅದೇ ಉಮೇದಿನಲ್ಲಿದ್ದಾನೆ. ಇದು ಇಂದಿಗೂ ಗಾಂಧಿ ಎಂಬ ಪದಕ್ಕಿರುವ ಆಕರ್ಷಣೆ.

      ಅಲ್ಲಿಂದ ಹೊರಟ ಗಾಂಧಿ ಬೆಳಗಾವಿ(Belagaum)ಗೆ ಬಂದದ್ದು ಫೆಬ್ರುವರಿ 10 ಕ್ಕೆ. ತನ್ನ ಜೀವಿತಾವಧಿಯಿಂದಲೂ ಗಾಂಧಿ ಹಾಗೂ ಈ ಬೆಳಗಾವಿಗೂ ಒಂದು ವಿಚಿತ್ರ ಸಂಬಂಧ. ಬದುಕಿದಾಗ ಒಮ್ಮೆ ಇಲ್ಲಿಗೆ ಬಂದಿದ್ದ ಗಾಂಧಿ ಇಂದು ಮತ್ತೆ ಸದಾಶಿವ ನಗರದ ಚಂದೋಡಿ(Chandodi) ಲೀಲಾ ರಂಗಮಂದಿರದಲ್ಲಿ ಮಾತಾಡಲು ಮುಂದಾಗಿದ್ದ. ಇಂದಿನ ಪ್ರಯೋಗಕ್ಕೆ ಅರ್ಥಪೂರ್ಣ ಚಾಲನೆಯನ್ನು ಕೊಟ್ಟವರು ಹಿರಿಯ ನಾಟಕಕಾರರುಗಳಾದ ಚಂದ್ರಕಾಂತ ಕುಸನೂರ(Kusanur), ಡಿ.ಎಸ್.ಚೌಗಲೆ(Chaugale) ಹಾಗೂ ಪೂಜ್ಯರಾದ ನಾಗನೂರು ಸಿದ್ಧರಾಮ ಸ್ವಾಮಿ(Siddharam Swami)ಗಳು, ಕಾರಂಜಿ ಮಠದ ಗುರುಸಿದ್ಧ ಸ್ವಾಮಿಗಳು ಮತ್ತು ಉಮಾ ಸಂಗೀತ ಶಾಲೆಯ ಮಂಗಲಾ ಮಠದ ಅವರು. ಇದು ಉಚಿತ ಪ್ರದರ್ಶನ. ಸವದತ್ತಿಯ ರಂಗ ಆರಾಧನಾ ತಂಡದ ಸಿದ್ಧಾಂತಕ್ಕೆ ಸ್ವಲ್ಪ ವಿರುದ್ಧ. ನಾಟಕಗಳು ಉಚಿತ ಪ್ರದರ್ಶನಗಳನ್ನು ಕಂಡರೆ ಅದರ ಅಸ್ಥಿತ್ವಕ್ಕೆ ಧಕ್ಕೆ ಎನ್ನುವುದು ಝಕೀರ ಅವರ ವಾದ.

   ನಮ್ಮ ಗಾಂಧಿ ಹಾಸನ(Hassan)ದ ಪ್ರತಿಷ್ಟಿತ ಹಾಸನಾಂಬ ಕಲಾಭವನಕ್ಕೆ ಬಂದದ್ದು ಫೆಬ್ರುವರಿ 18 ಕ್ಕೆ. ದ್ವಾರಕ್ಕೆ ತಳಿರು ತೋರಣ ಕಟ್ಟಿ ನೂರರ ಸಂಭ್ರಮ ಕಂಡಂತೆ ಈ ಗಾಂಧಿಯನ್ನು ಇಲ್ಲಿ ಸ್ವಾಗತಿಸಿದವರು ಹಾಸನದ ಸಾಂಸ್ಕೃತಿಕ ವೇದಿಕೆಯ ಹಿರಿಯ ಬಳಗ. 12 ವರ್ಷಗಳ ಹಿಂದೆ ಲಂಕೇಶ(Lankesh)ರ ‘ಗುಣಮುಖ’(Gunamukha) ನಾಟಕದಿಂದ ತನ್ನ ರಂಗಾಸಕ್ತಿಯನ್ನು ಪ್ರದರ್ಶಿಸುತ್ತ ಬಂದ ಈ ಬಳಗ ಈ ವರ್ಷದ ಆರಂಭಕ್ಕೆ ನಮ್ಮ ಗಾಂಧಿಯನ್ನು ಬೆಳಕಿಗೆ ತಂದರು. ರಾಜ್ಯ ರಾಜಕಾರಣದ ದಿಕ್ಕುಗಳನ್ನು ನಿರ್ಧರಿಸುವ ನಗರವೊಂದರಲ್ಲಿ ಅಧಿಕಾರದ ಯಾವ ಸ್ಥಾನವನ್ನೂ ಅಲಂಕರಿಸದೆ ರಾಷ್ಟ್ರ ರಾಜಕಾರಣ ಮಾಡಿದ ಗಾಂಧಿ ಇಲ್ಲಿ ಪ್ರದರ್ಶನ ಕಂಡದ್ದು ನನಗಂತೂ ಬಹಳ ಅರ್ಥಪೂರ್ಣವೆನಿಸಿದೆ. ಕ್ರಿಯಾಶೀಲ, ಸುಸಂಸ್ಕೃತ ಮನಸ್ಸುಗಳಾದ ಶ್ರೀ ಆರ್.ಪಿ.ವೆಂಕಟೇಶಮೂರ್ತಿ(Venkatesha murthy), ಡಾ.ಐ.ಎಂ.ಮೋಹನ, ಪ್ರೊ.ಹಂಪನಹಳ್ಳಿ ತಿಮ್ಮೇಗೌಡ, ಶ್ರೀ ಬಿ.ಎಸ್.ದೇಸಾಯಿ(B.S.Desai), ಶ್ರೀ ತಿರುಪತಿಹಳ್ಳಿ ಶಿವಶಂಕರಪ್ಪ, ಶ್ರೀ ಮಹೇಶ ಗುರು, ಪ್ರೊ.ನಾರಾಯಣ ಪ್ರಸಾದ(Narayan Prasad), ಕವಿ ಅಪ್ಪಾಜಿಗೌಡ, ಹಿರಿಯ ನಾಟಕಕಾರ ಬೇಲೂರು ಕೃಷ್ಣಮೂರ್ತಿ, ಪತ್ರಿಕಾ ಬಳಗ, ಸಾಹಿತ್ಯ ಮತ್ತು ರಂಗಾಸಕ್ತ ಬಳಗ – ಒಟ್ಟಾರೆ ಗಾಂಧಿಯೆಂಬ ಗಾಂಧಿಯ ಕಾರಣಕ್ಕೆ ಸೇರಿದ ಆ ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ನೋಡುವುದೇ ಒಂದು ಖುಷಿ. ನಿರಂತರ ಎರಡು ಗಂಟೆ ಗಂಭೀರವಾಗಿ ಕುಳಿತುಕೊಂಡು ಗಾಂಧಿಯ ಮೂಲಕ ಈ ದೇಶದ ಇತಿಹಾಸಕ್ಕೆ ಮುಖಾ-ಮುಖಿಯಾಗಲು ಬಹಳಷ್ಟು ಸಹನೆ ಬೇಕು. ಅಂದು ಸೇರಿದವರೆಲ್ಲರೂ ಈ ಸಹನೆಯ ಜನಗಳೆ. ಅಸಹನೆ, ದ್ವೇಷ, ಅಹಂಕಾರದ ಕಾರಣ ರಾಷ್ಟ್ರಗಳೇ ನಶಿಸಿ ಹೋಗುವಾಗ ಯಕಃಶ್ಚಿತ ವ್ಯಕ್ತಿಯ ಗತಿಯೇನು? ಸ್ಥಿತಿಯೇನು? ಎಂದು ಗಾಂಧಿ ಅವಲತ್ತುಕೊಳ್ಳುವಾಗ ಪ್ರೇಕ್ಷಕರ ಕಣ್ಣು ವದ್ದೆಯಾಗುವುದನ್ನು ಗಮನಿಸಿದಾಗ ನನಗನಿಸಿದ್ದು ಗಾಂಧಿ ಪ್ರಪಂಚದಲ್ಲಿ ಯಾವಾಗಲೂ ಮುಗಿಯದ ಅಧ್ಯಾಯವೆ. ಈ ಸಹನಾ ಮೂರ್ತಿ ಮುಗಿದು ಹೋದರೆ ಈ ಮನುಷ್ಯ ಪ್ರಪಂಚಕ್ಕೆ ದೊಡ್ಡ ಮಿತಿಯೇ ಬಿದ್ದಂತೆ. 

          ಅಂದಹಾಗೆ ಗಾಂಧಿ ದೊಡ್ಡ ವ್ಯಾಪಾರಿಯಲ್ಲವೆ? ವ್ಯಾಪಾರಕ್ಕೂ, ರಾಜಕಾರಣಕ್ಕೂ ಮತ್ತು ಆಧ್ಯಾತ್ಮಕ್ಕೂ ಆತ ಒಂದು ವಿಚಿತ್ರ ಬೆಸುಗೆ. ಹಾಸನದ ಪ್ರದರ್ಶನ ಉಚಿತವಾಗಿರಲಿಲ್ಲ. ಟಿಕೇಟಿನ ಬೆಲೆ 50 ರೂಪಾಯಿ. ಒಟ್ಟು ಪ್ರದರ್ಶನದ ವೆಚ್ಚ 30 ಸಾವಿರ ರೂಪಾಯಿ. ಇಷ್ಟಾಗಿಯೂ ಸಾಂಸ್ಕೃತಿಕ ವೇದಿಕೆಗೆ ಒಂದಿಷ್ಟು ಬಂಡವಾಳ ಉಳಿಸಿ ಹೋಗಿದ್ದಾನೆ ನಮ್ಮ ಗಾಂಧಿ. ಇದು ಆರೋಗ್ಯಕರ ಬೆಳವಣಿಗೆಯಲ್ಲವೆ?

      ಇನ್ನು ಕೆಲವು ದಿನಗಳಷ್ಟೆ, ರಾಜಘಾಟದಿಂದ ಎದ್ದಿರುವ ನಮ್ಮ ಗಾಂಧಿ ಇಷ್ಟರಲ್ಲಿ ರಾಜಧಾನಿಯನ್ನು ತಲಪುತ್ತಾನೆ. ಮನುಷ್ಯರಾದವರ ಮನ ಕಲಕುತ್ತಾನೆ.

No comments:

Post a Comment